ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ನಿತೀಶ್‌ಗೆ ಸವಾಲು, ಸಿಬಿಐ ತನಿಖೆಗೆ ಸಿದ್ದ ಎಂದ ತೇಜಸ್ವಿ

|
Google Oneindia Kannada News

ಪಾಟ್ನಾ, ಅ. 8: ಬಿಹಾರದ ದಲಿತ ನಾಯಕ ರಾಷ್ಟ್ರೀಯ ಜನತಾ ದಳದ ಮಾಜಿ ಮುಖಂಡ ಶಕ್ತಿ ಮಲಿಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಬಂದಿರುವ ಆರೋಪಗಳನ್ನು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಅಲ್ಲಗೆಳೆದಿದ್ದಾರೆ. ''ಆರ್‌ಜೆಡಿ ಮಾಜಿ ಮುಖಂಡ ಶಕ್ತಿ ಮಲಿಕ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲಿ, ನನ್ನನ್ನು ಬಂಧಿಸಲಿ'' ಎಂದು ಸಿಎಂ ನಿತೀಶ್ ಅವರಿಗೆ ಪತ್ರ ಬರೆದು ಸವಾಲು ಹಾಕಿದ್ದಾರೆ

ದಲಿತ ನಾಯಕ ಶಕ್ತಿ ಮಲಿಕ್ ಅವರ ಹತ್ಯೆ ಪ್ರಕರಣದಲ್ಲಿ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ವಿರುದ್ಧ ಖಜಾಂಚಿ ಹಾಥ್ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಶಿರಾ, ಆರ್. ಆರ್. ನಗರ ಉಪ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಶಿರಾ, ಆರ್. ಆರ್. ನಗರ ಉಪ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ರಾಣಿಗಂಜ್(ಮೀಸಲು) ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿಯಲು ಶಕ್ತಿ ಕುಮಾರ್ ಮಲೀಕ್(40) ಸಿದ್ಧತೆ ನಡೆಸಿದ್ದರು. ಆದರೆ, ಅಕ್ಟೋಬರ್ 04ರಂದು ಪೂರ್ನಿಯಾ ಜಿಲ್ಲೆಯ ಅವರ ನಿವಾಸದ ಬಳಿ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ರಾಜಕೀಯ ದ್ವೇಷದಿಂದ ಆಗಿರುವ ಹತ್ಯೆ ಎಂದು ಸಂಚಲನ ಸೃಷ್ಟಿಯಾಗಿದೆ.

RJD leader murder: Tejashwai Yadav challenges CM Nitish to arrest me

ಅರ್ ಜೆ ಡಿಯ ಪರಿಶಿಷ್ಟ ಜಾತಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಕ್ತಿ ಕುಮಾರ್ ಅವರನ್ನು ಆರ್ ಜೆಡಿ ಕಡೆಯವರೇ ಹತ್ಯೆ ಮಾಡಿದ್ದಾರೆ ಎಂದು ಶಕ್ತಿ ಅವರ ಪತ್ನಿ ಖುಷ್ಬು ಕುಮಾರಿ ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ 50 ಲಕ್ಷ ರು ಎಂದು ಆರ್ ಜೆಡಿ ಬೇಡಿಕೆ ಇಟ್ಟಿತ್ತು. ಆದರೆ, ಶಕ್ತಿ ಅವರು ಒಪ್ಪದೆ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿದ್ದರು.

ದಲಿತ ನಾಯಕನ ಹತ್ಯೆ: ತೇಜಸ್ವಿ ಯಾದವ್ ವಿರುದ್ಧ ಎಫ್ಐಆರ್ ದಲಿತ ನಾಯಕನ ಹತ್ಯೆ: ತೇಜಸ್ವಿ ಯಾದವ್ ವಿರುದ್ಧ ಎಫ್ಐಆರ್

ಪಾರ್ಟಿ ಫಂಡ್ ಕೊಡದಿದ್ದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಅನಿಲ್, ತೇಜಸ್ವಿ, ತೇಜ್ ಅವಾಜ್ ಹಾಕುವ ವಿಡಿಯೋವನ್ನು ಶಕ್ತಿ ಅವರ ಕುಟುಂಬದವರು ಪೊಲೀಸರ ಮುಂದಿಟ್ಟಿದ್ದಾರೆ.

"ಇದು ಚುನಾವಣೆ ಸಂದರ್ಭದಲ್ಲಿ ಮಾಡಿರುವ ಸುಳ್ಳು ಆರೋಪ, ಯಾವುದೆ ಆಧಾರಗಳಿಲ್ಲದ ಹೇಳಿಕೆ ಮುಂದಿಟ್ಟುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ'' ಎಂದು ಆರ್ ಜೆ ಡಿ ವಕ್ತಾರ ಮೃತ್ಯುಂಜಯ್ ತಿವಾರಿ ಹೇಳಿದ್ದಾರೆ.

ಜೆಡಿಯು ಸೇರಿದ್ದ ಮಾಜಿ ಡಿಜಿಪಿ ಪಾಂಡೆಗೆ ಟಿಕೆಟ್ ನಿರಾಕರಣೆ ಜೆಡಿಯು ಸೇರಿದ್ದ ಮಾಜಿ ಡಿಜಿಪಿ ಪಾಂಡೆಗೆ ಟಿಕೆಟ್ ನಿರಾಕರಣೆ

ಬಿಹಾರ ವಿಧಾನಸಭೆ ವಿಪಕ್ಷ ನಾಯಕ ತೇಜಸ್ವಿ ಯಾದವ್, ಮಾಜಿ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್, ಅನಿಲ್ ಕುಮಾರ್ ಸಾಧು(ಎಲ್ ಜೆಪಿಯ ರಾಮ್ ವಿಲಾಸ್ ಪಾಸ್ವಾನ್ ಅಳಿಯ), ಕಲೋ ಪಾಸ್ವಾನ್‌, ಸುನೀತಾ ದೇವಿ ಹಾಗೂ ಮನೋಜ್‌ ಪಾಸ್ವಾನ್‌ ಇನ್ನಿತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ಐ ಆರ್ ಹಾಕಲಾಗಿದೆ ಎಂದು ಠಾಣಾಧಿಕಾರಿ ಸುನಿಲ್ ಕುಮಾರ್ ಹೇಳಿದ್ದಾರೆ.

English summary
RJD leader Malik murder Case: RJD leader Tejashwai Yadav challenged CM Nitish to arrest him or oder CBI probe on the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X