ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಖ್ಯಾತ ರೌಡಿಗೆ ಗುಂಡು ಹಾರಿಸಿದ ಮಾಗಡಿ ಸರ್ಕಲ್ ಇನ್ಸ್ ಪೆಕ್ಟರ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 15: ಕುದೂರು ಠಾಣೆ ಪೊಲೀಸ್ ಪೇದೆ ವೀರಭದ್ರ ಅವರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನ ಮಾಡಿದ ವೇಳೆ ಮಾಗಡಿ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ಕುಖ್ಯಾತ ರೌಡಿ ಕಿರಣ್ ಎಡಗಾಲಿಗೆ ಗುಂಡು ಹಾರಿಸಿದ್ದಾರೆ.

20 ದಿನಗಳ ಕೆಳಗೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಗ್ರಾಮದ ನಿವಾಸಿ‌ ಲೋಕನಾಥ್ ಎಂಬುವವರ ಮನೆಯಲ್ಲಿ ಕಿರಣ್ ಅಲಿಯಾಸ್ ತಮಾಣೆ ಡಕಾಯಿತಿ ಮಾಡಿದ್ದನು.

Magadi Circle Inspector Firing On Rowdy Sheeter In Kengeri

ಚನ್ನಪಟ್ಟಣದಲ್ಲಿ ತಡರಾತ್ರಿ ಫೈರಿಂಗ್; ಮರ್ಡರ್ ಮಾಡಲು ಬಂದಿದ್ದ ರೌಡಿಚನ್ನಪಟ್ಟಣದಲ್ಲಿ ತಡರಾತ್ರಿ ಫೈರಿಂಗ್; ಮರ್ಡರ್ ಮಾಡಲು ಬಂದಿದ್ದ ರೌಡಿ

13 ಜನರು ಲೋಕನಾಥ್ ಎಂಬುವವರ ಮನೆಯಲ್ಲಿ ಡಕಾಯಿತಿ ಮಾಡಿದ್ದು, ಡಕಾಯಿತಿ ಪ್ರಕರಣ ಸಂಬಂಧ ತನಿಖೆಗೆ ಬಂದಿದ್ದ ಕಿರಣ್ ಬಂಧನವಾಗಿತ್ತು. ತನಿಖೆಗೆ ಕರೆದುಕೊಂಡು ಹೋಗುವಾಗ ಕುದೂರು ಠಾಣೆ ಪೊಲೀಸ್ ಪೇದೆ ವೀರಭದ್ರ ಮೇಲೆ ಹಲ್ಲೆ ಮಾಡಿದ್ದನು. ಆಗ ಸಿಪಿಐ ಮಂಜುನಾಥ್ ಬೆಂಗಳೂರು ಹೊರವಲಯದ ಕೆಂಗೇರಿ ಸಮೀಪದ ಸೂಲಿಕೆರೆ ಅರಣ್ಯದ ಬಳಿ‌ ಬೆಳಿಗ್ಗೆ 7 ಗಂಟೆಗೆ ಫೈರಿಂಗ್ ಮಾಡಿದ್ದಾರೆ.

Magadi Circle Inspector Firing On Rowdy Sheeter In Kengeri

2016 ರಲ್ಲಿ ಕೆಂಗೇರಿಯ ಮಾರ ಹನುಮ ಅಲಿಯಾಸ್ ಚಿಚಿ ಎಂಬಾತನನ್ನು ಕಿರಣ್ ಮರ್ಡರ್ ಮಾಡಿದ್ದನು. ಕಿರಣ್ ಮೇಲೆ ಕೆಂಗೇರಿ, ತಾವರೆಕೆರೆ, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ 11 ಪ್ರಕರಣಗಳು‌ ಇವೆ.

English summary
Magadi Circle Inspector Manjunath has shoot down the infamous Rowdy Kirans left leg when he Tried escaped Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X