Get Updates
Get notified of breaking news, exclusive insights, and must-see stories!

ಸುನಂದಾ ಹತ್ಯೆ : ಸಿಟ್ ಪ್ರಶ್ನೆಗೆ ತರೂರ್ ಕೊಟ್ಟ ಉತ್ತರ

ಸುನಂದಾ ಪುಷ್ಕರ್ ಹತ್ಯೆ ಪ್ರಕರಣದಲ್ಲಿ ಅವರ ಪತಿ ಶಶಿ ತರೂರ್‌ರನ್ನು ವಿಶೇಷ ತನಿಖಾ ದಳದ ಸದಸ್ಯರು ಗುರುವಾರ ಸುಮಾರು ಐದು ಗಂಟೆಗಳ ಕಾಲ ಪ್ರಶ್ನೆಗೊಳಪಡಿಸಿದರು. ಈ ಬಾರಿ ಎಲ್ಲ ಪ್ರಶ್ನೆಗಳೂ ಐಪಿಎಲ್ ವಿವಾದದ ಕುರಿತಾಗಿತ್ತು ಎಂದು ಮೂಲಗಳು ತಿಳಿಸಿವೆ.

ಸಿಟ್ ಕೇಳಿದ ಪ್ರಶ್ನೆಗಳು : ಐಪಿಎಲ್ ಪಂದ್ಯಾವಳಿಯ ಕೊಚ್ಚಿ ಟಸ್ಕರ್ಸ್ ತಂಡದ ವ್ಯವಹಾರದಲ್ಲಿ ಸುನಂದಾ ಪುಷ್ಕರ್ ಅವರು ಮುಂಚೂಣಿಯಲ್ಲಿದ್ದರೆ? ಸುನಂದಾ ಅವರು ತಮ್ಮ ಪಾಲಿನ ಸ್ವೀಟ್ ಇಕ್ವಿಟಿ ಹಣ 75 ಕೋಟಿ ರು.ಗಳನ್ನು ಬಿಟ್ಟುಬಿಡಬೇಕೆಂದು ತರೂರ್ ಸಲಹೆ ನೀಡಿದ್ದರೇ? [ಅಮರ್ ಸಿಂಗ್ ಗೆಸಮನ್ಸ್]

ಸುನಂದಾ ಅವರು ಹಣ ಕೇಳಿದ್ದರೂ ಕೊಡದೇ ತಮ್ಮಲ್ಲಿಯೇ ಇಟ್ಟುಕೊಂಡಿದ್ದರೇ? ಐಪಿಎಲ್ ವಿವಾದವು ಶಶಿ ತರೂರ್ ಹಾಗೂ ಸುನಂದಾ ಪುಷ್ಕರ್ ಮಧ್ಯೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಗಿತ್ತೇ? ಸುನಂದಾ ಅವರು ನಿಮ್ಮ ಅಪರಾಧಗಳನ್ನು ಮುಚ್ಚಿಡುತ್ತಿದ್ದಾರೆಂದು ಪತ್ರಕರ್ತೆಯೋರ್ವರಿಗೆ ಹೇಳಿದ್ದೇಕೆ? [ಕುರುಡು ಕಾಂಚಾಣದ ಕೈವಾಡ]

shashi

ತರೂರ್ ಕೊಟ್ಟ ಉತ್ತರಗಳು : ಶಶಿ ತರೂರ್ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಸುನಂದಾ ಅವರ ಮೇಲೆ ಒತ್ತಡಗಳಿರಲಿಲ್ಲ. ಯಾವುದೇ ಸ್ವೀಟ್ ಇಕ್ವಿಟಿ ಹಣ ನೀಡಬೇಕೆಂಬ ಬಲವಂತವನ್ನೂ ಮಾಡಿರಲಿಲ್ಲ ಎಂದು ತರೂರ್ ಉತ್ತರಿಸಿದ್ದಾರೆ. [ಸಾಕ್ಷಿ ನಾಶ : ನಾಲ್ವರ ಮೇಲಿದೆ ಶಂಕೆ]

ಐಪಿಎಲ್ ಕುರಿತು ಇಬ್ಬರೂ ಸೇರಿ ನಿರ್ಧಾರ ಪಡೆದಿದ್ದೇವೆ. ಈ ಮಧ್ಯೆ ಯಾವುದೇ ವಿವಾದ ಉಂಟಾಗಿಲ್ಲ ಎಂದು ತರೂರ್ ತಿಳಿಸಿದ್ದಾರೆ. ಸುನಂದಾ ಅವರು ಐಪಿಎಲ್ ವ್ಯವಹಾರದಲ್ಲಿ ಬದಲಿ ಪ್ರತಿನಿಧಿಯಾಗಿರಲಿಲ್ಲ. ಅಲ್ಲದೆ, ಸ್ವೀಟ್ ಇಕ್ವಿಟಿ ಹಣವು ನನಗೆ ಸಂಬಂಧಿಸಿದ್ದಲ್ಲ. ಆದ್ದರಿಂದ ಸುನಂದಾ ಅವರನ್ನು ಬದಲಿ ಪ್ರತಿನಿಧಿ ಎಂದು ಕರೆಯಲು ಸಾಧ್ಯವಿಲ್ಲ. [ಬಟ್ಟೆ, ಶೂ ಒಯ್ದವರು ಯಾರು?]

ಐಪಿಎಲ್ ಕೇಂದ್ರಿತ ತನಿಖೆ : ಹತ್ಯೆ ಪ್ರಕರಣ ತನಿಖೆಯಲ್ಲಿ ಐಪಿಎಲ್ ವಿವಾದವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು. ಅದು ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಇದರಿಂದ ಪಿತೂರಿ ಸರಿಯಾಗಿ ಅರ್ಥವಾಗುತ್ತದೆ ಎಂದು ತಿಳಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+