ರೈಲ್ವೆ ಟಿಕೆಟ್ ಕನ್ಫರ್ಮ್ ಆಗದಿದ್ದರೇನಂತೆ ವಿಮಾನವಿದೆಯಲ್ಲ!
ನವದೆಹಲಿ, ಮೇ. 14 : ರೈಲು ಟಿಕೆಟ್ ಬುಕ್ ಮಾಡಿರುತ್ತೀರಿ, ಕಡೆಯ ಘಳಿಗೆಯವರೆಗೂ ಕನ್ಫರ್ಮ್ ಆಗುವುದೇ ಇಲ್ಲ. ಥತ್ತೆರೀಕೆ ಎಲ್ಲಾ ಕೆಟ್ತು ಅಂತ ಜೋಲು ಮುಖ ಹಾಕಿಕೊಂಡು ಕುಳಿತುಕೊಳ್ಳಬೇಡಿ. ನಿಮ್ಮ ಪಯಣ ಮುಂದುವರಿಸಲು ಮತ್ತು ಸುಖಕರವಾಗಿಸಲು ರೈಲು ಇಲಾಖೆ ಒಂದು ಸೂಪರ್ ಪ್ಲಾನನ್ನು ಹಾಕಿಕೊಂಡಿದೆ.
ಅದೇನೆಂದರೆ, ನಿಮ್ಮ ಹೆಸರು ವೇಯ್ಟಿಂಗ್ ಲಿಸ್ಟಿನಲ್ಲಿದ್ದರೆ ಮತ್ತು ಇನ್ನೂ ಸ್ವಲ್ಪ ಹಣ ಹೊಂದಿಸಲು ನೀವು ತಯಾರಾಗಿದ್ದರೆ, ರಿಯಾಯಿತಿ ದರದಲ್ಲಿ ವಿಮಾನ ಟಿಕೆಟ್ ನೀಡಲು ರೈಲು ಇಲಾಖೆ ನಿರ್ಧರಿಸಿದೆ. ಇದನ್ನು ನೀವು ನಂಬಲೇಬೇಕು. ಹೇಗಿದೆ ಭರ್ಜರಿ ಆಫರ್?
ರೈಲ್ವೆ ಇಲಾಖೆ ಎರಡು ವಿಮಾನಯಾನ ಕಂಪನಿಗಳಾದ ಗೋಏರ್ ಮತ್ತು ಸ್ಪೈಸ್ ಜೆಟ್ ಜೊತೆ ಡೀಲ್ ಕುದುರಿಸಿದ್ದು, ರೈಲ್ವೆ ಪ್ರಯಾಣಿಕರ ಸುಖಕರ ಪ್ರಯಾಣಕ್ಕಾಗಿ ರಿಯಾಯಿತಿ ದರದಲ್ಲಿ ವಿಮಾನ ಟಿಕೆಟ್ ನೀಡಲು ಒಡಂಬಡಿಕೆ ಮಾಡಿಕೊಂಡಿದೆ.

ಸಂತೋಷದಿಂದ ಕುಣಿದಾಡುವ ಮುನ್ನ, ಇಲ್ಲಿ ಕೆಲವೊಂದು ನಿಬಂಧನೆಗಳಿವೆ ಅವನ್ನೂ ಓದಿಬಿಡಿ.
* ನಿಮ್ಮ ಹೆಸರು ವೇಯ್ಟಿಂಗ್ ಲಿಸ್ಟಿನಲ್ಲಿರಬೇಕು.
* ಟಿಕೆಟನ್ನು ಪ್ರಯಾಣದ ದಿನವೇ ಖರೀದಿಸಿರಬಾರದು.
* ಮೂರು ದಿನಗಳಿಗೆ ಮೊದಲೇ ಟಿಕೆಟನ್ನು ಬುಕ್ ಮಾಡಿರಬೇಕು.
* ಟಿಕೆಟನ್ನು ಐಆರ್ಸಿಟಿಸಿ ವೆಬ್ ಸೈಟ್ ಮುಖಾಂತರವೇ ಬುಕ್ ಮಾಡಿಸಿರಬೇಕು.
ಮುಂದೆ?
* ಕಾಯುತ್ತಿರುವ ಪ್ರಯಾಣಿಕರ ಅಧಿಕೃತ ಪಟ್ಟಿ ಸಿದ್ಧವಾಗುತ್ತಿದ್ದಂತೆ, ರೈಲ್ವೆ ಅಧಿಕಾರಿಗಳು ಪಟ್ಟಿಯಲ್ಲಿದ್ದವರಿಗೆ ವಿಮಾನ ಟಿಕೆಟ್ ಬುಕ್ ಮಾಡಬಹುದೆಂದು ಈಮೇಲ್ ಕಳುಹಿಸುತ್ತಾರೆ.
* ಇದಕ್ಕೆ ಶೇ.30ರಿಂದ 40ರಷ್ಟು ರಿಯಾಯಿತಿ ಸಿಗುತ್ತದೆ. ಉದಾಹರಣೆಗೆ, ವಿಮಾನ ದರ 5 ಸಾವಿರ ಇದ್ದರೆ, 3 ಸಾವಿರ ರು. ನೀಡಬೇಕಾಗುತ್ತದೆ.
ಮುಂದಿನದೂ ಓದಿಬಿಡಿ
* ವಿಮಾನ ಟಿಕೆಟ್ ಬುಕ್ ಮಾಡಿದ ಕೂಡಲೆ ರೈಲ್ವೆಗೆ ಬುಕ್ ಮಾಡಿದ ಹಣ ವಾಪಸ್ ಬರುವುದಿಲ್ಲ. ನಂತರ, ನಿಮ್ಮ ಬ್ಯಾಂಕ್ ಅಕೌಂಟಿಗೆ ಹಣ ಸಂದಾಯವಾಗುತ್ತದೆ.
* ಏನೋ ಗೊಂದಲವಾಗಿ ಕಡೆ ಘಳಿಗೆಯಲ್ಲಿ ವಿಮಾನ ಟಿಕೆಟ್ಟನ್ನೂ ಕ್ಯಾನಲ್ ಮಾಡುವ ಹಾಗಿಲ್ಲ. ಹಾಗೇನಾದರೂ ಮಾಡಿದರೆ ಹೆಚ್ಚುವರಿ ಚಾರ್ಜ್ ಕಟ್ಟಬೇಕಾಗುತ್ತದೆ.
ಇದನ್ನೆಲ್ಲಾ ಓದಿ ಮನನ ಮಾಡಿಕೊಂಡ ಮೇಲೆ, ರೈಲ್ವೆ ಟಿಕೆಟ್ ಕನ್ಫರ್ಮ್ ಆಗದಿದ್ದರೆ ವಿಮಾನ ಟಿಕೆಟ್ ಪಡೆಯುವುದು ಬಿಡುವುದು ಪ್ರಯಾಣಿಕರಿಗೆ ಬಿಟ್ಟಿದ್ದು.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications