ಸಾಗರದಲ್ಲಿ ರಸ್ತೆ ಅಪಘಾತ: ಮೂವರ ದುರ್ಮರಣ
ಶಿವಮೊಗ್ಗ, ಮಾರ್ಚ್ 08: ಸಾಗರದ ರಾಷ್ಟ್ರೀಯ ಹೆದ್ದಾರಿ ಕಾಸ್ಪಾಡಿ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಸಿದ್ದಪ್ಪ(40), ಜಿ.ತಿಪ್ಪಣ್ಣ(60), ವೆಂಕಟೇಶ(55) ಮೃತರು ರಾಯಚೂರಿನ ಶಕ್ತಿನಗರದ ಆರ್ ಪಿಟಿಸಿಎಲ್ ಉದ್ಯೋಗಿಗಳಾಗಿದ್ದಾರೆ. ಮತ್ತೊರ್ವ ಗಾಯಾಳು ನಾಗರಾಜ್ ಎಂದು ಗುರುತಿಸಲಾಗಿದೆ.

ರಾಯಚೂರಿನಿಂದ ಕಾರ್ಗಲ್ ಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.












Click it and Unblock the Notifications