ತೇಜ್ ಬಹದ್ದೂರ್ ಸಾವಿನ ವದಂತಿ, ಸತ್ಯ ಏನು ಎಂದು ಇಲ್ಲಿದೆ ಮಾಹಿತಿ
ಬಿಎಸ್ ಎಫ್ ಜವಾನ್ ತೇಜ್ ಬಹದ್ದೂರ್ ಸಾವನ್ನಪಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ವರದಿ ಇದು. ಸಂಬಂಧಪಟ್ಟವರ ಹೇಳಿಕೆಗಳು ಸಹ ಇವೆ
ನವದೆಹಲಿ, ಮಾರ್ಚ್ 24: ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರವಿಡೀ ಬಿಎಸ್ ಎಫ್ ಜವಾನ್ ತೇಜ್ ಬಹದ್ದೂರ್ ಬಗ್ಗೆಯೇ ವದಂತಿ ಹರಿದಾಡುತ್ತಿತ್ತು. ಆತನನ್ನು ಕೊಲ್ಲಲಾಗಿದೆ ಎಂಬ ಗಾಳಿ ಸುದ್ದಿಯನ್ನು ಯಾರೋ ಜೋರಾಗಿಯೇ ಹರಿಬಿಟ್ಟಿದ್ದರು. ಒಂದ್ನಿಮಿಷ, ಈ ತೇಜ್ ಬಹದ್ದೂರ್ ಯಾರು ಗೊತ್ತಾಯ್ತಾ?
ಬಿಎಸ್ ಎಫ್ ನಲ್ಲಿ ಸರಿಯಾದ ಊಟ-ತಿಂಡಿ ಕೊಡ್ತಿಲ್ಲ ಎಂದು ವಿಡಿಯೋ ಮಾಡಿ ಹಾಕಿದ್ದ ತೇಜ್ ಬಹದ್ದೂರೇ ಇದು. ಆ ನಂತರ ಆತನ ಪತ್ನಿ ಕೂಡ ತನ್ನ ಪತಿಯ ಜೀವಕ್ಕೆ ತೊಂದರೆ ಇದೆ. ಅವರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದೆಲ್ಲ ಆರೋಪಿಸಿದ್ದರಲ್ಲಾ, ಆ ತೇಜ್ ಬಹದ್ದೂರ್ ಸತ್ತೇ ಹೋಗಿದ್ದಾರೆ ಎಂದೆಲ್ಲ ವದಂತಿ ಹರಿದಾಡಿತು.['ನನಗೆ ಕಿರುಕುಳ ನೀಡುತ್ತಿದ್ದಾರೆ' ತೇಜ್ ಬಹದ್ದೂರ್ ಮತ್ತೊಂದು ವಿಡಿಯೋ]
ಕೊನೆಗೆ ಗಡಿ ಭದ್ರತಾ ಪಡೆ ಹಾಗೂ ಅದೇ ಜವಾನ್ ನ ಹೆಂಡತಿ ಕೂಡ, ಇದೆಲ್ಲ ಗಾಳಿ ಸುದ್ದಿ. ತೇಜ್ ಬಹದ್ದೂರ್ ಬದುಕಿದ್ದಾರೆ ಹಾಗೂ ಆರೋಗ್ಯವಾಗಿದ್ದಾರೆ ಅಂತ ಹೇಳಿಕೆ ನೀಡಿದ್ದಾರೆ. ಇನ್ನೊಂದು ವಿಚಿತ್ರ ಏನೆಂದರೆ, ಬಹದ್ದೂರ್ ಹೋಲಿಕೆ ಇರುವ ವ್ಯಕ್ತಿಯ ಫೋಟೋ ಚಲಾವಣೆಯಲ್ಲಿದೆ. ಅದರಲ್ಲಿ ವ್ಯಕ್ತಿ ಮಿಲಿಟರಿ ದಿರಿಸಿನಲ್ಲಿದ್ದು, ಕಣ್ಣು ಮುಚ್ಚಿದ್ದಾನೆ. ಮೂಗಿನಿಂದ ರಕ್ತ ಸೋರುತ್ತಿದೆ. ಮುಖದ ಒಂದು ಭಾಗ ಬಟ್ಟೆಯಿಂದ ಮುಚ್ಚಲಾಗಿದೆ.[ಕಳಪೆ ಆಹಾರ ಪೂರೈಕೆ, ಯೋಧನಿಗೆ ಮಾನಸಿಕ, ದೈಹಿಕ ಹಿಂಸೆ ಆರೋಪ!]
|
ಫೋಟೋ ಹಾಕಿ ವದಂತಿ
ಭಾರತೀಯ ಸೇನೆಯ ಭ್ರಷ್ಟಾಚಾರ ಬಯಲು ಮಾಡಿದ ನಂತರ ಬಿಎಸ್ ಎಫ್ ಯೋಧ, ತೇಜ್ ಬಹದ್ದೂರ್ ಯಾದವ್ ನಾಪತ್ತೆಯಾಗಿದ್ದ, ಆತನನ್ನು ಕೊಲ್ಲಲಾಗಿದೆ ಎಂದು ಅಸ್ಫನ್ದ್ಯಾರ್ ಭಿತ್ತಾನಿ ಎಂಬಾತ ರೀಟ್ವೀಟ್ ಮಾಡಿದ್ದಾನೆ. ಅದರಲ್ಲಿ ಒಂದು ಕಡೆ ಜವಾನ್ ನ ಹೋಲುವ ವ್ಯಕ್ತಿಯ ಫೋಟೋ ಹಾಗೂ ಮತ್ತೊಂದು ಕಡೆ ತೇಜ್ ಬಹದ್ದೂರ್ ನ ಫೋಟೋ ಹಾಕಲಾಗಿದೆ.
| Array |
ತೇಜ್ ಬಹದ್ದೂರ್ ಜೀವಂತ
ತೇಜ್ ಬಹದ್ದೂರ್ ಆರೋಗ್ಯವಾಗಿದ್ದಾರೆ. ಸದ್ಯ ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
-ಶುಭೇಂದು ಭಾರದ್ವಾಜ್, ಬಿಎಸ್ ಎಫ್ ಸಾರ್ವಜನಿಕ ಸಂಪರ್ಕಾಧಿಕಾರಿ

ಅವರು ಆರೋಗ್ಯವಾಗಿದ್ದಾರೆ
ಹಿರಿಯ ಯೋಧರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ನೋಡಿ, ನನಗೆ ಕರೆ ಮಾಡಿ, ನನ್ನ ಪತಿಯ ಬಗ್ಗೆ ವಿಚಾರಿಸಿದರು. ಆ ನಂತರ ನನ್ನ ಪತಿಗೆ (ಯಾದವ್) ಕರೆ ಮಾಡಿ, ಮಾತನಾಡಿದೆ. ಅವರು ಆರೋಗ್ಯವಾಗಿದ್ದಾರೆ. ಅವರ ವಿರುದ್ಧದ ತನಿಖೆ ಹಾಗೂ ಅವರು ಮಾಡಿದ್ದ ಆರೋಪದ ಬಗ್ಗೆ ತನಿಖೆ ನಡೆಸುವುದನ್ನು ಎದುರು ನೋಡುತ್ತಿದ್ದಾರೆ.[ಬಿಎಸ್ ಎಫ್ ಯೋಧನ ವಿಡಿಯೋ ಮಾಹಿತಿ ಇಲ್ಲ: ವಿಕೆ ಸಿಂಗ್]
-ಶರ್ಮಿಳಾ ಯಾದವ್ (ತೇಜ್ ಬಹದ್ದೂರ್ ಪತ್ನಿ) ಔಟ್ ಲುಕ್ ಗೆ ನೀಡಿದ ಮಾಹಿತಿ

ಮಾವೋವಾದಿಗಳಿಂದ ಹತ್ಯೆಯಾದ ಯೋಧನ ಫೋಟೋ
ಇದೇ ವೇಳೆ ಯಾದವ್ ನ ಹೋಲುವಂತಿರುವ ವ್ಯಕ್ತಿಯ ಫೋಟೋ ಸಿಕ್ಕಿರುವುದು ಎರಡು ವಾರದ ಹಿಂದೆ. ಛತ್ತೀಸ್ ಗಢದಲ್ಲಿ ಮಾವೋವಾದಿಗಳಿಂದ ಹತ್ಯೆಯಾಗಿದ್ದ ಸಿಆರ್ ಪಿಎಫ್ ಯೋಧ ಆತ.

ವಿಚಾರಣೆ ನಡೆಯಬೇಕಿದೆ
ಈ ವಿಚಾರದ ಬಗ್ಗೆ ಬಿಎಸ್ ಎಫ್ ನಿಂದ ಯಾವುದೇ ಅಧಿಕೃತ ವಿಚಾರಣೆ ಆರಂಭವಾಗಿಲ್ಲ. " ಈ ಕೆಲವು ಪೋಸ್ಟ್ ಗಳು ಹಂಚಿಕೊಂಡವರ ಹೆಸರು ಭಾರತೀಯರದ್ದು ಅನಿಸುವಂತಿವೆ. ಆದರೆ ಈ ಬಗ್ಗೆ ತನಿಖೆ ನಡೆಯಬೇಕು. ಮತ್ತು ಅವುಗಳನ್ನು ಎಲ್ಲಿಂದ ಪೋಸ್ಟ್ ಮಾಡಿದ್ದು ಎಂಬ ಬಗ್ಗೆ ಕೂಡ ಗೊತ್ತಾಗಬೇಕು" ಎಂದು ಬಿಎಸ್ ಎಫ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಔಟ್ ಲುಕ್ ವರದಿ ಮಾಡಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications