ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ದಿನ ಸಾವಿನ ಮನೆಯ ಕದ ತಟ್ಟಿದ ತಂದೆ ಮಗ; ಮಾಗಡಿಯಲ್ಲಿ ದಾರುಣ ಘಟನೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಆಗಸ್ಟ್ 25: ಕೊರೊನಾ ಸೋಂಕಿನ ಭೀತಿಯಿಂದ ಮಗ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟರೆ, ಮಗನ ಸಾವಿನ ಸುದ್ದಿ ಕೇಳಿ ತಂದೆಯೂ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಮಾಗಡಿ ಪಟ್ಟಣದ ತಿರುಮಲೆ ಬಡಾವಣೆಯಲ್ಲಿ ನಿನ್ನೆ ನಡೆದಿದೆ.

Recommended Video

ಕೋವಿಡ್, ನೆರೆ ಹೊರೆ ವಿದ್ಯಾರ್ಥಿಗಳ ಲ್ಯಾಪ್‌ಟ್ಯಾಪ್ ಗೆ ಸರ್ಕಾರ ಬರೆ | Oneindia Kannada

ಪಟ್ಟಣದ ತಿರುಮಲೆ ಹೊಸ ಬಡಾವಣೆಯ ಫೈನಾನ್ಸ್ ಉದ್ಯಮಿ ಶಂಕರಪ್ಪ (70) ಮತ್ತು ಅವರ ಪುತ್ರ ವೇಣುಗೋಪಾಲ್ (40) ಒಂದೇ ದಿನ ಸಾವಿನ ಮನೆಯ ಕದ ತಟ್ಟಿದ ದುರ್ದೈವಿಗಳು. ವೇಣುಗೋಪಾಲ್ ಅವರು ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ antigen ಟೆಸ್ಟ್‌ ಮಾಡಿಸಿದ್ದರು. ಫಲಿತಾಂಶ ನೆಗೆಟಿವ್ ಬಂದಿತ್ತು. ಆದರೆ ಕೊರೊನಾ ಭೀತಿ ಅವರ ಸಾವಿಗೆ ಕಾರಣವಾಗಿತ್ತು.

 ಕೊರೊನಾ ಫಲಿತಾಂಶ ನೆಗೆಟಿವ್ ಬಂದಿತ್ತು

ಕೊರೊನಾ ಫಲಿತಾಂಶ ನೆಗೆಟಿವ್ ಬಂದಿತ್ತು

ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ವೇಣುಗೋಪಾಲ್ ಅವರಿಗೆ ಕೊರೊನಾ ಪರೀಕ್ಷೆಯನ್ನು ಮಾಡಿಸಲಾಗಿತ್ತು. ಅದರಲ್ಲಿ ಫಲಿತಾಂಶ ನೆಗೆಟಿವ್ ಬಂದಿತ್ತು. ಆದರೆ ಎದೆನೋವು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಭಾನುವಾರ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಮಗನಿಗೆ ಕೊರೊನಾ; ಕೋಲಾರದಲ್ಲಿ ಹೃದಯಾಘಾತದಿಂದ ತಾಯಿ ಸಾವುಮಗನಿಗೆ ಕೊರೊನಾ; ಕೋಲಾರದಲ್ಲಿ ಹೃದಯಾಘಾತದಿಂದ ತಾಯಿ ಸಾವು

 ಹೃದಯಾಘಾತದಿಂದ ಮಗ ಸಾವು

ಹೃದಯಾಘಾತದಿಂದ ಮಗ ಸಾವು

ಆದರೆ ಕೊರೊನಾ ಬಂದಿರಬಹುದು ಎಂಬ ಭೀತಿ ವೇಣುಗೋಪಾಲ್ ಅವರಲ್ಲಿ ತುಂಬಿಕೊಂಡಿತ್ತು. ಅಂದೇ ತಡರಾತ್ರಿ 1.30ರ ಹೊತ್ತಿನಲ್ಲಿ ಹೃದಯಾಘಾತ ಸಂಭವಿಸಿ ವೇಣುಗೋಪಾಲ್ ಸಾವನ್ನಪಿದರು.

 ಮಗನ ನಂತರ ತಂದೆಯ ಸಾವು

ಮಗನ ನಂತರ ತಂದೆಯ ಸಾವು

ಇತ್ತ ವೇಣುಗೋಪಾಲ್ ಅವರ ತಂದೆ ಶಂಕರಪ್ಪ ಅವರಿಗೂ ಜ್ವರ, ಕೈಕಾಲು ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನೂ ಪಟ್ಟಣದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಮಗ ಹೃದಯಾಘಾತದಿಂದ ಮೃತ ಪಟ್ಟ ಸುದ್ದಿ ಕೇಳಿ ಆಸ್ಪತ್ರೆಯಲ್ಲೆ ಸೋಮವಾರ ಬೆಳಿಗ್ಗೆ ಶಂಕರಪ್ಪ ಅವರೂ ಸಾವನ್ನಪ್ಪಿದ್ದಾರೆ.

ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕಾಡಲಿದೆ ಹೃದ್ರೋಗಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕಾಡಲಿದೆ ಹೃದ್ರೋಗ

 ಕುಟುಂಬಕ್ಕೆ ಎರಗಿದ ಆಘಾತ

ಕುಟುಂಬಕ್ಕೆ ಎರಗಿದ ಆಘಾತ

ಅಪ್ಪ, ಮಗ ಒಂದೇ ದಿನ ಸಾವನ್ನಪ್ಪಿದ್ದು, ಕುಟುಂಬಕ್ಕೆ ಆಘಾತವಾಗಿದೆ. ಸಮುದಾಯದ ಮುಖಂಡರು ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಿನ್ನೆ ಅಪ್ಪ, ಮಗನ ಅಂತ್ಯಸಂಸ್ಕಾರವನ್ನು ತಿರುಮಲೆಯ ಬಳಿಯ ರುದ್ರ ಭೂಮಿಯಲ್ಲಿ ನೆರವೇರಿಸಿದರು. ಮೃತರ ಕುಟುಂಬದವರ ದುಃಖ ಮುಗಿಲು ಮುಟ್ಟಿತ್ತು.

English summary
Father and son dies same day by heart attack at magadi of ramanagar district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X