Get Updates
Get notified of breaking news, exclusive insights, and must-see stories!

ಬಿಹಾರ: ಸತ್ತ ಮಗು ಬದುಕಿ ಬರುವ ಭರವಸೆಯಿಂದ ಕುಟುಂಬ ಮಾಡಿದ್ದು ಈ ಕೆಲಸ

ವೈಶಾಲಿ, ಸೆಪ್ಟೆಂಬರ್ 1: ವಿಜ್ಞಾನ ಕ್ಷೇತ್ರದಲ್ಲಿ ಇಡೀ ವಿಶ್ವವೇ ಹೊಸ ತಂತ್ರಜ್ಞಾನದೊಂದಿಗೆ ಮುನ್ನಡೆಯುತ್ತಿದೆ. ಬಿಹಾರದ ಜಿಲ್ಲೆಯೊಂದರಲ್ಲಿ ಜನರು ಇನ್ನೂ ಮೂಢನಂಬಿಕೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಶಿಕ್ಷಣದ ಕೊರತೆಯಿದ್ದು ಇದರಿಂದಾಗಿ ಜನರು ಮೂಢನಂಬಿಕೆಗಳು ಮತ್ತು ದುಶ್ಚಟಗಳಲ್ಲಿ ಬದುಕಬೇಕಾದ ಅನಿವಾರ್ಯತೆ ಇದೆ. ವೈಶಾಲಿ ಜಿಲ್ಲೆಯ ಬಿದ್ದುಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಚಿತ್ರ ಘಟನೆಯ ಪ್ರಕರಣವೊಂದು ದಾಖಲಾಗಿದೆ. ತಾಂತ್ರಿಕ ವಿಧಾನದ ಮೂಲಕ ಸತ್ತ ಮಗುವನ್ನು ಜೀವಂತಗೊಳಿಸುವ ಯತ್ನ ನಡೆದಿದೆ. ಮೃತ ಮಗುವಿನ ಸಂಬಂಧಿಕರು ತಮ್ಮ ಮಗು ಹಳೆಯ ತಾಂತ್ರಿಕ ವಿಧಾನದ ಮೂಲಕ ಪುನರುಜ್ಜೀವನಗೊಳ್ಳುತ್ತದೆ ಎಂದು ಭಾವಿಸಿರುವುದು ಕಂಡು ಬಂದಿದೆ.

ಬಿದ್ದುಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೈಲಿ ಚೌಕ್ ಖಾರಿಕಾದಲ್ಲಿ ಹಾವು ಕಡಿತದಿಂದ ಮಗು ಸಾವನ್ನಪ್ಪಿದೆ. ರಾಜು ಪಾಸ್ವಾನ್ (ಕೈಲಿ ಚೌಕ್ ಖಾರಿಕಾ ನಿವಾಸಿ) ಅವರ 9 ವರ್ಷದ ಮಗ ಅಭಿಷೇಕ್ ಕುಮಾರ್ ಸಾವನ್ನಪ್ಪಿದ್ದನು. ಹಾವು ಕಡಿತದಿಂದ ಮಗು ಸಾವನ್ನಪ್ಪಿತ್ತು.

ಮಗು ಶಾಲೆ ಮುಗಿಸಿ ಮನೆಗೆ ಬಂದಿದ್ದು, ಈ ವೇಳೆ ಶಾಲಾ ಬ್ಯಾಗ್ ಇಡಲು ಹೋದಾಗ ಮಗುವಿಗೆ ಹಾವು ಕಚ್ಚಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕುಟುಂಬಸ್ಥರು ಚಿಕಿತ್ಸೆಗಾಗಿ ಮುಜಾಫರ್‌ಪುರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷಿಸಿದ ನಂತರ ಮಗು ಸಾವನ್ನಪ್ಪಿದೆ ಎಂದು ಘೋಷಿಸಿದರು.

ಸತ್ತ ಮಗುವಿಗಾಗಿ ಕುಟುಂಬ ಮಾಡಿದ್ದೇನು?

ಸತ್ತ ಮಗುವಿಗಾಗಿ ಕುಟುಂಬ ಮಾಡಿದ್ದೇನು?

ಮಗು ಸತ್ತಿದೆ ಎಂದು ವೈದ್ಯರು ಘೋಷಿಸಿದರು ಆದರೆ ಮಗುವಿನ ಕುಟುಂಬ ಸದಸ್ಯರು ತಮ್ಮ ಮಗುವನ್ನು ಬದುಕಿಸಲು ತಾಂತ್ರಿಗಳ ಬಳಿಗೆ ಕರೆದೊಯ್ದಿದ್ದಾರೆ. ಅಲ್ಲಿ ನಡೆದಿದ್ದು ಬೇರೆ. ಮಗು ಮಾಟ ಮಂತ್ರದಿಂದ ಜೀವಂತವಾಗಿ ಹಿಂದಿರುಗುವ ನಿರೀಕ್ಷೆಯಿಂದ ಕುಟುಂಬ ಮತ್ತೊಂದು ಪ್ರಯತ್ನವನ್ನು ಮಾಡಿದೆ. ಈ ವಿಷಯ ಮಾಧ್ಯಮದವರಿಗೆ ತಿಳಿದಾಗ ಗ್ರಾಮಸ್ಥರು ಕೂಡ ಸತ್ಯ ಮುಚ್ಚಿಡಲು ಯತ್ನಿಸಿದರು. ಆದರೆ ಪೊಲೀಸ್ ವಿಚಾರಣೆ ಬಳಿಕ ಈ ವಿಷಯ ಬಹಿರಂಗಗೊಂಡಿದೆ.

ಮರದ ತೆಪ್ಪದಲ್ಲಿ ಮಗುವಿನ ದೇಹ

ಮರದ ತೆಪ್ಪದಲ್ಲಿ ಮಗುವಿನ ದೇಹ

ಮಗುವಿನ ದೇಹವನ್ನು ಆಲದ ಮರದ ತೆಪ್ಪದಲ್ಲಿ (ದೋಣಿಯಂತಹ ಕಂಬ) ಮಗುವಿನ ದೇಹವನ್ನು ಮುಚ್ಚಲಾಗಿದೆ ಎಂದು ಸ್ಥಳೀಯ ಪಂಡಿತರು ತಿಳಿಸಿದ್ದಾರೆ. ಈ ವಿಧಾನದಿಂದ ಮಗು ಜೀವಂತವಾಗಿ ಹಿಂತಿರುಗುವ ನಿರೀಕ್ಷೆ ಕುಟುಂಬಕ್ಕಿತ್ತು ಎಂದು ಹೇಳಲಾಗಿದೆ. ಮಗು ಬದುಕಿ ಬರಲಿ ಎಂಬ ನಿರೀಕ್ಷೆಯಲ್ಲಿ ಬಾಳೆಲೆಯ ಮೇಲೆ ಹಲಗೆಯನ್ನೂ ಹಾಕಲಾಗಿತ್ತು. ಆ ಬೋರ್ಡ್ ಮೇಲೆ ಮಗುವಿನ ಹೆಸರು, ತಂದೆಯ ಹೆಸರು, ಅಜ್ಜನ ಹೆಸರು, ಮನೆ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಬರೆಯಲಾಗಿದೆ.

ಹಾವು ಕಡಿತದಿಂದ 9 ವರ್ಷದ ಮಗು ಸಾವು

ಹಾವು ಕಡಿತದಿಂದ 9 ವರ್ಷದ ಮಗು ಸಾವು

ಶವವನ್ನು ಹಲಗೆ ಸಮೇತ ತೆಪ್ಪದ ಮೇಲೆ ಇಟ್ಟು ನದಿಗೆ ಬಿಡಲಾಗಿದೆ. ಮಗು ಶವ ನದಿಯಲ್ಲಿ ಹೋಗಿ ಪುನಃ ಜೀವಂತವಾಗಿ ಹಿಂದಿರುಗುತ್ತದೆ. ಹಿಂದಿರುವಾಗ ಆ ಮಗುವಿಗೆ ವಿಳಾಸ ತಿಳಿದಿರಲಿ. ಅಥವಾ ಅದು ವಾಪಾಸ್ ಆಗಲು ಯಾರಾದರೂ ಸಹಾಯ ಮಾಡಲು ವಿಳಾಸ ತಿಳಿದಿರಲಿ ಎಂದು ತೆಪ್ಪದ ದೋಣಿಗೆ ಪ್ಲೇಕಾರ್ಡ್‌ನಲ್ಲಿ ವಿಳಾಸ ಬರೆಯಲಾಗಿದೆ. ಮಗು ಜೀವಂತವಾಗಿ ಮನೆಗೆ ಬರಲಿದೆ ಎಂದು ಕುಟುಂಬಸ್ಥರು ಬಯಸಿದ್ದಾರೆ.

ಮೂಢನಂಬಿಕೆಗೆ ಮುಂದಾದ ಕುಟುಂಬಸ್ಥರು

ಮೂಢನಂಬಿಕೆಗೆ ಮುಂದಾದ ಕುಟುಂಬಸ್ಥರು

3ನೇ ತರಗತಿಯ ವಿದ್ಯಾರ್ಥಿ ಅಭಿಷೇಕ್ ಆಗಷ್ಟೇ ಶಾಲೆಯಿಂದ ಹಿಂದಿರುಗಿದ್ದ. ಮನೆಗೆ ವಾಪಸಾದ ಬಳಿಕ ಶಾಲಾ ಬ್ಯಾಗ್ ಅನ್ನು ಇಡಲು ಹೋದ ತಕ್ಷಣ ಹಾವು ಕಚ್ಚಿದೆ. ಮಗುವಿನ ಕುಟುಂಬ ಸದಸ್ಯರಿಗೆ ತಂತ್ರಿಯಲ್ಲಿ ಹೆಚ್ಚಿನ ನಂಬಿಕೆ ಇತ್ತು, ಆದ್ದರಿಂದ ಅವರು ಸ್ಥಳೀಯ ತಂತ್ರಿಗಳನ್ನು ಕರೆದು ತಂತ್ರ ಕ್ರಿಯೆಯ ಮೂಲಕ ಮಗುವನ್ನು ಗುಣಪಡಿಸುವಂತೆ ಕೇಳಿಕೊಂಡರು. ಮಗು ಮಂತ್ರದಿಂದ ಚೇತರಿಸಿಕೊಳ್ಳದಿದ್ದಾಗ, ಅವನನ್ನು ಮುಜಾಫರ್‌ಪುರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಮಗು ಸತ್ತಿದೆ ಎಂದು ಘೋಷಿಸಿದರು. ಬಳಿಕ ಮಗುವಿನ ಕುಟುಂಬಸ್ಥರು ಮೂಢನಂಬಿಕೆಗೆ ಮುಂದಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+