ಶಿವಮೊಗ್ಗ ಡಿಸಿ ಕಚೇರಿ ಮುಂದೆ ಮಜ್ಜಿಗೆ ಮಾರಾಟ ಮಾಡಿದ ಅತಿಥಿ ಉಪನ್ಯಾಸಕರು
ಶಿವಮೊಗ್ಗ, ಡಿಸೆಂಬರ್ 22: ಸೇವೆ ಖಾಯಂಗೆ ಒತ್ತಾಯಿಸಿ ಅತಿಥಿ ಉಪನ್ಯಾಸಕರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಮಜ್ಜಿಗೆ ಮಾರಾಟ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಜ್ಜಿಗೆ ಮಾರಾಟ ಮಾಡಿದ ಜಿಲ್ಲೆಯ ಅತಿಥಿ ಉಪನ್ಯಾಸಕರು, ವಿವಿಧ ಕೆಲಸದ ನಿಮಿತ್ತ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗೆ ಬಂದಿದ್ದವರಿಗೆ ಮಜ್ಜಿಗೆ ವಿತರಿಸಿದರು. ಪ್ರತಿ ಗ್ಲಾಸ್ಗೆ ಐದು ರೂ.ನಂತೆ ಸಂಗ್ರಹಿಸಿ ಮಜ್ಜಿಗೆ ಮಾರಾಟ ಮಾಡಲಾಯಿತು.
ಸೇವೆ
ಖಾಯಂಗೆ
ಆಗ್ರಹ
ಸೇವೆ
ಖಾಯಂಗೆ
ಒತ್ತಾಯಿಸಿ
ಅತಿಥಿ
ಉಪನ್ಯಾಸರು
ಬಹುವರ್ಷದಿಂದ
ಪ್ರತಿಭಟನೆ
ನಡೆಸುತ್ತಿದ್ದಾರೆ.
ಆದರೆ
ಈವರೆಗೂ
ಸರ್ಕಾರ
ಯಾವುದೇ
ಕ್ರಮ
ಕೈಗೊಂಡಿಲ್ಲ.
ಬೆಳಗಾವಿಯಲ್ಲಿ
ಚಳಿಗಾಲದ
ಅಧಿವೇಶನದ
ಸಂದರ್ಭದಲ್ಲಿ
ಸಾವಿರಾರು
ಅತಿಥಿ
ಉಪನ್ಯಾಸಕರು
ಪ್ರತಿಭಟನೆ
ನಡೆಸಿದರೂ
ಪ್ರಯೋಜನವಾಗಿಲ್ಲ.
ಹಾಗಾಗಿ
ರಾಜ್ಯಾದ್ಯಂತ
ಎಲ್ಲಾ
ಜಿಲ್ಲಾ
ಕೇಂದ್ರದಲ್ಲೂ
ಪ್ರತಿಭಟನೆ
ನಡೆಸಲಾಗುತ್ತಿದೆ
ಎಂದು
ಅತಿಥಿ
ಉಪನ್ಯಾಸಕರ
ರಾಜ್ಯ
ಸಮನ್ವಯ
ಸಮಿತಿ
ಅಧ್ಯಕ್ಷ
ಸೋಮಶೇಖರ
ಶಿವಮೊಗ್ಗಿ
ತಿಳಿಸಿದರು.
ಇದೆ ವೇಳೆ ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮುಂದುವರೆಯಲಿದೆ
ಪ್ರತಿಭಟನೆ
ಅತಿಥಿ
ಉಪನ್ಯಾಸಕರ
ಸೇವೆ
ಖಾಯಂಗೊಳಿಸುವಂತೆ
ಹೋರಾಟವನ್ನು
ಮತ್ತಷ್ಟು
ತೀವ್ರಗೊಳಿಸಲು
ರಾಜ್ಯ
ಸಮನ್ವಯ
ಸಮಿತಿ
ತೀರ್ಮಾನಿಸಿದೆ.
ಈಗಾಗಲೇ
ತರಗತಿಗಳನ್ನು
ಬಹಿಷ್ಕರಿಸಿ
ಪ್ರತಿಭಟನೆ
ನಡೆಸಲಾಗುತ್ತಿದೆ.
ಬೆಳಗಾವಿ
ಸುವರ್ಣ
ಸೌಧದ
ಮುಂಭಾಗ
ಸಾವಿರಾರು
ಅತಿಥಿ
ಉಪನ್ಯಾಸಕರು
ಪ್ರತಿಭಟನೆ
ನಡೆಸಿ,
ಸರ್ಕಾರಕ್ಕೆ
ಮನವಿ
ಸಲ್ಲಿಸಿದ್ದರು.
