Get Updates
Get notified of breaking news, exclusive insights, and must-see stories!

ರಾಮನಗರದಲ್ಲಿ ಸೈನ್ಯಕ್ಕೆ ಸೇರಿದ ಲಾಂಚರ್ ಗಳ ಸ್ಫೋಟ

ರಾಮನಗರ, ಮೇ 11: ಸೈನ್ಯಕ್ಕೆ ಸೇರಿದ ಲಾಂಚರ್ ಗಳು ಸ್ಫೋಟಗೊಂಡಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಬೊಮ್ಮಸಂದ್ರ ಗ್ರಾಮದ ಬಳಿ ನಡೆದಿದೆ.

Recommended Video

      ಈ ಇಬ್ಬರೂ ಸಚಿವರಿಗೆ ಕೊರೊನಾ ಭಯವೇ ಇಲ್ಲ..ಇದ್ದಿದ್ರೆ ಹೀಗೆ ಮಾಡ್ತಿರ್ಲಿಲ್ಲ | Ramanagara

      ಸಂಗಮ ಅರಣ್ಯ ಪ್ರದೇಶದ ಕಾವೇರಿ ನದಿಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಈ ಸ್ಫೋಟಕಗಳು ಪತ್ತೆಯಾಗಿವೆ. ಬೊಮ್ಮಸಂದ್ರ ಗ್ರಾಮದ ಕೆಲವರು ದನ ಮೇಯಿಸಲು ಅರಣ್ಯ ಪ್ರದೇಶಕ್ಕೆ ಹೋಗಿದ್ದಾರೆ. ಈ ವೇಳೆ ನದಿಯಲ್ಲಿ 6 ಲಾಂಚರ್ ಗಳು ಪತ್ತೆಯಾಗಿವೆ. ಇದನ್ನು ನೋಡಿದ ಅವರು, ಲಾಂಚರ್ ಒಳಗಿದ್ದ ತಾಮ್ರ ತೆಗೆಯಲು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಲಾಂಚರ್ ಗಳು ಸ್ಫೋಟಗೊಂಡಿವೆ.

      Launchers Belonged To Military Exploded In Kanakapura Village

      6 ಲಾಂಚರ್ ಗಳ ಪೈಕಿ 5 ಸ್ಫೋಟಗೊಂಡಿವೆ. ಒಂದು ಸಜೀವವಾಗಿದೆ. ಸ್ಫೋಟದ ಸದ್ದು ಗ್ರಾಮದವರೆಗೂ ಕೇಳಿಸಿದ್ದು, ತಕ್ಷಣ ಗ್ರಾಮಸ್ಥರು ಸ್ಥಳದಲ್ಲಿ ಸೇರಿದ್ದಾರೆ. ಸಾತನೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಾಂಬ್ ನಿಷ್ಕ್ರಿಯ ದಳದವರಿಂದ ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಈ ಲಾಂಚರ್ ಗಳು ಮಿಲಿಟರಿಗೆ ಸೇರಿವೆ ಎಂಬುದು ತಿಳಿದುಬಂದಿದೆ.

      Launchers Belonged To Military Exploded In Kanakapura Village

      2002-03ರಲ್ಲಿ ಕಾವೇರಿ ನದಿಯ ದಡದಲ್ಲಿ 2 ತಿಂಗಳ ಕಾಲ ಮಿಲಿಟರಿ ಕ್ಯಾಂಪ್‌ ಹಾಕಿ ಅಲ್ಲಿ ತರಬೇತಿ ನೀಡಲಾಗುತಿತ್ತು. ಈ ವೇಳೆ ನದಿಯಲ್ಲಿ 6 ಲಾಂಚರ್ ಗಳು ಮುಳುಗಿ ಹೋಗಿದ್ದು, ಇದೀಗ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗಿದ್ದರ ಪರಿಣಾಮ ಈ ಲಾಂಚರ್ ಗಳು ಪತ್ತೆಯಾಗಿವೆ ಎನ್ನಲಾಗಿದೆ. ಸ್ಫೋಟಗೊಳ್ಳದ ಒಂದು ಲಾಂಚರ್ ಅನ್ನು ಬಾಂಬ್ ನಿಷ್ಕ್ರಿಯ ದಳ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆಸಿದೆ. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+