Get Updates
Get notified of breaking news, exclusive insights, and must-see stories!

ಬರದಿಂದಾಗಿ ರಾಯಚೂರಲ್ಲಿ ಕುಸಿದ ಭತ್ತ ಇಳುವರಿ: ಇಲ್ಲಿನ ಮಾರುಕಟ್ಟೆಯಲ್ಲಿ ನೆರೆ ರಾಜ್ಯಗಳ ರೈತರದ್ದೇ ಹಾವಳಿ!

ರಾಯಚೂರು ನವೆಂಬರ್ 28: ಜಿಲ್ಲೆಯ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದ ರೈತರು ನಗರದ ರಾಜೇಂದ್ರ ಗಂಜ್‌ ಮಾರುಕಟ್ಟೆಯಲ್ಲಿ ಒಂದೇ ದಿನ ದಾಖಲೆಯ 66 ಸಾವಿರ ಚೀಲ ಭತ್ತ ಮಾರಾಟ ಮಾಡಿ ಉತ್ತಮ ಲಾಭ ಪಡೆದಿದ್ದಾರೆ. ಇಲ್ಲಿನ ಎಪಿಎಂಸಿಗೆ ಕಳೆದೊಂದು ವಾರದಿಂದ ಭತ್ತದ ಆವಕ ಹೆಚ್ಚಿದೆ.

ಜಿಲ್ಲೆಯ ಭತ್ತದ ನಾಡು ಸಿಂಧನೂರು ತಾಲೂಕುವೊಂದರಲ್ಲೇ ಸುಮಾರು 5,600 ಹೆಕ್ಟೇರ್‌ ಬಿತ್ತನೆಯಾಗಿದೆ. ಕಟಾವಿಗೂ ಮುನ್ನವೇ ಕ್ವಿಂಟಾಲ್‌ಗೆ 3 ರಿಂದ 3,200 ರೂಪಾಯಿ ದರವಿದೆ. ಎಪಿಎಂಸಿಯಲ್ಲಿ 66,145 ಚೀಲ ಮಾರಾಟವಾಗಿ ದಾಖಲೆ ಮೂಡಿಸಿದೆ. ಕಳೆದ ಎರಡ್ಮೂರು ದಿನಗಳಿಂದಲೂ 56 ಸಾವಿರ ಕ್ವಿಂಟಾಲ್‌ ಆವಕವಾಗಿದೆ.

Rice yield fell in Raichur due to drought: Farmers of neighboring states are suffering in the market here!

ಎಪಿಎಂಸಿಯಲ್ಲಿ ನೆರೆಯ ತೆಲಂಗಾಣ ಹಾಗೂ ಆಂಧ್ರಪ್ರದೇಶದ ರೈತರದ್ದೇ ಪಾರುಪತ್ಯ ಎನ್ನುವಂತಾಗಿದೆ. ಜಿಲ್ಲೆಯ ಸಿಂಧನೂರು, ಸಿರವಾರ, ಮಾನ್ವಿ, ರಾಯಚೂರು ತಾಲೂಕುಗಳಲ್ಲೂ ಅಲ್ಲಲ್ಲಿ ಭತ್ತದ ಕಟಾವು ನಡೆದಿದ್ದು, ಉತ್ತಮ ಬೆಲೆ ಇರುವುದರಿಂದ ಕೆಲವರು ಮಾರಾಟಕ್ಕೆ ಮುಂದಾಗಿದ್ದಾರೆ.

ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಭತ್ತಕ್ಕೆ ಸರಿಯಾದ ದರ ದೊರಕದ ಹಿನ್ನೆಲೆಯಲ್ಲಿ ಅಲ್ಲಿನ ರೈತರು ಇಲ್ಲಿಗೇ ಆಗಮಿಸಿ ಭತ್ತ ಮಾರಾಟ ಮಾಡುವುದು ಕಳೆದ ಹಲವು ವರ್ಷಗಳಿಂದ ನಡೆದುಕೊಂಡೇ ಬಂದಿದೆ. ಈ ಬಾರಿಯಂತೂ ಇಲ್ಲಿ ಇಳುವರಿ ಬಿದ್ದಿರುವ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳ ರೈತರು ತಂದಿರುವ ಭತ್ತ ಬಿಸಿ ದೋಸೆಯಂತೆ ಖರೀದಿಯಾಗಿದ್ದು ಭರಪೂರ ದುಡ್ಡು ದೊರೆತಿದೆ.

