ಭಾರೀ ಮಳೆ: ಮಾಗಡಿಯಲ್ಲಿ ಗೋಡೆ ಕುಸಿದು ಮಕ್ಕಳು ಸಾವು
ರಾಮನಗರ, ಆಗಸ್ಟ್, 07: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರಿನಲ್ಲಿ ಭಾರೀ ಮಳೆಯಿಂದಾಗಿ ದನದ ಕೊಟ್ಟಿಗೆಯ ಗೋಡೆ ಕುಸಿದು ನೇಪಾಳ ಮೂಲದ 4 ವರ್ಷದ ಪರ್ಭಿನ್ ಮತ್ತು 3 ವರ್ಷದ ಇಷಿಕಾ ಎನ್ನುವ ಪುಟ್ಟ ಕಂದಮ್ಮಗಳು ಮೃತಪಟ್ಟಿವೆ.
ಜೀವನದ ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದ ನೇಪಾಳದಿಂದ ಕೆಲಸ ಅರಸಿ ಬಂದಿದ್ದ ಎರಡು ಕುಟುಂಬಗಳ ಎರಡು ಮುದ್ದಾದ ಮಕ್ಕಳನ್ನು ಜವರಾಯನಂತೆ ಎರಗಿದ ಗೋಡೆ ಬಲಿ ತೆಗೆದುಕೊಂಡಿದೆ. ಎಂಥವರ ಕರುಳನ್ನು ಚುರಕ್ ಎನಿಸುವ ಘಟನೆ ರಾಷ್ಟ್ರೀಯ ಹೆದ್ದಾರಿ 75 , ನಿರಂಜನ್ ಗ್ರಾನೈಟ್ ಪಕ್ಕ ನಡೆದಿದೆ.
ನೇಪಾಳದಿಂದ ಕೆಲಸ ಅರಸಿ ಬಂದ ಮುಗ್ದ ಮಕ್ಕಳ ಕುಟುಂಬದವರು ರಾಮನಗರ ಜಿಲ್ಲೆಯ ಸೋಲೂರಿನಲ್ಲಿ ನೆಲೆಸಿದ್ದರು. ಜೀವನಕ್ಕಾಗಿ ರೂಪಿಸಿಕೊಂಡ ಶೆಡ್ ಮೇಲೆ ಕಳೆದ ರಾತ್ರಿ ಗೋಡೆ ಕುಸಿದು ಬಿದ್ದಿದ್ದು, ಅದರಡಿ ಮಲಗಿದ್ದ ಎರಡು ಮುಗ್ದ ಮಕ್ಕಳು ಅಸುನೀಗಿವೆ.

ಘಟನೆಯಲ್ಲಿ ಮೀನಾ ಮತ್ತು ಮೋನಿಶಾ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ತಕ್ಷಣ ಗಾಯಾಳುಗಳನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಗರಾಮ್ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆಗೆ ಹೊಂದಿಕೊಂಡಿದ್ದ ಕಾರ್ಮಿಕರ ಶೆಡ್ನಲ್ಲಿ ನೇಪಾಳ ಮೂಲದ ರಾಜೇಶ್ ಮತ್ತು ನಿತೇಶ್ ಎಂಬುವರ ಎರಡು ಕುಟುಂಬಗಳು ವಾಸ ಮಾಡುತ್ತಿದ್ದವು. ಬೆಳಗಿನ ಜಾವ ನಡೆದ ದುರ್ಘಟನೆಯಲ್ಲಿ ರಾಜೇಶ್ ಎಂಬುವರ 4 ವರ್ಷದ ಮಗ ಪರ್ಭಿನ್ ಹಾಗೂ ನಿತೇಶ್ ಎಂಬುವರ 3 ವರ್ಷದ ಮಗಳು ಇಷಿಕಾ ಮೃತಪಟ್ಟಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರ ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಹಾಗೂ ಸೋಲೂರು ಗ್ರಾಮದ ನಡುವಿನ ನಿರಂಜನ್ ಗ್ರಾನೈಟ್ ಪಕ್ಕದ ಜಮೀನಿನಲ್ಲಿ ಮುಬಿನ್ ಶರೀಪ್ ಎಂಬುವರಿಗೆ ಸೇರಿದ ಶೆಡ್ನಲ್ಲಿ ರಾಜೇಶ್ ಮತ್ತು ನಿತೇಶ್ ಎಂಬುವವರ ಎರಡು ಕುಟುಂಬದವರು ವಾಸ ಮಾಡುತ್ತಿದ್ದರು. ರಾಜೇಶ್ ಮತ್ತು ನಿತೇಶ್ ವಾಸಮಾಡುತ್ತಿದ್ದ ಶೆಡ್ಗೆ ಹೊಂದಿಕೊಂಡಿದ್ದ ಗಂಗರಾಮ್ ಎಂಬುವರ ದನದ ಕೊಟ್ಟಿಗೆಯ ಗೋಡೆ ಕುಸಿದು ದುರ್ಘಟನೆ ಸಂಭವಿಸದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ












Click it and Unblock the Notifications