ಈತನಕ
ಯಾವುದೇ
ಭರವಸೆ
ಸಿಗದ
ಹಿನ್ನೆಲೆ
ಅತಿಥಿ
ಉಪನ್ಯಾಸಕರು
ಪ್ರತಿಭಟನೆ
ಮುಂದುವರೆಸಿದ್ದಾರೆ.
ಅತಿಥಿ
ಉಪನ್ಯಾಸಕರ
ಪರ
ವಿದ್ಯಾರ್ಥಿಗಳ
ಪ್ರತಿಭಟನೆ
ಅತಿಥಿ
ಉಪನ್ಯಾಸಕರ
ಸಮಸ್ಯೆ
ಬಗೆಹರಿಸುವಂತೆ
ಆಗ್ರಹಿಸಿ
ಶಿವಮೊಗ್ಗ
ಜಿಲ್ಲೆಯ
ಸಾಗರದಲ್ಲಿಯೂ
ವಿದ್ಯಾರ್ಥಿಗಳು
ಪ್ರತಿಭಟನೆ
ನಡೆಸಿದರು.
ಇಂದಿರಾ
ಗಾಂಧಿ
ಸರ್ಕಾರಿ
ಪ್ರಥಮ
ದರ್ಜೆ
ಮಹಿಳಾ
ಕಾಲೇಜು
ವಿದ್ಯಾರ್ಥಿನಿಯರು
ತರಗತಿಗಳನ್ನು
ಬಹಿಷ್ಕರಿಸಿ
ಪ್ರತಿಭಟನಾ
ಮೆರವಣಿಗೆ
ನಡೆಸಿದರು.
ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಪದವಿ ಕಾಲೇಜುಗಳಲ್ಲಿ ಪೂರ್ಣಕಾಲಿಕ ಉಪನ್ಯಾಸಕರ ಕೊರತೆ ಇದೆ. ಅತಿಥಿ ಉಪನ್ಯಾಸಕರಿಂದಲೇ ಬಹುತೇಕ ಕಾಲೇಜುಗಳು ನಡೆಯುತ್ತಿವೆ. ಆದರೆ ಡಿಸೆಂಬರ್ 10ರಿಂದ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿದ್ದಾರೆ. ಇದರಿಂದ ತಮ್ಮ ಕಲಿಕೆಗೆ ತೊಡಕಾಗುತ್ತಿದೆ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಬಗೆಹರಿಸಬೇಕು. ಆದರೆ ಈತನಕ ಈ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಇದನ್ನು ಗಮನಿಸಿದಾಗ ಸರ್ಕಾರ ತಮ್ಮ ಶಿಕ್ಷಣದ ಹಕ್ಕು ಕಸಿಯಲು ಯತ್ನಿಸುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವಿದ್ಯಾರ್ಥಿನಿಯರು ಎಚ್ಚರಿಸಿದರು.
ಉಪ ವಿಭಾಗಾಧಿಕಾರಿ ಕಚೇರಿವರೆಗೂ ವಿದ್ಯಾರ್ಥಿನಿಯರು ಮೆರವಣಿಗೆ ನಡೆಸಿದರು. ಉಪ ವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ವಿದ್ಯಾರ್ಥಿನಿಯರಾದ ಅಂಜಲಿ, ಅಮೃತಾ, ಪಲ್ಲವಿ, ರಂಜಿತಾ, ಚಿತ್ರಾ, ಶಾಂತಲಾ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಹಿರಿಯೂರಿನಲ್ಲಿಯೂ
ವಿದ್ಯಾರ್ಥಿಗಳ
ಪ್ರತಿಭಟನೆ
ಚಿತ್ರದುರ್ಗ
ಜಿಲ್ಲೆಯ
ಹಿರಿಯೂರು
ನಗರದ
ವಾಣಿ
ಹಾಗೂ
ವೇದಾವತಿ
ಪ್ರಥಮ
ದರ್ಜೆ
ಕಾಲೇಜಿನ
ವಿದ್ಯಾರ್ಥಿಗಳು
ಪೂರ್ಣ
ಪ್ರಮಾಣದ
ತರಗತಿಗಳನ್ನು
ನಡೆಸಲು
ಕ್ರಮ
ಕೈಗೊಳ್ಳುವಂತೆ
ಒತ್ತಾಯಿಸಿ
ತಹಶೀಲ್ದಾರ್ಗೆ
ಮನವಿ
ಸಲ್ಲಿಸಿದರು.