ಶಿವಮೊಗ್ಗ: ಮಕ್ಕಳ ದಸರಾದಲ್ಲಿ ಬುಗರಿ, ಪಗಡೆಯಾಟ
ಶಿವಮೊಗ್ಗ, ಸೆ. 24: ನಗರದ ಪ್ರಮುಖ ವೃತ್ತ, ರಸ್ತೆಗಳು ಶನಿವಾರ ಎಂದಿಗಿಂತ ಭಿನ್ನವಾಗಿದ್ದವು. ಪ್ರತಿದಿನ ವಾಹನದಟ್ಟಣೆಯಿಂದ ತುಂಬಿ ಹೋಗುತ್ತಿದ್ದ ರಸ್ತೆಗಳು ಇಂದು ಮಾತ್ರ ಮಕ್ಕಳಿಂದ ತುಂಬಿದ್ದವು. ನಗರದ ಸಾವಿರಾರು ಮಕ್ಕಳು ಒಂದೆಡೆ ಸೇರಿ ನಲಿದಾಡಿದರು. ತಮಗಿಷ್ಟ ಬಂದಂತೆ ಸಂಭ್ರಮಿಸಿ ದಿನವನ್ನು ಸಂತೋಷವಾಗಿ ಕಳೆದರು.
ಹೌದು, ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ದಸರಾ ಮಹೋತ್ಸವದಲ್ಲಿ ಮಕ್ಕಳ ದಸರಾ ಜಾತ್ರೆ ಕಳೆಗಟ್ಟಿತ್ತು. ಮಕ್ಕಳ ದಸರಾದಲ್ಲಿ ಚಿಣ್ಣರ ಸಂಭ್ರಮ ಹೇಳತೀರದಾಗಿತ್ತು.
ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳಲ್ಲಿ ದಸರಾ ಹಬ್ಬದ ಸಂಭ್ರಮ ಇಮ್ಮಡಿಸಿತ್ತು. ಹಬ್ಬಕ್ಕಿಂತ ಮೊದಲೇ ದಸರಾ ಮಕ್ಕಳ ಮನಸೂರೆಗೊಂಡಿತು.
ನಗರದ ಶಿವಪ್ಪನಾಯಕ ವೃತ್ತದ ಬಳಿ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳ ಸಮ್ಮುಖದಲ್ಲಿ ಮಕ್ಕಳ ದಸರಾ ಮೆರವಣಿಗೆಗೆ ಚಾಲನೆ ನೀಡಲಾಯಿತು.
ನಗರದ ಶಿವಪ್ಪ ನಾಯಕ ವೃತ್ತದಿಂದ ಹೊರಟ ಮಕ್ಕಳ ದಸರಾ ಉತ್ಸವದ ಮೆರವಣಿಗೆ ಕುವೆಂಪು ರಂಗಮಂದಿರವನ್ನು ತಲುಪಿತು. ರಂಗ ಮಂದಿರ ಆವರಣಕ್ಕೆ ಆಗಮಿಸಿದ ವಿದ್ಯಾರ್ಥಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಕುವೆಂಪು ರಂಗಮಂದಿರದ ಆವರಣದಲ್ಲಿ ಮಕ್ಕಳ ದಸರಾ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಹಗ್ಗದ ಮೇಲಿನ ನಡಿಗೆ, ಎತ್ತಿನ ಗಾಡಿ ಸವಾರಿ, ಕುದುರೆ ಸವಾರಿ, ಶೂಟಿಂಗ್, ಶ್ವಾನ ಪ್ರದರ್ಶನ, ಜಾದು, ನೃತ್ಯ ಪ್ರದರ್ಶನ, ಸೂತ್ರ ಸಲಾಕಿ ಗೊಂಬೆಯಾಟ, ಮಕ್ಕಳ ಚಿತ್ರಸಂತೆ, ಅಗ್ನಿ ಅವಘಡ ಅಣುಕು ಪ್ರದರ್ಶನ ಮೊದಲಾದವು ಮಕ್ಕಳ ಮನಸೂರೆಗೊಂಡವು.

ಅರಿವು ಮೂಡಿಸುವ ಕಾರ್ಯಕ್ರಮ
ಕೆಲವು ಕಾರ್ಯಕ್ರಮಗಳು ಮಕ್ಕಳಿಗೆ ಅರಿವು ಮೂಡಿಸುವಲ್ಲಿ ನೆರವಾಗುವುದರ ಜತೆಗೆ ರಂಜಿಸಿದವು. ಅಯ್ದ ಶಾಲೆಗಳ ಮಕ್ಕಳಿಂದ ಆಯೋಜಿಸಿದ್ದ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು. ಅಲ್ಲದೆ ಎತ್ತಿನ ಗಾಡಿ, ಟಾಂಗಾ, ಕುದುರೆ ಸವಾರಿ, ಸಾಹಸ ಕ್ರೀಡೆಗಳು, ಗ್ರಾಮೀಣ ಕ್ರೀಡೆಗಳು ವಿನೋದದ ಆಟದಲ್ಲಿ ಪಾಲ್ಗೊಂಡ ಮಕ್ಕಳು ಸಂಭ್ರಮಿಸಿದರು.

ಅಮೋಘ ಕೃಷ್ಣ ಮಾತನಾಡಿ
ವಿವಿಧ ಶಾಲೆಗಳ ಹೆಚ್ಚಿನ ಸಂಖ್ಯೆಯ ಮಕ್ಕಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಮಕ್ಕಳ ದಸರಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡ್ರಾಮಾ ಜೂನಿಯರ್ ಖ್ಯಾತಿಯ ಕಲಾವಿದ ಅಮೋಘ ಕೃಷ್ಣ ಮಾತನಾಡಿ, ಪಠ್ಯ ಚಟುವಟಿಕೆಗಳ ಜತೆಗೆ ಸಹಪಠ್ಯ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ಸದಭಿರುಚಿಯ ಯಾವುದೇ ರೀತಿಯ ಸಹಪಠ್ಯ ಚಟುವಟಿಕೆಗಳಿಂದ, ಪಡೆಯುವ ಶಿಕ್ಷಣಕ್ಕೆ ಹೊಸ ಆಯಾಮವನ್ನೇ ನೀಡಲಿದೆ ಎಂದರು.

ನಾನಾ ರೀತಿಯ ಚಟುವಟಿಕೆಗಳು
ಸಂಗೀತ, ಸಾಹಿತ್ಯ, ನೃತ್ಯ, ನಾಟಕ, ಕ್ರೀಡೆ ಹೀಗೆ ನಾನಾ ರೀತಿಯ ಚಟುವಟಿಕೆಗಳು ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಗೆ ಸಹಕಾರಿಯಾಗಿದೆ. ನಿಶ್ಚಿತವಾದ ಗುರಿ ಹಾಗೂ ಆ ಗುರಿ ಸಾಧನೆಯ ಪರಿಶ್ರಮ ಇದ್ದರೆ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಸಲು ಸಾಧ್ಯ. ಡ್ರಾಮಾ ಜ್ಯೂನಿಯರ್ ತನ್ನ ಸಾಂಸ್ಕೃತಿಕ ಬದುಕಿನ ಮಹತ್ವದ ತಿರುವು ಎಂದ ಅಮೋಘ ಕೃಷ್ಣ

ಶಾಲೆಯ ಹೊರಗಿನ ಪಠ್ಯ
ಇದು ಒಂದು ರೀತಿಯಲ್ಲಿ ಶಾಲೆಯ ಹೊರಗಿನ ಪಠ್ಯ, ವೈವಿಧ್ಯಮಯ ಪಾತ್ರಗಳ ಮೂಲಕ ಬಹುದೊಡ್ಡ ಪಾಠ ಕಲಿತ್ತಿದ್ದೇನೆ. ಮಕ್ಕಳಲ್ಲಿನ ಪ್ರತಿಭೆಗೆ ಇದೊಂದು ಸೂಕ್ತ ವೇದಿಕೆ ಎಂದರು.
ಈ ಬಾರಿಯ ಎಸ್ಎಸ್ಎಲ್ಸಿ ಟಾಪರ್ ಸುಭಾಷಿಣಿ ಮಕ್ಕಳ ದಸರಾಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಕರು, ಪೋಷಕರು ಮಕ್ಕಳ ಬಗ್ಗೆ ಅವರದೇ ಆದ ಕನಸುಗಳನ್ನು ಕಟ್ಟಿಕೊಂಡಿದ್ದಾರೆ.
ರಾಮಕೃಷ್ಣ ವಿದ್ಯಾಸಂಸ್ಥೆ
ಇದನ್ನು ಸಾಧನೆಯ ಮೂಲಕ ಈಡೇರಿಸಬೇಕಾದ ಜವಾಬ್ದಾರಿ ಮಕ್ಕಳ ಮೇಲಿದೆ. ತಾವು ಕಲಿತ ರಾಮಕೃಷ್ಣ ವಿದ್ಯಾಸಂಸ್ಥೆಯ ವಾತಾವರಣದಿಂದಾಗಿ ಕನ್ನಡ ಮಾತೃಭಾಷೆ ಅಲ್ಲದಿದ್ದರೂ, ಕನ್ನಡವೂ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಪೂರ್ಣಾಂಕ ಪಡೆಯಲು ಸಾಧ್ಯವಾದದ್ದು ಶಾಲೆಯ ಶಿಕ್ಷಕರು, ಪ್ರಾಂಶುಪಾಲರು ನೀಡಿದ ಸಹಕಾರ ಕಾರಣ ಎಂದು ಸ್ಮರಿಸಿದರು.

ಮೇಯರ್ ಏಳುಮಲೈ ಅಧ್ಯಕ್ಷತೆ
ಪಾಲಿಕೆ ಮೇಯರ್ ಏಳುಮಲೈ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಯುಕ್ತ ಮುಲ್ಲೈ ಮುಹಿಲಿನ್ ಹಾಗೂ ಪಾಲಿಕೆಯ ಎಲ್ಲಾ ಸದಸ್ಯರು ಅಕಾರಿಗಳು ಉಪಸ್ಥಿತರಿದ್ದರು. ಸಹನಾ ಚೇತನ್ ನಿರೂಪಿಸಿದರು. ಮಕ್ಕಳ ದಸರಾ ಕಾರ್ಯಕ್ರಮದ ಅಧ್ಯಕ್ಷೆ ಸುರೇಖ ಮುರಳೀಧರ್ ಸ್ವಾಗತಿಸಿದರು. ಗೌರಿ ಶ್ರೀನಾಥ್ರಿಂದ ವಂದಿಸಿದರು.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications