Breaking: ಜಾರ್ಖಂಡ್: ಇಡಿ ದಾಳಿ ವೇಳೆ ಎರಡು ಎಕೆ-47 ರೈಫಲ್ ವಶ
ರಾಂಚಿ, ಆಗಸ್ಟ್ 24: 100 ಕೋಟಿ ಗಣಿ ಹಗರಣದ ತನಿಖೆಯ ಭಾಗವಾಗಿ ನಡೆಯುತ್ತಿರುವ ದಾಳಿಯ ವೇಳೆ ಜಾರಿ ನಿರ್ದೇಶನಾಲಯ (ಇಡಿ) ಜಾರ್ಖಂಡ್ನ ರಾಂಚಿಯ ಮನೆಯೊಂದರಿಂದ ಎರಡು ಎಕೆ-47 ರೈಫಲ್ಗಳನ್ನು ವಶಪಡಿಸಿಕೊಂಡಿದೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಪ್ರೇಮ್ ಪ್ರಕಾಶ್ ಅವರಿಗೆ ಹಗರಣದಲ್ಲಿ ನಂಟು ಇದೆ ಎಂದು ಹೇಳಲಾಗಿದ್ದು, ದಾಳಿ ವೇಳೆ ಪ್ರೇಮ್ ಪ್ರಕಾಶ್ ಅವರ ಮನೆಯಿಂದ ಇಡಿ ಎಕೆ 47 ಅನ್ನು ವಶಪಡಿಸಿಕೊಂಡಿದೆ.
ಈ ಬಂದೂಕುಗಳು ಕಾನೂನುಬಾಹಿರವೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ, ಆದರೆ ಕೇಂದ್ರ ಸಂಸ್ಥೆ ಅವುಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ಬಗ್ಗೆ ಪ್ರಕಾಶ್ ಆಗಲಿ, ಸೋರೆನ್ ಆಗಲಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಜಾರ್ಖಂಡ್, ನೆರೆಯ ಬಿಹಾರ, ತಮಿಳುನಾಡು ಮತ್ತು ದೆಹಲಿ-ಎನ್ಸಿಆರ್ನ 20 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸುತ್ತಿದೆ. 100 ಕೋಟಿ ಗಣಿ ಹಗರಣದ ಪ್ರಕರಣವು ಪ್ರಾಥಮಿಕವಾಗಿ ಅಕ್ರಮ ಗಣಿಗಾರಿಕೆ ಮತ್ತು ಸುಲಿಗೆಗೆ ಸಂಬಂಧಿಸಿದೆ.
ಮುಖ್ಯಮಂತ್ರಿ ಸೋರೆನ್ ಅವರ ರಾಜಕೀಯ ಸಹಾಯಕರಾದ ಪಂಕಜ್ ಮಿಶ್ರಾ ಮತ್ತು ಶ್ರೀಮಿಶ್ರಾ ಅವರ ಸಹವರ್ತಿ ಬಚ್ಚು ಯಾದವ್ ಅವರು ಇಡಿಗೆ ಹೊಸ ಮಾಹಿತಿಯನ್ನು ನೀಡಿದ ನಂತರ ಬುಧವಾರ ಶೋಧಕಾರ್ಯ ನಡೆದಿವೆ. ಅವರು ದೀರ್ಘಕಾಲದಿಂದ ಬಂಧನದಲ್ಲಿದ್ದಾರೆ.
ಜುಲೈ8 ರಂದು ಜಾರ್ಖಂಡ್ನಾದ್ಯಂತ ಪಂಕಜ್ ಮಿಶ್ರಾ ಮತ್ತು ಅವರ ಸಹಚರರ ಸ್ಥಳಗಳು ಸೇರಿದಂತೆ 19 ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿತು. ತನಿಖಾ ಸಂಸ್ಥೆಯು ಮಾರ್ಚ್ನಲ್ಲಿ ಶ್ರೀಮಿಶ್ರಾ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿತ್ತು.
ಜುಲೈ ದಾಳಿಯ ನಂತರ ಇಡಿ 50 ಬ್ಯಾಂಕ್ ಖಾತೆಗಳಲ್ಲಿ ₹ 13.32 ಕೋಟಿಯನ್ನು ವಶಪಡಿಸಿಕೊಂಡಿದೆ. ಅಕ್ರಮ ಗಣಿಗಾರಿಕೆಯಿಂದ ₹ 100 ಕೋಟಿಯಷ್ಟು 'ಅಪರಾಧದ ಆದಾಯ'ದ ಜಾಡು ಹಿಡಿದು ತನಿಖೆ ನಡೆಸುತ್ತಿರುವುದಾಗಿ ಇಡಿ ಹೇಳಿತ್ತು.











Click it and Unblock the Notifications