Rice yield fell in Raichur due to drought: Farmers of neighboring states are suffering in the market here!

ಕಳೆದ ವರ್ಷ ನವೆಂಬರ್‌ನಲ್ಲಿ ಸೋನಾ ಮಸೂರಿ ಹಾಗೂ ರಾಜಹಂಸ ಭತ್ತಕ್ಕೆ ಕ್ವಿಂಟಾಲ್‌ಗೆ 1,750 ರೂ. ದರವಿದ್ದರೆ, ಈ ಬಾರಿ ಪ್ರತಿ 75 ಕೆ.ಜಿ. ಭತ್ತಕ್ಕೆ 1,880 ರಿಂದ 2,100 ರೂ ವರೆಗೆ ದರವಿದೆ. ಸಿಂಧನೂರು ಭಾಗದಲ್ಲಿ ಕಳೆದ ವರ್ಷ ಆರ್‌ಎನ್‌ಆರ್‌ ಕ್ವಿಂಟಾಲ್‌ ಭತ್ತಕ್ಕೆ 1,800 ರೂ ಇತ್ತು. ಈ ಬಾರಿ 75 ಕೆಜಿಗೆ 2,500 ರೂ ವರೆಗೂ ಮಾರಾಟವಾಗುತ್ತಿದೆ.

ರಾಯಚೂರು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಬಿ ಕೃಷ್ಣ, ಜಿಲ್ಲೆಯಲ್ಲಿ ಈ ಬಾರಿ ಬರಗಾಲದ ಹಿನ್ನೆಲೆ ಅಲ್ಪ ಸ್ವಲ್ಪ ರೈತರು ಮಾತ್ರ ಭತ್ತ ಬೆಳೆದಿದ್ದು, ಕಟಾವು ಹಂತದಲ್ಲಿದೆ. ಆದರೆ, ಆಂಧ್ರ ಹಾಗೂ ತೆಲಂಗಾಣ ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಮಾರಾಟ ಮಾಡಲು ಜಿಲ್ಲೆಗೆ ಆಗಮಿಸಿ ಕ್ವಿಂಟಾಲ್‌ಗೆ 2,500 ರೂ. ವರೆಗೆ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಇಲ್ಲಿನ ಮಾರುಕಟ್ಟೆಯಲ್ಲಿ ಉತ್ತಮ ದರ ದೊರಕಿದ್ದಕ್ಕಾಗಿ ನೆರೆ ರಾಜ್ಯದ ರೈತ ನರಸಿಂಹಲು ಸಂತಸ ವ್ಯಕ್ತಪಡಿಸಿದ್ದಾರೆ. ''ನಮ್ಮ ರಾಜ್ಯದಲ್ಲಿ ಭತ್ತದ ಬೆಳೆಗೆ ಸರಿಯಾದ ಬೆಲೆ ದೊರೆಯದ ಹಿನ್ನೆಲೆಯಲ್ಲಿ ಕಳೆದ 10 ವರ್ಷದಿಂದ ನಿರಂತರವಾಗಿ ರಾಯಚೂರು ಎಪಿಎಂಸಿಯಲ್ಲಿ ಭತ್ತ ಮಾರಾಟ ಮಾರಾಟ ಮಾಡುತ್ತಿದ್ದೇವೆ. ಈ ಬಾರಿ ನಿರೀಕ್ಷೆ ಮೀರಿ ದರ ಸಿಕ್ಕಿರುವುದು ಖುಷಿಯಾಗಿದೆ'' ಎಂದು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+