ನೀರೇ ಇಲ್ಲದೆ ಜಗತ್ತು ಶೂನ್ಯವಾಗುತ್ತದೆ.. ಯಾವಾಗ ಗೊತ್ತಾ?
ನವದೆಹಲಿ, ಮೇ 08: ನೀರು ಏಷ್ಟು ಅಮೂಲ್ಯವಾಗಿದೆ ಎಂದರೆ ದಿನನಿತ್ಯವು ಮೂಲ ಅವಶ್ಯಕತೆಯೇ ನೀರು. ನೀರು ಇಲ್ಲದಿದ್ದರೆ ಜಗತ್ತೇ ಶೂನ್ಯ ಅನಿಸುತ್ತದೆ. ಆದರೆ ನೀರಿನ ಕೊರತೆಯು 2050ರ ಹೊತ್ತಿಗೆ ಜಗತ್ತಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಶೇ.80ರಷ್ಟು ಕೃಷಿ ಪ್ರದೇಶಗಳಲ್ಲಿ ಅಮೂಲ್ಯ ನೀರು ಸಿಗುವುದಿಲ್ಲ ಎಂದು ಜಾಗತಿಕ ಕೃಷಿಗಾಗಿ ನೀರಿನ ಅವಶ್ಯಕತೆಗಳ ಕುರಿತು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ ಸಂಶೋಧನೆ ನಡೆಸಿದೆ.

ಕೃಷಿ ಪ್ರದೇಶವು ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ
ಹವಾಮಾನ ಬದಲಾವಣೆಯಿಂದ ಜಗತ್ತು ವಿನಾಶದ ಅಂಚಿನಲ್ಲಿದೆ. ಈ ಪರಿಸ್ಥಿತಿ ಬದಲಾಗದಿದ್ದರೆ, 2050ರ ವೇಳೆಗೆ ಪ್ರಪಂಚದ 80 ಪ್ರತಿಶತದಷ್ಟು ಕೃಷಿ ಪ್ರದೇಶವು ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಜಾಗತಿಕ ಕೃಷಿಗಾಗಿ ಪ್ರಸ್ತುತ ಮತ್ತು ಭವಿಷ್ಯದ ನೀರಿನ ಅವಶ್ಯಕತೆಗಳ ಕುರಿತು ಬೀಜಿಂಗ್ನಲ್ಲಿರುವ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ನ ನಡೆಸಿದ ಸಂಶೋಧನೆಯಲ್ಲಿ ಇದು ಬಹಿರಂಗವಾಗಿದೆ.

ಮಾನವ ಜನಸಂಖ್ಯೆಗಿಂತ ಎರಡು ಪಟ್ಟು ವೇಗವಾಗಿ ಹೆಚ್ಚಾಗಿದೆ
ಕಳೆದ 100 ವರ್ಷಗಳಲ್ಲಿ ಜಗತ್ತಿನಲ್ಲಿ ನೀರಿನ ಬೇಡಿಕೆಯು ಮಾನವ ಜನಸಂಖ್ಯೆಗಿಂತ ಎರಡು ಪಟ್ಟು ವೇಗವಾಗಿ ಹೆಚ್ಚಾಗಿದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಕೃಷಿ ತಂತ್ರಗಳು ಕೃಷಿ ಮಣ್ಣಿನಲ್ಲಿ ಮಳೆ ನೀರನ್ನು ಸಂರಕ್ಷಿಸುತ್ತದೆ ಇದರಿಂದಾಗಿ ಕೃಷಿ ಪ್ರದೇಶಗಳಲ್ಲಿಯೂ ನೀರನ್ನು ಉಳಿಸಿಕೊಳ್ಳುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
"ಹಸಿರು ಮನೆ ಅನಿಲ ಹೊರಸೂಸುವಿಕೆಯ ಹೆಚ್ಚಳವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಈ ಹೊರಸೂಸುವಿಕೆಯು ಹೀಗೆಯೇ ಮುಂದುವರಿದರೆ, ಬೆಳೆ ಭೂಮಿಯಲ್ಲಿ ನೀರಿನ ಕೊರತೆಯು ಹೆಚ್ಚು ವೇಗವಾಗಿ ಸಂಭವಿಸಬಹುದು. ಇದು ಆಹಾರ ಭದ್ರತೆಗೆ ದೊಡ್ಡ ಅಪಾಯವನ್ನು ಉಂಟುಮಾಡಬಹುದು. ನೀರಿನ ಬಿಕ್ಕಟ್ಟು ತಪ್ಪಿಸಲು ದೊಡ್ಡ ಮಟ್ಟದ ಕಾರ್ಯತಂತ್ರ ರೂಪಿಸಬೇಕಿದೆ,'' ಎಂದು ಪ್ರಮುಖ ಸಂಶೋಧಕ ಲಿಯು ಹೇಳಿದ್ದಾರೆ.

ಇದಕ್ಕಾಗಿ ಹಳೆಯ ಸಂಪ್ರದಾಯಗಳಿಗೆ ಮರಳಬೇಕಿದೆ
"ಇದಕ್ಕಾಗಿ ಹಳೆಯ ಸಂಪ್ರದಾಯಗಳಿಗೆ ಮರಳಬೇಕಿದೆ. ಹುಲ್ಲಿನಿಂದ ಮಣ್ಣನ್ನು ಮುಚ್ಚುವುದರಿಂದ ಆವಿಯಾಗುವಿಕೆ ಕಡಿಮೆಯಾಗುತ್ತದೆ. ಅದೇ ರೀತಿ ಕೃಷಿಯಲ್ಲಿ ಕಾಲಕ್ಕೆ ತಕ್ಕಂತೆ ನೀರು ಭೂಮಿಗೆ ನೀರು ಉಣಿಸಬೇಕು. ಮಳೆಗೆ ಅನುಗುಣವಾಗಿ ಋತುಮಾನಕ್ಕೆ ಅನುಗುಣವಾಗಿ ಕೃಷಿ ಪದ್ಧತಿ ಬದಲಾಗಬೇಕಾಗಿದ್ದು ಉತ್ತಮ ನೀರಾವರಿ ವ್ಯವಸ್ಥೆಗೆ ಗಮನ ನೀಡಬೇಕು," ಎಂದು ಅವರು ಸಂಶೋಧನೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲೂ ಮಳೆ ಕಡಿಮೆ ಆಗಲಿದೆ:
ಉತ್ತರ-ಪಶ್ಚಿಮ ಭಾರತ, ಮಧ್ಯ-ಪಶ್ಚಿಮ ಅಮೆರಿಕದಂತಹ ಪ್ರದೇಶಗಳು ತೀವ್ರ ನೀರಿನ ಕೊರತೆಯನ್ನು ಎದುರಿಸಲಿವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಇದರಿಂದ ಸಾಗುವಳಿ ಭೂಮಿ ಕುಗ್ಗುವ ಸಾಧ್ಯತೆ ಇದೆ. ಈಶಾನ್ಯ ಚೀನಾದಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಅಮೇರಿಕಾದ ಕೊಲೊರಾಡೋ ನದಿಯ ಜಲಾನಯನ ಪ್ರದೇಶವು ಕುಗ್ಗುತ್ತಿದೆ ಎಂದು ಅಧ್ಯಯನ ಹೇಳಿದೆ. ಇದಕ್ಕಾಗಿ ಜಲಾಶಯಗಳಲ್ಲಿ ಕೋಟ್ಯಂತರ ಗ್ಯಾಲನ್ ನೀರು ಸಂಗ್ರಹಿಸುವುದಾಗಿಯೂ ಅಮೆರಿಕ ಘೋಷಿಸಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications