ಅಬ್ಬಬ್ಬಾ ಇಷ್ಟು ದೊಡ್ಡ ಕಾಜು ಕಟ್ಲಿ, ವೆಜ್ ಪಫ್ಸ್ ಎಲ್ಲಾದರೂ ನೋಡಿದ್ದೀರಾ?
Recommended Video
ರಾಮನಗರ, ಜನವರಿ 16: ಪ್ರಪಂಚದಲ್ಲಿ ಏನಾದರೂ ದಾಖಲೆ ಮಾಡಿ ಹೆಸರುಳಿಸಬೇಕು ಎಂಬುದು ಬಹು ಮಂದಿಯ ಅಥವಾ ಹಲವು ಸಂಸ್ಥೆಗಳ ಬಯಕೆ. ಹಾಗೆಯೇ ಸಿಹಿ ತಿನಿಸುಗಳಿಗೆ ಹೆಸರಾದ ಕಾಂತಿ ಸ್ವೀಟ್ಸ್ ಕೂಡ ಇಂಥದ್ದೇ ಒಂದು ದಾಖಲೆ ಮಾಡಿದೆ.
1051 ಕೆಜಿ ತೂಕದ ಕಾಜು ಕಟ್ಲಿ ಮತ್ತು 106 ಕೆಜಿ ತೂಕದ ವೆಜ್ ಪಪ್ಸ್ ತಿನಿಸು ತಯಾರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಗೊಂಡಿದೆ.

ನೆಲಮಂಗಲದಲ್ಲಿ ಸಿಹಿ ತಿನಿಸು ತಯಾರಿಕಾ ಘಟಕ
ನೆಲಮಂಗಲ ಬಳಿಯ ಕೈಗಾರಿಕಾ ವಲಯದಲ್ಲಿ ಇರುವ ಕಾಂತಿ ಸ್ವೀಟ್ಸ್ ತಯಾರಿಕಾ ಘಟಕದಲ್ಲಿ ಪರಿಣತರ ಸಮ್ಮುಖದಲ್ಲಿ ಈ ಎರಡು ತಿನಿಸುಗಳು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.

ಪ್ರಥಮ ಬಾರಿಗೆ ಭಾರೀ ಗಾತ್ರದ ತಿನಿಸು ತಯಾರಿ
ಮೂರು ತಲೆಮಾರುಗಳಿಂದ ಬೆಂಗಳೂರಿನ ಅತಿ ದೊಡ್ಡ ಸಿಹಿ ತಿನಿಸು ತಯಾರಕರಾದ ಜನಪ್ರಿಯ ಕಾಂತಿ ಸ್ವೀಟ್ಸ್ ಈ ದಾಖಲೆ ಮಾಡಿದೆ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಭಾರಿ ಗಾತ್ರ, ಅಗಲ ಮತ್ತು ಉದ್ದದ ಸಿಹಿ ತಿನಿಸು ತಯಾರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಸಂಕ್ರಾಂತಿ ಹಬ್ಬದ ಸಂಭ್ರಮಾಚರಣೆ ಸಮಯದಲ್ಲಿ ಈ ಸಾಧನೆ ಮಾಡಿರುವುದು ಖುಷಿಯನ್ನು ಇಮ್ಮಡಿಗೊಳಿಸಿದೆ.

1051 ಕೆ.ಜಿ. ತೂಕದ ಕಾಜು ಕಟ್ಲಿಗೆ 600 ಕೆ.ಜಿ ಗೋಡಂಬಿ
1051 ತೂಕದ ಕಾಜು ಕಟ್ಲಿಯನ್ನು 600 ಕೆ.ಜಿ ಗೋಡಂಬಿ, 480 ಸಕ್ಕರೆ ಮತ್ತು ತುಪ್ಪ ಬಳಸಿ 11.1 ಅಡಿ ಉದ್ದ, 7.2 ಅಡಿ ಅಗಲ ಮತ್ತು ಮುಕ್ಕಾಲು ಅಡಿ ದಪ್ಪದ ಸಿಹಿ ತಿನಿಸನ್ನು ಹಲವಾರು ಸಿಬ್ಬಂದಿ ಶ್ರಮ ವಹಿಸಿ ಕಾಜು ಕಟ್ಲಿ ತಯಾರಿಸಿದ್ದಾರೆ. ಎರಡು ಸಿಹಿ ತಿನಿಸುಗಳನ್ನು ನುರಿತ ಪಾಕ ಪ್ರವೀಣರು ಹಲವು ದಿನಗಳಿಂದ ಶ್ರದ್ಧೆ ಮತ್ತು ಶ್ರಮವಹಿಸಿ ತಯಾರುಮಾಡಿದ್ದಾರೆ. ಎಲ್ಲಾ ರೀತಿಯಿಂದಲೂ ಪರೀಕ್ಷಿಸಿ ಇಂಡಿಯಾ ಬುಕ್ ಅಫ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಿಸಿಕೊಂಡಿದ್ದೇವೆ ಎಂದು ಘೋಷಿಸಿದರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಿಬ್ಬಂದಿ ಪ್ರದೀಪ್.

106 ಕೆ.ಜಿ. ತೂಕದ ವೆಜ್ ಪಫ್ಸ್
106 ಕೆಜಿ ತೂಕದ ವೆಜ್ ಪಫ್ಸ್ 4.5 ಅಡಿ ಉದ್ದವಿದ್ದು, 2.75 ಅಗಲ ಮತ್ತು ಮೂಕ್ಕಾಲು ಅಡಿ ದಪ್ಪ ಇದೆ. ಈ ಬಗ್ಗೆ ಮಾತನಾಡಿದ ಕಾಂತಿ ಸ್ವೀಟ್ಸ್ ಮಾಲೀಕರಾದ ಶಿಕಾ ಶರ್ಮ, "ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದಪ್ಪ ಹಾಗೂ ಅಗಲವಾದ ಸಿಹಿ ತಿನಿಸನ್ನು ತಯಾರಿಸಲಾಗಿದೆ. ಈ ಮುಖಾಂತರ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡಿದಿರುವುದಕ್ಕೆ ಸಂತಸವಾಗುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications