Get Updates
Get notified of breaking news, exclusive insights, and must-see stories!

ಬಿಹಾರ್: ಮಾವೋವಾದಿ ನಾಯಕ ಮನಶ್ಯಾಮ್ ದಾಸ್‌ ಬಂಧನ- 'ಅಗ್ನಿಪಥ್' ಪ್ರತಿಭಟನೆಗೆ ಲಿಂಕ್

ಪಾಟ್ನಾ, ಆಗಸ್ಟ್ 6: ಬಿಹಾರದಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಹಿಂಸಾಚಾರದಲ್ಲಿ ಪ್ರಮುಖ ಮಾವೋವಾದಿ ನಾಯಕರು ಭಾಗಿಯಾಗಿದ್ದಾರೆ ಎಂದು ರಾಜ್ಯದ ಪೊಲೀಸರು ಹೇಳಿದ್ದಾರೆ. ಇದು ದೊಡ್ಡ ಪ್ರಗತಿಯಾಗಿದೆ. ಶುಕ್ರವಾರ ಉನ್ನತ ನಾಯಕನ ಬಂಧನದ ನಂತರ ಮಾವೋವಾದಿ ನಂಟು ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಪಂಕಜ್ ಕುಮಾರ್ ಹೇಳಿದರು.

ಜೂನ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಲಖಿಸರಾಯ್‌ನಲ್ಲಿ ರೈಲಿಗೆ ಬೆಂಕಿ ಹಚ್ಚುವಲ್ಲಿ ಸಹಾನುಭೂತಿ ಹೊಂದಿರುವವರ ಜೊತೆಗೂಡಿ ಪಾತ್ರ ವಹಿಸಿರುವುದಾಗಿ ಮಾವೋವಾದಿ ನಾಯಕ ಪೊಲೀಸ್ ಅಧಿಕಾರಿಗಳು ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. "ಈ ಗುಂಪು ಪ್ರತಿಭಟನಾಕಾರರ ಒಂದು ವಿಭಾಗವನ್ನು ಬೆಂಕಿ ಹಚ್ಚಲು ಮತ್ತು ರೈಲ್ವೆ ಆಸ್ತಿಗಳನ್ನು ಧ್ವಂಸ ಮಾಡಲು ಪ್ರೇರೇಪಿಸಿತು" ಎಂದು ಹಿರಿಯ ಪೊಲೀಸ್ ಪಂಕಜ್ ಕುಮಾರ್ ಹೇಳಿದ್ದಾರೆ.

ತೆಲಂಗಾಣ ಪೋಲೀಸರಿಂದ ಬಂಧನ

ತೆಲಂಗಾಣ ಪೋಲೀಸರಿಂದ ಬಂಧನ

ತೆಲಂಗಾಣ ಪೋಲೀಸರ ಗುಪ್ತಚರ ವಿಭಾಗ ನೀಡಿದ ಸುಳಿವಿನ ಮೇರೆಗೆ ಮಾವೋವಾದಿ ನಾಯಕ ಮನಶ್ಯಾಮ್ ದಾಸ್‌ನನ್ನು ಲಖಿಸರಾಯ್ ನಗರದಲ್ಲಿ ಬಂಧಿಸಲಾಗಿದೆ. ಆತ ಕೆಲವು ವರ್ಷಗಳ ಹಿಂದೆ ಬಾಡಿಗೆಗೆ ಪಡೆದಿದ್ದ ಮನೆಯಿಂದ ಮಾವೋವಾದಿಗಳಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದನು.

ಮಾವೋವಾದಿಗಳಿಗೆ ವರ್ಷಗಳ ಕಾಲ ಸಹಾಯ

ಮಾವೋವಾದಿಗಳಿಗೆ ವರ್ಷಗಳ ಕಾಲ ಸಹಾಯ

ಮನಶ್ಯಾಮ್ ದಾಸ್‌ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ರಾಜ್ಯದ ನಕ್ಸಲೀಯ ಸಂಘಟನೆಗಳ ಪ್ರಮುಖ ಮುಖಂಡರೊಂದಿಗೆ ನೇರ ಸಂಪರ್ಕದಲ್ಲಿ ಲಖಿಸರಾಯ್ ನಗರದಲ್ಲಿ ತಂಗುವ ಮೂಲಕ ಮಾವೋವಾದಿಗಳಿಗೆ ವರ್ಷಗಳ ಕಾಲ ಸಹಾಯ ಮಾಡುತ್ತಿದ್ದು, ಅವರ ಕೊಠಡಿಯಲ್ಲಿ ಮೊಬೈಲ್, ಮಾವೋವಾದಿ ಸಾಹಿತ್ಯ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಮನಶ್ಯಾಮ್ ದಾಸ್‌ ಮಾವೋವಾದಿ ನಾಯಕರನ್ನು ಭೇಟಿಯಾಗಲು ಕಾಡಿಗೆ ಹೋಗುತ್ತಿದ್ದರು. ನಗರದ ಅರ್ಧ ಡಜನ್ ನಾಯಕರಿಗೂ ಆತನೊಂದಿಗೆ ಸಂಪರ್ಕವಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತನಿಖೆಯಿಂದ ಬಯಲಾಗಿದೆ.

ಮನಶ್ಯಾಮ್ ದಾಸ್‌ ವಿಚಾರಣೆ

ಮನಶ್ಯಾಮ್ ದಾಸ್‌ ವಿಚಾರಣೆ

ಮನಶ್ಯಾಮ್ ದಾಸ್‌ ಪೊಲೀಸ್ ಅಧಿಕಾರಿಗಳು ಹೇಳುವಂತೆ, ಭಾಗಲ್ಪುರದ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು ನಕ್ಸಲರಿಗೆ ನಿಕಟವಾಗಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಆದರೆ ಪ್ರಾಧ್ಯಾಪಕರು ಅವರ ಪಾತ್ರವನ್ನು ನಿರಾಕರಿಸಿದ್ದಾರೆ. ನಗರ ಪ್ರದೇಶದಿಂದ ಮಾವೋವಾದಿ ನಾಯಕನನ್ನು ಬಂಧಿಸಿರುವುದು ಪೊಲೀಸರ ಮಾಹಿತಿ ವ್ಯವಸ್ಥೆಯ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

2000 ಕ್ಕೂ ಹೆಚ್ಚು ರೈಲುಗಳಿಗೆ ಹಾನಿ

2000 ಕ್ಕೂ ಹೆಚ್ಚು ರೈಲುಗಳಿಗೆ ಹಾನಿ

ಇತ್ತೀಚೆಗಷ್ಟೇ ಆರಂಭಿಸಲಾದ ಅಗ್ನಿಪಥ ಯೋಜನೆ ವಿರುದ್ಧ ಬಿಹಾರದಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ರೈಲ್ವೆ ಆಸ್ತಿಗಳನ್ನು ಧ್ವಂಸಗೊಳಿಸಲಾಯಿತು. ವಸ್ತುಗಳನ್ನು ಸುಟ್ಟುಹಾಕಲಾಯಿತು ಮತ್ತು ದಾಳಿ ಮಾಡಲಾಯಿತು. ದೇಶಾದ್ಯಂತ ಅಗ್ನಿಪಥ್ ಪ್ರತಿಭಟನೆಯಿಂದಾಗಿ ಹಲವಾರು ಕೋಟಿ ಮೌಲ್ಯದ ಆಸ್ತಿ ಮತ್ತು 2000 ಕ್ಕೂ ಹೆಚ್ಚು ರೈಲುಗಳಿಗೆ ಹಾನಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+