'ಯಾರಿಗೆ ವೋಟು ಹಾಕಿದ್ದೀಯಾ?' ತಸ್ಲಿಮಾ ಪ್ರಶ್ನೆಗೆ ಮುಸ್ಲಿಂ ಡ್ರೈವರ್ ಉತ್ತರ...
ನವದೆಹಲಿ, ಜೂನ್ 28: ಮಹಾರಾಷ್ಟ್ರದ ಥಾಣೆಯಲ್ಲಿ ಮುಸ್ಲಿಂ ಕ್ಯಾಬ್ ಚಾಲಕನನ್ನು ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ ಥಳಿಸಿದ ಘಟನೆ ವರದಿಯಾಗುತ್ತಿದ್ದಂತೆಯೇ ಭಾರದಲ್ಲಿ ವಾಸವಾಗಿರುವ ಬಾಂಗ್ಲಾ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ ಟ್ವೀಟ್ ವೊಂದನ್ನು ಮಾಡಿದ್ದಾರೆ.
ಎಲ್ಲ ಮುಸ್ಲಿಮರ ಮೇಲೆಯೂ ದಾಳಿಯಾಗುತ್ತಿದೆ ಎಂಬಂತೆ ಬಿಂಬಿಸುತ್ತಿರುವುದು ಸುಳ್ಳು. ಮುಸ್ಲಿಮರೂ ಮೋದಿ ಪರವಾಗಿದ್ದಾರೆ. ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆ ಎಂಬರ್ಥದಲ್ಲಿ ನಸ್ರೀನ್ ಟ್ವೀಟ್ ಮಾಡಿದ್ದಾರೆ. ಮುಸ್ಲಿಂ ಕ್ಯಾಬ್ ಡ್ರೈವರ್ ಒಬ್ಬರೊಂದಿಗಿನ ಸಂಭಾಷಣೆಯ ಭಾಗವನ್ನು ಅವರು ಟ್ವೀಟ್ ಮಾಡಿದ್ದು, ಅದರ ಕನ್ನಡ ಅನುವಾದ ಇಲ್ಲಿದೆ.

ತಸ್ಲಿಮಾ ನಸ್ರೀನ್: ನಿನ್ನ ಹೆಸರೇನು?
ಊಬರ್ ಡ್ರೈವರ್: ತಾಹಿರ್ ಖಾನ್
ತಸ್ಲಿಮಾ ನಸ್ರೀನ್: ನೀನು ಎಲ್ಲಿ ವಾಸವಿದ್ದೀಯಾ?
ಊಬರ್ ಡ್ರೈವರ್: ಓಖ್ಲಾ
ತಸ್ಲಿಮಾ ನಸ್ರೀನ್: ಯಾರಾದರೂ ನಿನಗೆ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ, ಪೀಡಿಸಿದ್ದಾರಾ?
ಖಂಡಿತ ಇಲ್ಲ
ತಸ್ಲಿಮಾ ನಸ್ರೀನ್: ನೀನೊಬ್ಬ ಮುಸ್ಲಿಂ ಆಗಿ ಇಲ್ಲಿ ಸುರಕ್ಷಿತವಾಗಿದ್ದೀಯಾ?
ಊಬರ್ ಡ್ರೈವರ್: ಖಂಡಿತ
ತಸ್ಲಿಮಾ ನಸ್ರೀನ್: ಕೆಟ್ಟ ಘಟನೆಗಳು ನಡೆದೇ ಇಲ್ಲವೇ?
ಊಬರ್ ಡ್ರೈವರ್: ಇಲ್ಲವೇ ಇಲ್ಲ
ತಸ್ಲಿಮಾ ನಸ್ರೀನ್: ನೀನು ಯಾರಿಗೆ ಮತ ಹಾಕಿದ್ದೀಯಾ?
ಊಬರ್ ಡ್ರೈವರ್: ಮೋದಿ
ತಸ್ಲಿಮಾ ನಸ್ರೀನ್: ಮನೆ ಕಟ್ಟಲು ನಿನಗೆ ಹಣ ಸಿಕ್ಕಿತಾ?
ಊಬರ್ ಡ್ರೈವರ್: ಹೌದು, ಮೂರು ಪಕ್ಷ ಸಿಕ್ಕಿತು
ಈ ಮೂಲಕ ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ, ಗುಂಪು ಹತ್ಯೆಯ ಘಟನೆಗಳು ಅಲ್ಲಲ್ಲಿ ನಡೆದಿವೆಯಾದರೂ ಅದನ್ನು ಸಾಮಾನ್ಯೀಕರಿಸುವುದು ತಪ್ಪು ಎಂದು ನಸ್ರೀನ್ ಹೇಳಿದ್ದಾರೆ.
ಜಾರ್ಖಂಡ್ ನಲ್ಲಿ ಬೈಕ್ ಕದ್ದಿದ್ದಾನೆಂದು ಆರೋಪಿಸಿ ತಬ್ರೇಝ್ ಎಂಬ ಯುವಕನ್ನು ಥಳಿಸಿ, ಆತನ ಬಳಿ ಜೈ ಶ್ರೀರಾಮ್ ಪಠಿಸುವಂತೆ ಒತ್ತಾಯಿಸಲಾಗಿತ್ತು. ನಂತರ ಆತ ಸಾವಿಗೀಡಾಗಿದ್ದ. ಥಾಣೆಯಲ್ಲಿಯೂ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ ಕ್ಯಾಬ್ ಡ್ರೈವರ್ ನನ್ನು ಮೂರು ಮಂದಿ ಥಳಿಸಿದ ಪ್ರಕರಣ ಬೆಳಕಿಗೆ ಬಂದಿತ್ತು.
ಇತ್ತೀಚೆಗೆ ಭಾರತ ಪ್ರವಾಸದದಲ್ಲಿದ್ದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ, ಗುಂಪು ಹತ್ಯೆಯನ್ನು ಪರೋಕ್ಷವಾಗಿ ಖಂಡಿಸಿ, ಪ್ರತಿಯೊಂದು ಧರ್ಮದ ಧಾರ್ಮಿಕ ಸ್ವಾತಂತ್ರ್ಯಕ್ಕೂ ಗೌರವ ನೀಡಬೇಕು ಎಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications