ಮಾನ್ವಿ: ಅಪರೂಪದ ಹುಲಿಬೇಟೆಯ ವೀರಗಲ್ಲುಗಳು ಪತ್ತೆ, ಏನಿದರ ವಿಶೇಷತೆ?
ರಾಯಚೂರು ಆಗಸ್ಟ್ 09: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಅಪರೂಪದ ಹುಲಿಬೇಟೆಯ ವೀರಗಲ್ಲುಗಳನ್ನು ಇತಿಹಾಸ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಪತ್ತೆ ಹಚ್ಚಿದ್ದಾರೆ.
ಚೀಕಲಪರ್ವಿ ಗ್ರಾಮದ ಗೌಡರ ಮನೆ ಬಳಿಯ ಕಟ್ಟೆಯ ಮೇಲೆ ಗ್ರಾಮಸ್ಥರು ಒಟ್ಟು ಮೂರು ವೀರಗಲ್ಲುಗಳನ್ನು ಜೋಡಿಸಿಟ್ಟು ನೂರಾರು ವರ್ಷಗಳಿಂದ ಸಂರಕ್ಷಿಸಿದ್ದಾರೆ. ಈ ಮೂರು ವೀರಗಲ್ಲುಗಳು ಹುಲಿ ಬೇಟೆಯಲ್ಲಿ ವೀರಮರಣ ಹೊಂದಿದ ಯೋಧನ ಚಿತ್ರಣವನ್ನು ವಿವರಿಸುತ್ತವೆ.

ಇವುಗಳ ಪೈಕಿ ಒಂದು ವೀರಗಲ್ಲು ಕೈಯಲ್ಲಿ ಗುರಾಣಿ ಮತ್ತು ಖಡ್ಗವನ್ನು ಹಿಡಿದ ವೀರ, ಹುಲಿಯ ಮೇಲೆ ಬೇಟೆ ನಾಯಿಯೊಂದು ದಾಳಿ ಮಾಡುತ್ತಿರುವುದು ಹಾಗೂ ಪಾರಿವಾಳದ ಚಿತ್ರಗಳನ್ನು ಹೊಂದಿದೆ. ಇದು ಯೋಧ ಬೇಟೆಗೆ ಹೊರಟಾಗಿನ ಚಿತ್ರಣವನ್ನು ವಿವರಿಸುತ್ತದೆ.
ಇನ್ನೊಂದು ವೀರಗಲ್ಲಿನಲ್ಲಿ ಹುಲಿ ಬಾಯಿ ತೆರೆದು ಬಾಲವನ್ನು ಮೇಲಕ್ಕೆ ಎತ್ತಿ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದು, ಆ ವ್ಯಕ್ತಿಯು ಹುಲಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಶೌರ್ಯದಿಂದ ಹುಲಿಗೆ ಭರ್ಜಿಯಿಂದ ಇರಿಯುತ್ತಿರುವ ಸನ್ನಿವೇಶ ಹೊಂದಿದೆ. ಹುಲಿಯೊಂದಿಗೆ ನಡೆದ ಕಾಳಗದಲ್ಲಿ ಆ ವ್ಯಕ್ತಿಯು ವೀರಮರಣ ಹೊಂದಿರುವುದನ್ನು ಸೂಚಿಸುತ್ತದೆ. ವೀರಗಲ್ಲಿನ ಮೇಲ್ಭಾಗದಲ್ಲಿ ಸೂರ್ಯ ಹಾಗೂ ಚಂದ್ರರ ಚಿತ್ರಗಳನ್ನು ಚಿತ್ರಿಸಿದ್ದಾರೆ ಎನ್ನುವುದು ಇತಿಹಾಸ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಅವರ ಅಭಿಪ್ರಾಯವಾಗಿದೆ.
ಚೀಕಲಪರ್ವಿ ಗ್ರಾಮದಲ್ಲಿರುವ ವೀರಗಲ್ಲುಗಳು ಕಣ ಶಿಲೆಯಲ್ಲಿದ್ದು ಕ್ರಿ.ಶ 17-18ನೇ ಶತಮಾನಕ್ಕೆ ಸೇರಿದ್ದಾಗಿವೆ. ಮೂರನೇ ವೀರಗಲ್ಲು ವೀರನ ಸುಂದರ ಕೇಶ ವಿನ್ಯಾಸ ಹಾಗೂ ವಸ್ತ್ರ ವಿನ್ಯಾಸ, ತೋಳುಗಳಿಗೆ ಕಟ್ಟಿರುವ ಅಭರಣಗಳನ್ನು ತೋರುತ್ತದೆ. ವೀರನ ಪಕ್ಕ ಮಹಿಳೆಯೊಬ್ಬರು ಅಮೃತ ಕಳಶ ಹಿಡಿದು ನಿಂತಿರುವುದು, ಜಾನುವಾರುಗಳ ರಕ್ಷಣೆಗಾಗಿ ಹುಲಿಯೊಂದಿಗಿನ ಕಾಳಗದಲ್ಲಿ ವೀರನು ಮರಣ ಹೊಂದಿದ್ದು, ವೀರನ ಜೊತೆಗೆ ಸತಿಯು ಕೂಡ ಸಹಗಮನ ಹೊಂದಿರುವುದನ್ನು ತಿಳಿಸುತ್ತದೆ. ಈ ವೀರಗಲ್ಲು ಹುಲಿ ಬೇಟೆಯ ವೀರ ಮಹಾಸತಿ ಶಿಲ್ಪ ಎಂದು ತಿಳಿಸಿದ್ದಾರೆ.
ಚೀಕಲಪರ್ವಿ ಗ್ರಾಮದ ಹತ್ತಿರ ತುಂಗಭದ್ರಾ ನದಿ ಇರುವುದರಿಂದ ಪುರಾತನ ಕಾಲದಲ್ಲಿ ಈ ಭಾಗದಲ್ಲಿ ದಟ್ಟವಾದ ಅರಣ್ಯ ಪ್ರದೇಶ ಇದ್ದಿರಬಹುದು. ಹುಲಿಗಳು ಜಿಂಕೆ, ಚಿಗರೆಯಂತಹ ಪ್ರಾಣಿಗಳಿರುವ ಕಡೆ ಮಾತ್ರ ವಾಸ ಮಾಡುವುದರಿಂದ ಈ ಕಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ವಾಸವಾಗಿದ್ದವು ಎನ್ನುವುದಕ್ಕೆ ಹುಲಿ ಬೇಟೆಯ ಈ ವೀರಗಲ್ಲುಗಳು ಸಾಕ್ಷಿಯಾಗಿವೆ.
ಗ್ರಾಮದ ಕೆಲವು ಕುಟುಂಬಗಳು ಹಿಂದಿನ ತಲೆಮಾರುಗಳಿಂದ ಶಕ್ತಿ ದೇವತೆ, ತಮ್ಮ ಮನೆ ದೇವರಾಗಿ ಈ ವೀರಗಲ್ಲುಗಳನ್ನು ಪೂಜಿಸುತ್ತಾ ಬಂದಿದ್ದಾರೆ. ಕಾರಣ ಇಂದಿಗೂ ಈ ವೀರಗಲ್ಲುಗಳು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿವೆ. ಇತಿಹಾಸ ಅಧ್ಯಯನಕ್ಕೆ ಪೂರಕವಾಗಿರುವ ಪ್ರಾಚೀನ ಕಾಲದ ಈ ವೀರಗಲ್ಲುಗಳ ಕುರಿತು ವಿಶೇಷ ಅಧ್ಯಯನ ಹಾಗೂ ಸಂರಕ್ಷಣೆಗೆ ಪ್ರಾಚ್ಯವಸ್ತು ಇಲಾಖೆ ಗಮನಹರಿಸಬೇಕು ಎನ್ನುವುದು ಸ್ಥಳೀಯರ ಮನವಿಯಾಗಿದೆ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications