ಅಚ್ಚರಿ! ವಿದ್ಯುತ್ ಬಳಸದೆ ಜೀವನ ಸಾಗಿಸುತ್ತಿರುವ ಡಾ. ಹೇಮಾ
ಪುಣೆ, ಮೇ 08: ವಿದ್ಯುತ್ ಪೂರೈಕೆ ಇಲ್ಲದೆ ಒಂದು ದಿನ ಕೂಡಾ ಕಾಲದೂಡಲು ಸಾಧ್ಯವಿಲ್ಲದ ನಗರವಾಸಿಗಳು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಈಕೆ ಬಾಳುತ್ತಿದ್ದಾರೆ. ಇಲ್ಲಿನ ಬುಧ್ವಾರ್ ಪೇಟ್ ನಲ್ಲಿರುವ 79 ವರ್ಷ ವಯಸ್ಸಿನ ಡಾ. ಹೇಮಾ ಸಾನೆ ಅವರ ಮನೆಯಲ್ಲಿ ಎಲೆಕ್ಟ್ರಿಕ್ ಪವರ್ ಬಳಕೆ ಇಲ್ಲವೇ ಇಲ್ಲ.
ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವ ವಿದ್ಯಾಲಯದಿಂದ ಸಸ್ಯಶಾಸ್ತ್ರದಲ್ಲಿ ಪಿಎಚ್ ಡಿ ಪಡೆದಿರುವ ಡಾ. ಹೇಮಾ ಅವರು ತಮ್ಮ ಮನೆಯಲ್ಲಿ ನೈಸರ್ಗಿಕ ಗಾಳಿ, ಬೆಳಕಿಗೆ ಅವಕಾಶ ನೀಡಿದ್ದು, ವಿದ್ಯುಚ್ಛಕ್ತಿ ಬಳಸದಿರಲು ನಿರ್ಧರಿಸಿದರು.
'ಆಹಾರ, ವಸತಿ, ಬಟ್ಟೆ ಮೂಲ ಅವಶ್ಯಗಳಾಗಿವೆ. ಒಂದಾನೊಂದು ಕಾಲದಲ್ಲಿ ಎಲೆಕ್ಟ್ರಿಸಿಟಿ ಎಂಬುದು ಇರಲೇ ಇಲ್ಲ, ನನಗೆ ಅದು ಮೂಲ ಅಗತ್ಯಗಳಲ್ಲಿ ಒಂದು ಎಂದೆನಿಸಲಿಲ್ಲ' ಎಂದು ಡಾ. ಹೇಮಾ ಹೇಳಿದ್ದಾರೆ.

ಇದು ನನ್ನ ಮನೆಯಷ್ಟೇ ಅಲ್ಲ, ಇಲ್ಲಿ ನಾಯಿ, ಬೆಕ್ಕು, ಮಂಗೂಸ್, ಅನೇಕ ಹಕ್ಕಿಗಳು ತಮ್ಮ ನೆಲೆ ಕಂಡು ಕೊಂಡಿವೆ. ಅವುಗಳ ಜತೆ ನಾನು ವಾಸಿಸುತ್ತಿದ್ದೇನೆ ಎಂದಿದ್ದಾರೆ. ಪುಣೆಯ ಗಾರ್ವಾರೆ ಕಾಲೇಜಿನಲ್ಲಿ ಅನೇಕ ವರ್ಷಗಳ ಕಾಲ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದ ಹೇಮಾ ಅವರು ಸಸ್ಯಶಾಸ್ತ್ರ, ಪರಿಸರ ಕುರಿತಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಡಾ. ಹೇಮಾ ಅವರ ಜೀವನ ಶೈಲಿಯನ್ನು ಕಂಡು ಅನೇಕರು ಆಕೆಗೆ ಹುಚ್ಚು ಎಂದು ತಮಾಷೆ ಮಾಡಿದ್ದಿದೆ. ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಹೇಮಾ ಅವರು, ಜೀವನದಲ್ಲಿ ನಿಮ್ಮದೇ ಆದ ಸ್ವಂತ ಹಾದಿಯನ್ನು ಕಂಡುಕೊಳ್ಳಿ ಎಂಬ ಭಗವಾನ್ ಬುದ್ಧನ ಮಾತುಗಳನ್ನು ಪ್ರತ್ಯುತ್ತರವಾಗಿ ನೀಡುತ್ತಾರೆ.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕಾಡಿನಲ್ಲೇ 50 ವರ್ಷಗಳ ಕಾಲ ಒಬ್ಬಂಟಿ ಜೀವನ ನಡೆಸಿದ್ದ ಮರ್ಕಂಜದ ಬಾಳೆಡಿ ನಿವಾಸಿ ಕೆಂಚಪ್ಪ, ಕೆಮ್ರಾಜೆ ಗ್ರಾಮಕ್ಕೆ ಸೇರಿದ ಚಂದ್ರಶೇಖರ ಎಂಬುವರು ಕಾಡಿನಲ್ಲಿ ಲಟಾರಿ ಕಾರಿನಲ್ಲಿ ಬದುಕು ಸಾಗಿಸಿದ್ದು, ಇನ್ ಟು ದಿ ವೈಲ್ಡ್ ಸಿನಿಮಾದಲ್ಲಿ ನಾಯಕ ಎಲ್ಲಾ ತೊರೆದು ಅಲಾಸ್ಕಾದಲ್ಲಿ ಬಸ್ ನಲ್ಲಿ ನೆಲೆ ಕಂಡು ಕೊಂಡಿದ್ದು ಎಲ್ಲವೂ ಡಾ. ಹೇಮಾ ಅವರ ಬದುಕು ನೋಡಿದರೆ ನೆನಪಾಗುತ್ತದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications