ಚೇಂಜಿಂಗ್ ದಿ ಬೌಂಡರಿ ವರದಿಯಲ್ಲಿ ಸ್ಕಾಟ್ಲೆಂಡ್ ಕ್ರಿಕೆಟ್ನ ಕರಾಳ ಮುಖ ಅನಾವರಣ
ಕ್ರಿಕೆಟ್ ಸ್ಕಾಟ್ಲೆಂಡ್ ಅದರ ಆಡಳಿತ ಮಂಡಳಿ ಸಾಂಸ್ಥಿಕವಾಗಿ ವರ್ಣಭೇದ ನೀತಿಯನ್ನು ಅನುಸರಿಸಿದೆ ಎಂದು ಪ್ಲಾನ್4ಸ್ಪೋರ್ಟ್ ವರದಿ ನೀಡಿದೆ. ವರ್ಣಭೇದ ನೀತಿಯನ್ನು ಅನುಸರಿಸಿರುವ ಸ್ಕಾಟ್ಲೆಂಡ್ನ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಾದ ಸ್ಪೋರ್ಟ್ಸ್ಕಾಟ್ಲ್ಯಾಂಡ್ನಿಂದ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದೆ.
ಪ್ಲಾನ್4ಸ್ಪೋರ್ಟ್ (Plan4Sport) ತನಿಖೆಯನ್ನು ಪೂರ್ಣಗೊಳಿಸಿದ್ದು ವರದಿ ಸಲ್ಲಿಸಿದೆ. ಸಾಂಸ್ಥಿಕ ವರ್ಣಭೇದ ನೀತಿಯ 31 ಸೂಚಕಗಳಲ್ಲಿ 29 ರಲ್ಲಿ ಕ್ರಿಕೆಟ್ ಸ್ಕಾಟ್ಲೆಂಡ್ ವಿಫಲವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಸಾಂಸ್ಥಿಕ ವರ್ಣಭೇದ ನೀತಿಯ 448 ಉದಾಹರಣೆಗಳನ್ನು ವಿಮರ್ಶೆಯಲ್ಲಿ ಪಟ್ಟಿ ಮಾಡಲಾಗಿದೆ, ಇದನ್ನು ನವೆಂಬರ್ 2021 ರಿಂದ ಮಜಿದ್ ಹಕ್, ಖಾಸಿಮ್ ಶೇಖ್ ಮತ್ತು ಇತರರು 30 ಆಟಗಾರರು ಜನಾಂಗೀಯ ನಿಂದನೆಯ ಆರೋಪಗಳನ್ನು ಮಾಡಿದ ನಂತರ ನಿಯೋಜಿಸಲಾಗಿತ್ತು.
ಭಾನುವಾರ, ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿಯ ಎಲ್ಲಾ ಸದಸ್ಯರು "ಚೇಂಜಿಂಗ್ ದಿ ಬೌಂಡರಿ" ವರದಿಯನ್ನು ಪ್ರಕಟಿಸುವ ಮೊದಲು ರಾಜೀನಾಮೆ ನೀಡಿದ್ದರು. ಅಲ್ಲಿನ ಸಂಶೋಧನೆಗಳನ್ನು ಸ್ಕಾಟಿಷ್ ಕ್ರೀಡೆಗೆ ಎಚ್ಚರಿಕೆಯ ಕರೆ ಎಂದು ವಿವರಿಸಲಾಗಿದೆ.

ಧ್ವನಿ ಎತ್ತಿದವರ ವಿರುದ್ಧ ಜನಾಂಗೀಯ ನಿಂದನೆ
ವರ್ಣಭೇದ ನೀತಿಯ ವಿರುದ್ಧ ಧ್ವನಿ ಎತ್ತುವ ವ್ಯಕ್ತಿಗಳಿಗೆ ಸ್ಕಾಟಿಷ್ ಕ್ರಿಕೆಟ್ ಜನಾಂಗೀಯ ನಿಂದನೆ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ವರದಿಯು ಹೇಳಿದೆ. ಅದರ ಜೊತೆಗೆ, ವಿಮರ್ಶೆಯಲ್ಲಿ ವರ್ಣಭೇದ ನೀತಿಯ ಘಟನೆಗಳೊಂದಿಗೆ ವ್ಯವಹರಿಸುವ ಸ್ಥಳದಲ್ಲಿ ಅಸಮಂಜಸವಾದ ಕಾರ್ಯವಿಧಾನಗಳನ್ನು ಕಂಡುಕೊಂಡಿದೆ, ಆಯ್ಕೆಯ ವಿಚಾರದಲ್ಲೂ ವರ್ಣಭೇದ ನೀತಿಯನ್ನು ಅನುಸರಿಸಲಾಗಿದೆ. ಆಯ್ಕೆಗಳಲ್ಲಿ ಪಾರದರ್ಶಕತೆ ಕೊರತೆ ಇದೆ ಎಂದು ವರದಿಯಲ್ಲಿ ತಿಳಿಸಿದೆ.

ಸಮಸ್ಯೆ ಬಗೆಹರಿಸಲು ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ ವಿಫಲ
"ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ ನಾಯಕತ್ವವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲಾಗಿದೆ. ಅದು ವಿಫಲವಾದಾಗ, ಜನಾಂಗೀಯವಾಗಿ ನಿಂದಿಸುವ ಸಂಸ್ಕೃತಿಗೆ ಉತ್ತೇಜನ ನೀಡಿದಂತಾಗುತ್ತದೆ" ಎಂದು ಪ್ಲಾನ್4ಸ್ಪೋರ್ಟ್ (Plan4Sport) ನ ನಿರ್ದೇಶಕ ಲೂಯಿಸ್ ಟೈಡ್ಸ್ವೆಲ್ ಹೇಳಿದ್ದಾರೆ.
"ಆದರೆ ನಾನು ಸಂಘಟನೆಯ ಆಡಳಿತ ಮತ್ತು ನಾಯಕತ್ವದ ಅಭ್ಯಾಸಗಳು ಸಾಂಸ್ಥಿಕವಾಗಿ ವರ್ಣಭೇದ ನೀತಿಯನ್ನು ಅನುಸರಿಸಿದರು, ಸ್ಕಾಟ್ಲೆಂಡ್ನ ಕ್ರಿಕೆಟ್ಗೆ ಅದೇ ರೀತಿ ಹೇಳಲಾಗುವುದಿಲ್ಲ. ವೈವಿಧ್ಯಮಯ ಸಮುದಾಯಗಳೊಂದಿಗೆ ನಿಜವಾಗಿಯೂ ತೊಡಗಿಸಿಕೊಳ್ಳುವ ಸ್ಥಳೀಯ ಕಾರ್ಯಕ್ರಮಗಳನ್ನು ನೀಡುವ ಅನೇಕ ಅತ್ಯುತ್ತಮ ಕ್ಲಬ್ ಮತ್ತು ವ್ಯಕ್ತಿಗಳು ಇದ್ದಾರೆ. " ಎಂದು ಅವರು ಹೇಳಿದ್ದಾರೆ.

ಸೆಪ್ಟಂಬರ್ ವೇಳೆಗೆ ನೂತನ ಕ್ರಿಕೆಟ್ ಮಂಡಳಿ ಸ್ಥಾಪನೆ
ಸ್ಪೋರ್ಟ್ಸ್ಕಾಟ್ಲ್ಯಾಂಡ್ ಅಕ್ಟೋಬರ್ 2023 ರವರೆಗೆ ಪರಿಣಾಮಕಾರಿಯಾಗಿ ಕ್ರಿಕೆಟ್ ಸ್ಕಾಟ್ಲ್ಯಾಂಡ್ ಅನ್ನು ನಡೆಸುತ್ತದೆ ಆದರೆ ಸೆಪ್ಟೆಂಬರ್ 2022 ರೊಳಗೆ ಹೊಸ ಕ್ರಿಕೆಟ್ ಮಂಡಳಿಯನ್ನು ಸ್ಥಾಪಿಸಬೇಕು ಮತ್ತು ಹೊಸ ಕ್ರಿಕೆಟ್ ಮಂಡಳಿಯಲ್ಲಿ ಕನಿಷ್ಠ ಶೇಕಡ 25 ರಷ್ಟು ಅಲ್ಪಸಂಖ್ಯಾತ ಸಮುದಾಯದ ಪುರುಷರು ಮತ್ತು ಶೇಕಡ 40 ರಷ್ಟು ಮಹಿಳೆಯರನ್ನು ಒಳಗೊಂಡಿರಬೇಕು ಎಂದು ಸೂಚಿಸಿದೆ.
"ನಾವೆಲ್ಲರೂ ಪ್ರೀತಿಸುವ ಕ್ರೀಡೆಯಲ್ಲಿ ನಡೆದಿರುವ ವರ್ಣಭೇದ ನೀತಿ ಮತ್ತು ತಾರತಮ್ಯ ಮುಂದಿನ ದಿನಗಳಲ್ಲಿ ಎಂದಿಗೂ ಸಂಭವಿಸಲು ಅವಕಾಶ ನೀಡಬಾರದು" ಎಂದು ಕ್ರಿಕೆಟ್ ಸ್ಕಾಟ್ಲೆಂಡ್ನ ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಾರ್ಡನ್ ಆರ್ಥರ್ ಹೇಳಿದ್ದಾರೆ.

ತಾರತಮ್ಯಕ್ಕೆ ಬಲಿಯಾದವರ ಬಳಿ ಕ್ಷಮೆಯಾಚನೆ
"ಸ್ಕಾಟಿಷ್ ಕ್ರಿಕೆಟ್ನಲ್ಲಿ ವರ್ಣಭೇದ ನೀತಿ ಮತ್ತು ತಾರತಮ್ಯಕ್ಕೆ ಬಲಿಯಾದ ಎಲ್ಲರಿಗೂ ನಾನು ಮತ್ತೊಮ್ಮೆ ಹೃತ್ಪೂರ್ವಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ಇದು ವ್ಯಕ್ತಿಗಳು ಮತ್ತು ಅವರ ಕುಟುಂಬದ ಮೇಲೆ ಬೀರುವ ಪರಿಣಾಮದ ಬಗ್ಗೆ ನಮಗೆ ಅರಿವಿದೆ. ಈ ವರದಿಯು ಅವರಿಗೆ ಸ್ವಲ್ಪ ಭರವಸೆ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ. ಅವರ ಕೂಗಿಗೆ ಬೆಲೆ ಸಿಕ್ಕಿದೆ, ಆದರೆ ಅದು ತಡವಾಗಿದ್ದಕ್ಕೆ ವಿಷಾದಿಸುತ್ತೇವೆ" ಎಂದು ಗಾರ್ಡನ್ ಆರ್ಥರ್ ಹೇಳಿದ್ದಾರೆ.
"ಈ ವರದಿಯು ಸ್ಕಾಟ್ಲೆಂಡ್ನಲ್ಲಿ ಕ್ರಿಕೆಟ್ಗೆ ಪರ್ವಕಾಲವಾಗಿದೆ ಮತ್ತು ಅದರ ಶಿಫಾರಸುಗಳನ್ನು ಮುಂದಕ್ಕೆ ಕೊಂಡೊಯ್ಯುವುದು ಮುಖ್ಯ. ಗಮನಾರ್ಹವಾದ ಸಾಂಸ್ಕೃತಿಕ ಬದಲಾವಣೆಯು ಸಂಭವಿಸಬೇಕು ಮತ್ತು ಅದು ಬೇಗ ಸಂಭವಿಸಬೇಕು ಎಂಬುದು ಸ್ಪಷ್ಟವಾಗಿದೆ. ಉಲ್ಲೇಖಿತ ಪ್ರಕ್ರಿಯೆಯನ್ನು ಒಪ್ಪಿಕೊಂಡು ತಕ್ಷಣ ಜಾರಿಗೆ ತರಲು ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
"ಕ್ರಿಕೆಟ್ ಆಟದಲ್ಲಿ ವರ್ಣಭೇದ ನೀತಿ ಮತ್ತು ಯಾವುದೇ ರೀತಿಯ ತಾರತಮ್ಯ ಸಹಿಸುವುದಿಲ್ಲ. ಎಲ್ಲರಿಗೂ ಸ್ವಾಗತ ಮತ್ತು ಸಮಾನ ಅವಕಾಶಗಳಿಗೆ ಪ್ರವೇಶವಿರುವ ಕ್ರಿಕೆಟ್ ಕ್ರೀಡೆಯಲ್ಲಿ ಎಲ್ಲರನ್ನೂ ಒಳಗೊಳ್ಳುವಿಕೆಯ ಸಂಸ್ಕೃತಿ ನಿರ್ಮಿಸಲು ಮತ್ತು ಬೆಳೆಸಲು ನಾವು ದೃಢಸಂಕಲ್ಪ ಹೊಂದಿದ್ದೇವೆ. ಹಿಂದಿನ ಸಮಸ್ಯೆಯನ್ನು ಪರಿಹರಿಸಬೇಕು, ಕ್ರೀಡೆಯನ್ನು ಸರಿಪಡಿಸಬೇಕು ಮತ್ತೆ ಈ ರೀತಿಯ ತಪ್ಪುಗಳು ನಡೆಯಬಾರದು. ಈ ಬದಲಾವಣೆ ತರಲು ನಮಗೆ ಎಲ್ಲರ ಸಹಕಾರ ಬೇಕು ಎಂದು ಕೇಳಿದ್ದಾರೆ.
-
IPL 2026 Full Schedule: ಐಪಿಎಲ್ 2026ರ ಸಂಪೂರ್ಣ ವೇಳಾಪಟ್ಟಿ ಪ್ರಕಟ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ












Click it and Unblock the Notifications