ನಮ್ಮ ಮೇಲೆ ಕುಟುಂಬ ರಾಜಕಾರಣ ಅಪವಾದ ಸುತ್ತಿಕೊಂಡಿದೆ:ಎಚ್ ಡಿಡಿ
ರಾಮನಗರ, ಡಿಸೆಂಬರ್ 11 : ನಮ್ಮ ಮೇಲೆ ಈಗಾಗಲೇ ಕುಟುಂಬ ರಾಜಕಾರಣದ ಅಪವಾದ ಸುತ್ತಿಕೊಂಡಿದೆ ಇದೀಗ ಒಂದು ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲು ಅಸಾಧ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
2018 ರ ವಿಧಾನಸಭಾ ಚುನಾವಣೆ ಹಿನ್ನೆಲೆ ಚನ್ನಪಟ್ಟಣ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧೆ ವಿಚಾರ ಜೆಡಿಎಸ್ ಹಿರಿಯ ಮುಖಂಡರು ಅನಿತಾ ಅವರನ್ನೇ ಚನ್ಣಪಟ್ಟಣದಿಂದ ಕಣಕ್ಕಿಳಿಸಬೇಕು ಎಂದು ಒತ್ತಾಯಿಸಿದರು.

ಆ ಸಂದರ್ಭದಲ್ಲಿ ಮುಖಂಡರಿಗೆ ವೇದಿಕೆಯಲ್ಲಿಯೇ ನೀತಿಪಾಠ ಹೇಳಿದ ದೇವೇಗೌಡ ಅವರು ನಮ್ಮ ಮೇಲೆ ಈಗಾಗಲೇ ಕುಟುಂಬ ರಾಜಕಾರಣದ ಅಪವಾದ ಸುತ್ತಿಕೊಂಡಿದೆ ಇದೀಗ ಒಂದು ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲು ಅಸಾಧ್ಯ ಎಂದರು.
ಅನಿತಾ ಕುಮಾರಸ್ವಾಮಿ ಎರಡು ಬಾರಿ ಈ ಕ್ಷೇತ್ರದಲ್ಲಿ ಸೋಲುಕಂಡಿದ್ದಾರೆ ಈ ಬಾರಿ ಸ್ಪರ್ಧಿಸುವ ಆಕಾಂಕ್ಷೆಯನ್ನು ಸಹ ಹೊಂದಿದ್ದಾರೆ. ಹಳ್ಳಿ ಹಳ್ಳಿಗೆ ನೀವು ಹೋಗಿ, ಅನಿತಾ ಬಂದರೆ ಜೊತೆಗೆ ಕರೆದುಕೊಂಡು ಹೋಗಿ ಅಂತಾ ಸ್ಥಳೀಯ ಮುಖಂಡರಿಗೆ ಹೇಳಿದ್ದೇನೆ. ಅಂತಿಮ ನಿರ್ಧಾರ ಆ ಮೇಲೆ ಮಾಡೋಣ ಎಂದು ಹೇಳಿದರು.












Click it and Unblock the Notifications