ನನ್ನ ತಂಗಿ ಸುಭಾಷಿಣಿಗೆ ಮತ ನೀಡಿ ಎಂದ ರಾಹುಲ್ ಗಾಂಧಿ
ಹಿರಿಯ ರಾಜಕಾರಣಿ ಶರದ್ ಯಾದವ್ ಅವರ ಪುತ್ರಿ, ಸಾಮಾಜಿಕ ಕಾರ್ಯಕರ್ತೆ ಸುಭಾಷಿಣಿ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ತಂದೆ ಹೆಸರು ಉಳಿಸುವ ಭರವಸೆಯನ್ನು ಹೊಂದಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇಂದು ಸುಭಾಷಿಣ ಮತಯಾಚಿಸಿ, ದಯವಿಟ್ಟು ನನ್ನ ತಂಗಿಗೆ ಮತ ನೀಡಿ ಎಂದು ಹೇಳಿದರು.
ಸುಭಾಷಿಣಿ ಸ್ಪರ್ಧಿಸಿರುವ ಮಾಧೇಪುರ ಪ್ರದೇಶದ ಬಿಹಾರಿಗಂಜ್ ಕ್ಷೇತ್ರದಲ್ಲಿ ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.

ಏಕಾಂಗಿಯಾದ ಶರದ್ ಯಾದವ್
73 ವರ್ಷ ವಯಸ್ಸಿನ ಹಿರಿಯ ರಾಜಕಾರಣಿ ಶರದ್ ಯಾದವ್ ಅವರು ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದು, ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಾಧೇಪುರದ ಲೋಕಸಭಾ ಕ್ಷೇತ್ರದಲ್ಲಿ ಶರದ್ ಯಾದವ್ ಏಳು ಬೀಳು ಕಂಡಿದ್ದು, ಇದೇ ಪ್ರದೇಶದಲ್ಲಿ ಮೊದಲ ಬಾರಿಗೆ ಸುಭಾಷಿಣಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಲೋಕತಾಂತ್ರಿಕ ಜನತಾ ದಳ ಪಕ್ಷವು 51 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಮೊದಲ ಹಂತದ ಕುರ್ತಾ ಕ್ಷೇತ್ರ ಹಾಗೂ ಎರಡು ಹಾಗೂ ಮೂರನೇ ಹಂತದ 50 ಕ್ಷೇತ್ರಗಳಲ್ಲಿ ಎಲ್ ಜೆಡಿ ಸ್ಪರ್ಧಿಸಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಶ್ರೀವಾಸ್ತವ ಹೇಳಿದ್ದಾರೆ. 2019ರಲ್ಲಿ ಬಿಹಾರದ ಮಾಧೇಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. 2014ರಲ್ಲಿ ಆರ್ ಜೆಡಿಯ ಪಪ್ಪು ಯಾದವ್ ವಿರುದ್ಧ ರಾಜೇಶ್ ರಂಜನ್(ಜೆಡಿಯು) ಬೆಂಬಲಿಸಿ ಹಿನ್ನಡೆ ಅನುಭವಿಸಿದ್ದರು.

