ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಬಗ್ಗೆ ಅವಹೇಳನಕಾರಿ ಪೋಸ್ಟ್ : ಚನ್ನಪಟ್ಟಣದಲ್ಲಿ ದೂರು ದಾಖಲು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಆಗಸ್ಟ್.10:ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ಕಾರ್ಯಕರ್ತನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಸೇನೆ ಅವಹೇಳನ, ಕಾಂಗ್ರೆಸ್ ನಾಯಕರ ವಿರುದ್ಧ ಕ್ರಿಮಿನಲ್ ಕೇಸ್ಸೇನೆ ಅವಹೇಳನ, ಕಾಂಗ್ರೆಸ್ ನಾಯಕರ ವಿರುದ್ಧ ಕ್ರಿಮಿನಲ್ ಕೇಸ್

ತಾಲೂಕಿನ ಸಿದ್ದನಹಳ್ಳಿ ಗ್ರಾಮದ ಬಿಜೆಪಿ ಮುಖಂಡ ಸಿದ್ದೇಗೌಡ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, "ಕುಮಾರಸ್ವಾಮಿ ಅವರ ಸಾಧನೆ ಅಂದ್ರೆ ರಾಮನಗರಕ್ಕೆ ಮುನೀರ್ ಎಂಬ ಉಗ್ರನಿಗೆ ಆಶ್ರಯ ನೀಡಿದ್ದು, ಉಗ್ರ ಮುನೀರ್ ಬಗ್ಗೆ ಕುಮಾರಸ್ವಾಮಿ ಏನಂತಾರೆ? ಇದರ ಬಗ್ಗೆ ನನಗೇನೂ ಗೊತ್ತಿಲ್ಲ ಅವನು ರೈತನೇ ಎನ್ನುವರು" ಎಂದು ಪೋಸ್ಟ್ ಮಾಡಿದ್ದಾನೆ.

BJP activist has posted abusive comments on the social networking site against CM

ಈ ಪೋಸ್ಟ್ ಇದೀಗ ತಾಲೂಕಿನಲ್ಲಿ ಸದ್ದು ಮಾಡುತ್ತಿದ್ದು, ಜೆಡಿಎಸ್ ಕಾರ್ಯಕರ್ತರು ಸಿಟ್ಟಾಗಿದ್ದಾರೆ. ಫೇಸ್ ಬುಕ್ ನಲ್ಲಿ ಸಿದ್ದೇಗೌಡಗೆ ಎಗ್ಗಾ ಮಗ್ಗಾ ಜಾಡಿಸಿದ್ದಾರೆ.

BJP activist has posted abusive comments on the social networking site against CM

ಈ ಹಿನ್ನೆಲೆಯಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಜಣ್ಣ ಎಂಬುವರು ಸಿದ್ದೇಗೌಡ ವಿರುದ್ಧ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ದೂರು ದಾಖಲಿಸಿಕೊಂಡು ಎಫ್ಐರ್ ಹಾಕಿರುವ ಪೊಲೀಸರು ಸಿದ್ದೇಗೌಡನ ಬಂಧಿಸಲು ಬಲೆ ಬೀಸಿದ್ದಾರೆ.

English summary
A BJP activist has posted abusive comments on the social networking site against Chief Minister HD Kumaraswamy. JDS Urban unit president Rajanna has filed a complaint against BJP activist in Channapatna Police Station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X