Get Updates
Get notified of breaking news, exclusive insights, and must-see stories!

ಗ್ರಾಮೀಣಾಭಿವೃದ್ಧಿಗಾಗಿ ನರೇಗಾ ಯೋಜನೆ ಈ ಜಿಲ್ಲೆಯಲ್ಲಿ ಸಹಕಾರಿಯಾಗಿದ್ದು ಹೇಗೆ?

ರಾಯಚೂರು ಫೆಬ್ರವರಿ 23: ಗ್ರಾಮೀಣಾಭಿವೃದ್ಧಿಗಾಗಿ ನರೇಗಾ ಯೋಜನೆಯು ನಿರಂತರ ಅನುದಾನಗಳನ್ನು ನೀಡಿ, ಗ್ರಾಮೀಣ ಜನರಿಗೆ ಸಹಕಾರಿಯಾಗುವ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.

ಮಹಾತ್ಮ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಜನರ ದುಡಿಯುವ ಕೈಗಳಿಗೆ ನಿರಂತರ ಕೆಲಸ ನೀಡುತ್ತಾ, ಗ್ರಾಮ ಅಭಿವೃದ್ಧಿಯಲ್ಲಿ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸಿದೆ. ರಾಜ್ಯ ಸರ್ಕಾರದ 2023-24 ನೇ ಸಾಲಿನ ಆಯವ್ಯಯದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಲವು ಪ್ರಮುಖ ಕಾರ್ಯಕ್ರಮಗಳನ್ನು ಅನುಷ್ಠಾನಿಸಲು ಘೋಷಿಸಿರುತ್ತಾರೆ. ಅವುಗಳಲ್ಲಿ ಸ್ಮಶಾನ ಅಭಿವೃದ್ಧಿ ಕಾರ್ಯಕ್ರಮ ಕೂಡ ಒಂದಾಗಿದೆ.

How is Narega scheme helpful in this district for rural development?

ರಾಯಚೂರು ತಾಲೂಕಿನ ಶಾಖವಾದಿ ಗ್ರಾಮ ಪಂಚಾಯತಿಯ ಆಶ್ರಯ ಕಾಲೋನಿಯಲ್ಲಿರುವ ಸ್ಮಶಾನ ಸ್ಥಳವು ಜಾಲಿ ಕಂಟಿಗಳು ಬೆಳೆದು ಅಂತಿಮ ಸಂಸ್ಕಾರ ಮಾಡಲು, ಗ್ರಾಮದ ಜನರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದರು. ಇಂತಹ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ರಾಯಚೂರು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು 2023-24 ನೇ ಸಾಲಿನಲ್ಲಿ ಸ್ಥಳ ಅವಕಾಶಗಳನ್ನು ಗುರುತಿಸಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸ್ಮಶಾನಗಳ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ.

ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನ ಶಾಖವಾದಿ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮುಖಾಂತರ ಅಂದಾಜು ಕೂಲಿಗಾಗಿ ₹ 21 ಸಾವಿರದ 630 ರೂಪಾಯಿ, ಸಾಮಾಗ್ರಿಗಾಗಿ ₹ 2 ಲಕ್ಷ 76 ಸಾವಿರದ 639 ರೂಪಾಯಿ ಒಟ್ಟು ₹2 ಲಕ್ಷ 98 ಸಾವಿರದ 268 ರೂಪಾಯಿ ವ್ಯಯಿಸಿ, 252 ಮಾನವ ದಿನಗಳನ್ನು ಸೃಜಿಸಿದೆ.

ಶಾಖವಾದಿ ಗ್ರಾಮದ ಆಶ್ರಾಯ ಕಾಲೋನಿಯ ಸ್ಮಶಾನ ಜಾಗದಲ್ಲಿ ತುಂಬಿರುವ ಎಲ್ಲಾ ಮುಳ್ಳು ಕಂಟಿಗಳನ್ನು ತೆಗೆದು, ಭೂಮಿಯನ್ನು ಸಮತಟ್ಟು ಮಾಡಿ, ಸುತ್ತಲೂ ಕಲ್ಲುಕಂಬಗಳನ್ನು ಹಾಕಿ, ತಂತಿ ಬೇಲಿಯನ್ನು ನಿರ್ಮಿಸಿ, ಮುಂಭಾಗದಲ್ಲಿ ಉತ್ತಮವಾಗಿ ಕಾಣಲು ಅರ್ಚ ಗೇಟ್ ನ್ನು ನಿರ್ಮಾಣ ಮಾಡಿದ್ದಾರೆ.

How is Narega scheme helpful in this district for rural development?

ಶಾಖವಾದಿ ಗ್ರಾಮ ಪಂಚಾಯತಿಯ ಶಾಖವಾದಿ ಹಾಗೂ ಕೂಡ್ಲೂರು ಗ್ರಾಮದಲ್ಲಿ ಎರಡು ಉತ್ತಮವಾದ ಸ್ಮಶಾನ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಿಂದಾಗಿ, ಮುಕ್ತಿಧಾಮದಲ್ಲಿ ಅಂತಿಮ ಸಂಸ್ಕಾರ ಮಾಡಲು ಸಾರ್ವಜನಿಕರಿಗೆ ಬಹಳ ಅನುಕೂಲಕರವಾಗಿದೆ. ಇನ್ನೂಳಿದಂತೆ ಪ್ರಸಕ್ತ ವರ್ಷದಲ್ಲಿ, ಚಂದ್ರಬಂಡ, ಚಿಕ್ಕಸೂಗುರು, ಹಿರಾಪೂರು, ಜಂಬಲದಿನ್ನಿ, ಕಾಡ್ಲೂರು, ಕಲ್ಮಲಾ, ಕಮಲಾಪೂರು, ಎಲ್.ಕೆ.ದೊಡ್ಡಿ, ಉಡಮಗಲ್, ಯದ್ಲಾಪೂರು ಮತ್ತು ಯಾಪಲದಿನ್ನಿ ಗ್ರಾಮ ಪಂಚಾಯತಿ ಸೇರಿ ಒಟ್ಟು ರಾಯಚೂರು ತಾಲೂಕಿನ 11 ಗ್ರಾಮ ಪಂಚಾಯಿತಿಗಳಲ್ಲಿ ಸ್ಮಶಾನ ಅಭಿವೃದ್ಧಿಗಾಗಿ ಯೋಜನೆ ರೂಪಿಸಿದೆ.

ನರೇಗಾ ಯೋಜನೆಯಡಿ ಗ್ರಾಮೀಣ ಮೂಲ ಸೌಕರ್ಯದಡಿ ಕಾಮಗಾರಿಗಳನ್ನು ಅನುಷ್ಠಾನ ಮಾಡುತ್ತಿರುವುದು ಗ್ರಾಮೀಣ ಜನರಿಗೆ ಉಪಯುಕ್ತವಾಗಿದೆ ಎಂದು ತಾಪಂ ಇಒ ಚಂದ್ರಶೇಖರ ಪವಾರ್ ಹೇಳಿದರು.

ಉದ್ಯೋಗ ಖಾತರಿ ಯೋಜನೆ ಮೂಲಕ ಸ್ಮಶಾನವನ್ನು ಅಭಿವೃದ್ಧಿ ಮಾಡಿದೆ. ಇದರಿಂದಾಗಿ ಸ್ಮಶಾನ ಜಾಗದಲ್ಲಿ ಅಂತಿಮ ಸಂಸ್ಕಾರ ಮಾಡಲು ನಮಗೆ ತುಂಬಾ ಅನುಕೂಲವಾಗಿದೆ ಎಂದು ಶಾಖವಾದಿ ಗ್ರಾಮಸ್ಥ ಮಲ್ಲೇಶ್ , ಹನುಮಂತ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+