ಸುಭಾಷಿಣಿ ಕ್ಷೇತ್ರ ಆಯ್ಕೆ ಹಿಂದಿನ ಗುಟ್ಟು
ಸಮಾಜವಾದಿ ಚಿಂತನೆಯ ಮುಖಂಡ ಮಧ್ಯಪ್ರದೇಶ ಮೂಲದ ಸಮಾಜವಾದಿ ಚಿಂತನೆಯ ಮುಖಂಡ ಶರದ್ ಯಾದವ್ ಅವರು ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಅಥವಾ ನಿತೀಶ್ ಕುಮಾರ್ ಅವರ ಬೆಂಬಲಕ್ಕೆ ನಿಂತು ಚುನಾವಣೆಗೆ ಸಹಕಾರ ನೀಡುತ್ತಾ ಬಂದಿದ್ದರು. ಮಂಡಲ್ ಆಯೋಗ ಹೋರಾಟದ ಕಾಲದಿಂದ ಹಿಂದುಳಿದ ವರ್ಗದವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ 27ರಷ್ಟು ಮೀಸಲಾತಿ ಕಲ್ಪಿಸುವ ತನಕ ಎಲ್ಲವನ್ನು ಶರದ್ ಯಾದವ್ ಕಂಡಿದ್ದಾರೆ. ವಿಪಿ ಸಿಂಗ್ ಪ್ರಧಾನಿಯಾಗಿದ್ದಾಗ ಮಂಡಲ್ ಆಯೋಗ ವರದಿ ನೀಡಿದ್ದ ಬಿಪಿ ಮಂಡಲ್ ಅವರ ಗೌರವಾರ್ಥ ಅವರ ಕ್ಷೇತ್ರವಾದ ಮಾಧೇಪುರ್, ಬಿಹಾರ್ ಗಂಜ್ ನಲ್ಲಿ ಸುಭಾಷಿಣಿ ಸ್ಪರ್ಧಿಸಲು ಬಯಸಿದ್ದರು. ಮಾಧೇಪುರ್ ಕ್ಷೇತ್ರ ಆರ್ ಜೆಡಿ ಪಾಲಾಗಿದ್ದರಿಂದ ಬಿಹಾರಿಗಂಜ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಇದು ನನ್ನ ತಂದೆಯ ಕರ್ಮಭೂಮಿ
''ಇದು ನನ್ನ ತಂದೆ ಶರದ್ ಯಾದವ್ ಅವರ ಕರ್ಮಭೂಮಿ, ಕಳೆದ 25 ರಿಂದ 30 ವರ್ಷಗಳಿಂದ ಅವರಿಗೆ ನೀಡಿದ ಪ್ರೀತಿ, ಬೆಂಬಲವನ್ನು ನನಗೂ ನೀಡುತ್ತೀರಿ ಎಂಬ ನಂಬಿಕೆಯಿದೆ, ನಿಮ್ಮ ನಂಬಿಕೆಯನ್ನು ನಾನು ಹುಸಿಗೊಳಿಸುವುದಿಲ್ಲ'' ಎಂದು ಚುನಾವಣಾ ಪ್ರಚಾರದ ವೇಳೆ ಸುಭಾಷಿಣಿ ಹೇಳಿದರು.
''ನಾನು ನಿಮ್ಮ ಅಭ್ಯರ್ಥಿ ನಿಮ್ಮ ಮನೆ ಮಗಳು, ನಾನು ಇಲ್ಲಿ ನಿಮ್ಮ್ ಸೇವೆ ಮಾಡಲು ಬಂದಿದ್ದೇನೆ, ನನ್ನ ತಂದೆ ಕಂಡ ಕನಸನ್ನು ನನಸು ಮಾಡುತ್ತೇನೆ'' ಎಂದರು.
ಮಧ್ಯಪ್ರದೇಶದ ಸುಭಾಷಿಣಿ ರಾಜ್ ರಾವ್ ಅವರು ಹರ್ಯಾಣದ ಕಾಂಗ್ರೆಸ್ ಪಕ್ಷದ ಮುಖಂಡರ ಮನೆಯ ಸೊಸೆಯಾಗಿದ್ದು, ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಕಣಕ್ಕಿಳಿದಿದ್ದಾರೆ.

ಶರದ್ ಅವರಿಗಾಗಿ ಕೇಳಿಕೊಳ್ಳುತ್ತಿದ್ದೇನೆ
''ನಾನು ನನ್ನ ಭಾಷಣಗಳಲ್ಲಿ ಯಾವುದರ ಬಗ್ಗೆನೂ ಕೇಳೀಕೊಂಡಿಲ್ಲ, ನೀವು ಈ ಚುನಾವಣೆಯಲ್ಲಿ ಶರದ್ ಅವರ ಪುತ್ರಿಯನ್ನು ಗೆಲ್ಲಿಸಿ, ನನ್ನ ತಂಗಿಯನ್ನು ಗೆಲ್ಲಿಸಿ, ನಾನು ನನಗಾಗಿ ಕೇಳುತ್ತಿಲ್ಲ, ಶರದ್ ಅವರಿಗಾಗಿ ಕೇಳುತ್ತಿದ್ದೇನೆ, ನಿಮ್ಮ ಮುಖಂಡರಿಗಾಗಿ ಕೇಳಿಕೊಳ್ಳುತ್ತಿದ್ದೇನೆ'' ಎಂದು ರಾಹುಲ್ ಗಾಂಧಿ ಹೇಳಿದರು.

ಜೆಡಿಯು ಅಭ್ಯರ್ಥಿ ವಿರುದ್ಧ ಸುಭಾಷಿಣಿ ಸ್ಪರ್ಧೆ
ಎರಡು ಬಾರಿ ಜೆಡಿಯು ಶಾಸಕ ನಿರಂಜನ್ ಮೆಹ್ತಾ ಅವರ ವಿರುದ್ಧ ಸುಭಾಷಿಣಿ ಸ್ಪರ್ದಿಸುತ್ತಿದ್ದಾರೆ. ಲೋಕ ಜನಶಕ್ತಿ ಪಕ್ಷ ಅಭ್ಯರ್ಥಿ ವಿಜಯ್ ಕುಮಾರ್ ಸಿಂಗ್ ಹಾಗೂ ಜನಾಧಿಕಾರ್ ಪಕ್ಷದ ಪ್ರಭಾಶ್ ಕುಮಾರ್ ಕಣದಲ್ಲಿರುವ ಇತರೆ ಸ್ಪರ್ಧಿಗಳಾಗಿದ್ದಾರೆ.
ಜೆಡಿಯು ಆಭ್ಯರ್ಥಿ ಪರ ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಚಾರ ನಡೆಸಿದ್ದಾರೆ. ಆದರೆ, ತಮ್ಮ ಒಂದು ಕಾಲದ ಗೆಳೆಯ ಶರದ್ ಯಾದವ್ ಬಗ್ಗೆಯಾಗಲಿ, ಎದುರಾಳಿ ಬಣದ ಸ್ಪರ್ಧಿ ಸುಭಾಷಿಣಿ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ ಎಂಬುದು ವಿಶೇಷ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications