ಸುನಂದಾ ಹತ್ಯೆ : ಸಿಟ್ ಪ್ರಶ್ನೆಗೆ ತರೂರ್ ಕೊಟ್ಟ ಉತ್ತರ
ಸುನಂದಾ ಪುಷ್ಕರ್ ಹತ್ಯೆ ಪ್ರಕರಣದಲ್ಲಿ ಅವರ ಪತಿ ಶಶಿ ತರೂರ್ರನ್ನು ವಿಶೇಷ ತನಿಖಾ ದಳದ ಸದಸ್ಯರು ಗುರುವಾರ ಸುಮಾರು ಐದು ಗಂಟೆಗಳ ಕಾಲ ಪ್ರಶ್ನೆಗೊಳಪಡಿಸಿದರು. ಈ ಬಾರಿ ಎಲ್ಲ ಪ್ರಶ್ನೆಗಳೂ ಐಪಿಎಲ್ ವಿವಾದದ ಕುರಿತಾಗಿತ್ತು ಎಂದು ಮೂಲಗಳು ತಿಳಿಸಿವೆ.
ಸಿಟ್ ಕೇಳಿದ ಪ್ರಶ್ನೆಗಳು : ಐಪಿಎಲ್ ಪಂದ್ಯಾವಳಿಯ ಕೊಚ್ಚಿ ಟಸ್ಕರ್ಸ್ ತಂಡದ ವ್ಯವಹಾರದಲ್ಲಿ ಸುನಂದಾ ಪುಷ್ಕರ್ ಅವರು ಮುಂಚೂಣಿಯಲ್ಲಿದ್ದರೆ? ಸುನಂದಾ ಅವರು ತಮ್ಮ ಪಾಲಿನ ಸ್ವೀಟ್ ಇಕ್ವಿಟಿ ಹಣ 75 ಕೋಟಿ ರು.ಗಳನ್ನು ಬಿಟ್ಟುಬಿಡಬೇಕೆಂದು ತರೂರ್ ಸಲಹೆ ನೀಡಿದ್ದರೇ? [ಅಮರ್ ಸಿಂಗ್ ಗೆಸಮನ್ಸ್]
ಸುನಂದಾ ಅವರು ಹಣ ಕೇಳಿದ್ದರೂ ಕೊಡದೇ ತಮ್ಮಲ್ಲಿಯೇ ಇಟ್ಟುಕೊಂಡಿದ್ದರೇ? ಐಪಿಎಲ್ ವಿವಾದವು ಶಶಿ ತರೂರ್ ಹಾಗೂ ಸುನಂದಾ ಪುಷ್ಕರ್ ಮಧ್ಯೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಗಿತ್ತೇ? ಸುನಂದಾ ಅವರು ನಿಮ್ಮ ಅಪರಾಧಗಳನ್ನು ಮುಚ್ಚಿಡುತ್ತಿದ್ದಾರೆಂದು ಪತ್ರಕರ್ತೆಯೋರ್ವರಿಗೆ ಹೇಳಿದ್ದೇಕೆ? [ಕುರುಡು ಕಾಂಚಾಣದ ಕೈವಾಡ]

ತರೂರ್ ಕೊಟ್ಟ ಉತ್ತರಗಳು : ಶಶಿ ತರೂರ್ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಸುನಂದಾ ಅವರ ಮೇಲೆ ಒತ್ತಡಗಳಿರಲಿಲ್ಲ. ಯಾವುದೇ ಸ್ವೀಟ್ ಇಕ್ವಿಟಿ ಹಣ ನೀಡಬೇಕೆಂಬ ಬಲವಂತವನ್ನೂ ಮಾಡಿರಲಿಲ್ಲ ಎಂದು ತರೂರ್ ಉತ್ತರಿಸಿದ್ದಾರೆ. [ಸಾಕ್ಷಿ ನಾಶ : ನಾಲ್ವರ ಮೇಲಿದೆ ಶಂಕೆ]
ಐಪಿಎಲ್ ಕುರಿತು ಇಬ್ಬರೂ ಸೇರಿ ನಿರ್ಧಾರ ಪಡೆದಿದ್ದೇವೆ. ಈ ಮಧ್ಯೆ ಯಾವುದೇ ವಿವಾದ ಉಂಟಾಗಿಲ್ಲ ಎಂದು ತರೂರ್ ತಿಳಿಸಿದ್ದಾರೆ. ಸುನಂದಾ ಅವರು ಐಪಿಎಲ್ ವ್ಯವಹಾರದಲ್ಲಿ ಬದಲಿ ಪ್ರತಿನಿಧಿಯಾಗಿರಲಿಲ್ಲ. ಅಲ್ಲದೆ, ಸ್ವೀಟ್ ಇಕ್ವಿಟಿ ಹಣವು ನನಗೆ ಸಂಬಂಧಿಸಿದ್ದಲ್ಲ. ಆದ್ದರಿಂದ ಸುನಂದಾ ಅವರನ್ನು ಬದಲಿ ಪ್ರತಿನಿಧಿ ಎಂದು ಕರೆಯಲು ಸಾಧ್ಯವಿಲ್ಲ. [ಬಟ್ಟೆ, ಶೂ ಒಯ್ದವರು ಯಾರು?]
ಐಪಿಎಲ್ ಕೇಂದ್ರಿತ ತನಿಖೆ : ಹತ್ಯೆ ಪ್ರಕರಣ ತನಿಖೆಯಲ್ಲಿ ಐಪಿಎಲ್ ವಿವಾದವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು. ಅದು ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಇದರಿಂದ ಪಿತೂರಿ ಸರಿಯಾಗಿ ಅರ್ಥವಾಗುತ್ತದೆ ಎಂದು ತಿಳಿಸಿದ್ದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications