ತಳ್ಳುಗಾಡಿಯಲ್ಲಿ ಹಣ್ಣಿನ ವ್ಯಾಪಾರಿಯ ಮಕ್ಕಳ ಅಕ್ಷರ ಕಲಿಕೆ
ರಾಯಚೂರು, ಡಿಸೆಂಬರ್ 28: ಮಕ್ಕಳಲ್ಲಿ ಓದು, ಬರಹದ ಆಸಕ್ತಿಯಿದ್ದರೆ ಯಾವ ಸ್ಥಳದಲ್ಲಾದರೂ ಅಭ್ಯಾಸ ಮಾಡುತ್ತಾರೆ. ಇದಕ್ಕೆ ಲಿಂಗಸೂಗೂರು ಪಟ್ಟಣದ ಜೂನಿಯರ್ ಕಾಲೇಜು ಮುಂಭಾಗದ ಬೀದಿ ಬದಿಯ ಗಿಡದ ಬುಡದಲ್ಲಿ ತಳ್ಳುಬಂಡಿಯಲ್ಲಿ ಕುಳಿತು ನಿತ್ಯ ಮಕ್ಕಳು ಅಕ್ಷರ ಅಭ್ಯಾಸ ಮಾಡುತ್ತಿರುವುದು ನಾಗರಿಕರ ಗಮನ ಸೆಳೆಯುತ್ತಿದೆ.
ಲಿಂಗಸುಗೂರು ಸ್ಥಳೀಯ ಶಾಸಕ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ ಅಂಬಿಕಾ ಬಸವರಾಜ ಭಜಂತ್ರಿ, ಎಲ್ಕೆಯಜಿ (ಪೂರ್ವ ಪ್ರಾಥಮಿಕ)ದಲ್ಲಿ ಓದುತ್ತಿರುವ ನವೀನ ಬಸವರಾಜ ಭಜಂತ್ರಿ ಅವರು ತಾಯಿ ಬಸಮ್ಮ ಭಜಂತ್ರಿ ಜತೆ ಬೆಳಿಗ್ಗೆ 9 ಗಂಟೆಗೆ ಶಾಲೆಗೆ ತೆರಳುತ್ತಾರೆ.
ಶಾಲಾ ಅವಧಿ ಮುಗಿದಾಕ್ಷಣ ಬೀದಿಯಲ್ಲಿ ಆಟವಾಡುತ್ತ, ತಳ್ಳುವ ಬಂಡಿಯಲ್ಲಿ ಕುಳಿತು ಅಕ್ಷರ ಅಭ್ಯಾಸ ಮಾಡುತ್ತಾರೆ. "ನಮ್ಮಪ್ಪ ಗೌಂಡಿ ಕೆಲಸಕ್ಕೆ ಹೋಗುತ್ತಾರೆ. ತಾಯಿ ಹಣ್ಣಿನ ವ್ಯಾಪಾರ ಮಾಡುತ್ತಾರೆ. ಮನೆಯಲ್ಲಿ ಯಾರೂ ಇರುವುದಿಲ್ಲ. ಕಾರಣ ಶಾಲೆ ಬಿಟ್ಟನಂತರದಲ್ಲಿ ತಾಯಿ ಜೊತೆ ಸಂಜೆವರೆಗೆ ಬೀದಿ ಬದಿಯಲ್ಲಿಯೆ ಆಟವಾಡುತ್ತ, ಅಕ್ಷರ ಕಲಿಕೆ, ಓದು ಮಾಡಿಕೊಳ್ಳುತ್ತೇವೆ. ನಾನು ಮತ್ತು ತಮ್ಮನ ಜೊತೆಗೆ ಸ್ನೇಹಿತ ಆಗಾಗ ರಿಯಾನ್ ಕೂಡ ಬರುತ್ತಾನೆ. ಆಟ, ಕಲಿಕೆ ಬಿಟ್ಟರೆ ಬೇರೇನು ಗೊತ್ತಿಲ್ಲ" ಎಂದು ಅಂಬಿಕಾ ಭಜಂತ್ರಿ ಹೇಳಿದ್ದಾಳೆ.

ಮಕ್ಕಳ ಸ್ಥಿತಿ ಬಗ್ಗೆ ಮಾತನಾಡಿರುವ ಬಸಮ್ಮ ಭಜಂತ್ರಿ "ಹೊಟ್ಟೆ ತುಂಬಿಕೊಳ್ಳಲು ಗಂಡ ಕೆಲಸಕ್ಕೆ ಹೋಗುತ್ತಾರೆ. ನಾವು ಬೀದಿಬದಿ ಹಣ್ಣಿನ ವ್ಯಾಪಾರ ಮಾಡಿಕೊಂಡು ಬದುಕು ನಡೆಸುತ್ತಿದ್ದೇವೆ. ಮೂಲತಃ ವಂದಲಿ ಗ್ರಾಮದವಳು, ಗಂಡನ ಮನೆ ಇಳಕಲ್ಲ. ಲಿಂಗಸುಗೂರಲ್ಲಿ ಹೊಟ್ಟೆ ತುಂಬಿಕೊಳ್ಳಲು ಬಂದಿದ್ದೇವೆ. ಮಕ್ಕಳು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ನಾವಂತು ಕಲಿಯಲು ಆಗಲಿಲ್ಲ. ಮಕ್ಕಳು ಕಲಿಯಲಿ ಎಂದು ಪ್ರೋತ್ಸಾಹಿಸುತ್ತಿರುವೆ" ಎಂದು ಕಷ್ಟ ಹಂಚಿಕೊಂಡರು.

ಬೀದಿ ಬದಿಯ ವ್ಯಾಪಾರಸ್ಥೆಯ ಮಕ್ಕಳು ನಿತ್ಯ ಶಾಲಾ ಅವಧಿಯಲ್ಲಿ ಶಾಲೆಗೆ ಹೋಗುತ್ತಾರೆ. ರಜೆ ಹಾಗು ಶಾಲೆ ಅವಧಿ ನಂತರದಲ್ಲಿ ನಿತ್ಯ ತಾಯಿ ಜೊತೆ ಇಲ್ಲಿಯೆ ಆಟವಾಡಿಕೊಂಡು, ಅಕ್ಷರ ಅಭ್ಯಾಸ ಮಾಡುತ್ತ ರಾತ್ರಿ 8 ಗಂಟೆವರೆಗೆ ಉತ್ಸಾಹ ಭರಿತರಾಗಿ ಇರುವುದು ಖುಷಿ ತಂದಿದೆ. ಇಂತಹ ಮಕ್ಕಳ ಲವಲವಿಕೆ, ಕಲಿಕಾ ಆಸಕ್ತಿ ಇತರೆ ಮಕ್ಕಳಿಗೆ ಮಾದರಿ ಆಗಬೇಕು' ಎಂದು ಶಿಕ್ಷಣ ಪ್ರೇಮಿಗಳಾದ ಅಕ್ರಂಪಾಷಾ, ಹುಸೇನ ತರಕಾರಿ ಖುಷಿ ಹಂಚಿಕೊಂಡರು.
-
ಸರ್ಕಾರಿ PU ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಬರೋಬ್ಬರಿ 9,383 ರೂ. ಲಕ್ಷ ಅನುದಾನ ಮಂಜೂರು -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
CBSE ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಹೊಸ ನಿಯಮ ಜಾರಿ -
UPSC ಪೂರ್ವಭಾವಿ ಪರೀಕ್ಷೆ ಮುಗಿದ ತಕ್ಷಣವೇ ಕೀ ಉತ್ತರಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ನಿರ್ಧಾರ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು












Click it and Unblock the Notifications