Breaking: ಸ್ವಿಸ್ ಬ್ಯಾಂಕ್ ಖಾತೆದಾರರ ಮಾಹಿತಿ ಭಾರತಕ್ಕೆ ಹಸ್ತಾಂತರ
ನವದೆಹಲಿ, ಅಕ್ಟೋಬರ್ 07: ಸ್ವಿಟ್ಜರ್ಲ್ಯಾಂಡ್ನ ಸ್ವಿಸ್ ಬ್ಯಾಂಕ್ ಬ್ಯಾಂಕ್ನಲ್ಲಿ ಖಾತೆ ತೆರೆದಿರುವ ಭಾರತೀಯರ ಮಾಹಿತಿಯನ್ನು ಸ್ವಿಟ್ಜರ್ಲ್ಯಾಂಡ್ ದೇಶವು ಭಾರತ ಸರ್ಕಾರಕ್ಕೆ ಹಸ್ತಾಂತಿರಿಸಿದೆ.
ಇದೇ ಮೊದಲ ಬಾರಿಗೆ ಸ್ವಿಟ್ಜರ್ಲೆಂಡ್ ಹೀಗೆ ಸ್ವಿಸ್ ಬ್ಯಾಂಕ್ ಖಾತೆದಾರರ ಮಾಹಿತಿಯನ್ನು ಭಾರತಕ್ಕೆ ಹಸ್ತಾಂತರಿಸಿದ್ದು, ಬ್ಯಾಂಕ್ ಖಾತೆದಾರರ ಮಾಹಿತಿಯ ಮೊದಲ ಭಾಗ ಮಾತ್ರವೇ ಆಗಿದೆ. ಖಾತೆ ಹೊಂದಿದವರ ಎಲ್ಲ ಮಾಹಿತಿಯನ್ನೂ ಸ್ವಿಸ್ ಬ್ಯಾಂಕ್ ಭಾರತದೊಂದಿಗೆ ಹಂಚಿಕೊಳ್ಳಲಾಗಿಲ್ಲ.

ಸ್ವಿಟ್ಜರ್ಲ್ಯಾಂಡ್ನ ತೆರಿಗೆ ಆಡಳಿತ ಇಲಾಖೆ ಈ ಮಾಹಿತಿಯನ್ನು ಸ್ವಯಂಚಾಲಿತ ಮಾಹಿತಿ ವರ್ಗಾವಣೆ ಅಡಿಯಲ್ಲಿ ಹಸ್ತಾಂತರಿಸಲಾಗಿದ್ದು, ಮುಂದಿನ ಮಾಹಿತಿ ಹಸ್ತಾಂತರವು ಮುಂದಿನ ವರ್ಷ ಸೆಪ್ಟೆಂಬರ್ ನಲ್ಲಿ ನಡೆದಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ಹಾಗೂ 2018 ರ ಒಳಗೆ ಮುಚ್ಚಲ್ಪಟ್ಟ ಸ್ವಿಸ್ ಬ್ಯಾಂಕ್ ಭಾರತೀಯ ಗ್ರಾಹಕರ ಮಾಹಿತಿಯನ್ನು ಸ್ವಿಟ್ಜರ್ಲೆಂಡ್ ದೇಶವು ಭಾರತ ಸರ್ಕಾರಕ್ಕೆ ನೀಡಿದೆ. ಎಲ್ಲ ಭಾರತೀಯ ಗ್ರಾಹಕರ ಮಾಹಿತಿಯನ್ನು ನೀಡದೆ ಕೇವಲ ಸ್ವಲ್ಪ ಮಾಹಿತಿಯನ್ನು ಮಾತ್ರವೇ ಈಗ ನೀಡಲಾಗಿದೆ.

75 ದೇಶಗಳಿಗೆ ಬ್ಯಾಂಕ್ ಖಾತೆ ನೀಡಲಾಗಿದೆ
ಒಟ್ಟು 75 ದೇಶಗಳಿಗೆ ಈ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಲಾಗಿದ್ದು, ಇದರಲ್ಲಿ ಭಾರತವೂ ಒಂದಾಗಿದೆ. 75 ದೇಶಗಳಿಗೆ ಆಯಾ ದೇಶಗಳ ವ್ಯಕ್ತಿಗಳ ಸ್ವಿಸ್ ಬ್ಯಾಂಕ್ ಖಾತೆಯ ಮಾಹಿತಿ ನೀಡಲಾಗಿದೆ.

75 ದೇಶಗಳಿಗೆ 31 ಲಕ್ಷ ಬ್ಯಾಂಕ್ ಖಾತೆ ಹಸ್ತಾಂತರ
75 ದೇಶಗಳಿಗೆ 31 ಲಕ್ಷ ಬ್ಯಾಂಕ್ ಖಾತೆ ಮಾಹಿತಿಯನ್ನು ಸ್ವಿಡ್ಜರ್ಲ್ಯಾಂಡ್ ನೀಡಿದ್ದು, ಸುಮಾರು 24 ಲಕ್ಷ ಖಾತೆ ಅಥವಾ ಖಾತೆದಾರರ ಮಾಹಿತಿಯನ್ನು ತಾನು ಪಡೆದುಕೊಂಡಿದೆ.

ಹೆಸರು, ವಿಳಾ, ಹಣಕಾಸು ವರ್ಗಾವಣೆ ಮಾಹಿತಿ
ಸ್ವಿಸ್ ಬ್ಯಾಂಕ್ ಹಂಚಿಕೊಂಡಿರುವ ಮಾಹಿತಿಯಲ್ಲಿ ಖಾತೆದಾರನ ಹೆಸರು, ವಿಳಾಸ, ಖಾತೆಯಲ್ಲಿ ನಡೆಸಿರುವ ವ್ಯವಹಾರದ ಮಾಹಿತಿ, ಒಟ್ಟು ಹಣ, ಆದಾಯ, ಆದಾಯದ ಮೂಲದ ಬಗ್ಗೆ ಖಾತೆದಾರ ನೀಡಿರುವ ಮಾಹಿತಿ ಎಲ್ಲವೂ ಒಳಗೊಂಡಿದೆ.

2014 ರಲ್ಲಿ ಹೇಳಿದ್ದ ನರೇಂದ್ರ ಮೋದಿ
2014 ರ ಲೋಕಸಭೆ ಚುನಾವಣೆಗೆ ಮುನ್ನಾ ನರೇಂದ್ರ ಮೋದಿ ಅವರು ಕಪ್ಪು ಹಣ ವಿಶೇಷವಾಗಿ ಸ್ವಿಸ್ ಬ್ಯಾಂಕ್ನಲ್ಲಿನ ಕಪ್ಪು ಹಣವನ್ನು ವಾಪಸ್ ತರುವುದಾಗಿ ಹೇಳಿದ್ದರು. ನಂತರ ಮೋದಿ ಅಧಿಕಾರಕ್ಕೆ ಬಂದು ಈ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಿದ್ದರು. ಅದು ಈಗ ಸಾಧ್ಯವಾಗಿದೆ. ಸ್ವಿಸ್ ಬ್ಯಾಂಕ್ ಖಾತೆ ಮಾಹಿತಿ ವರ್ಗಾವಣೆ ಮಾತು ಪ್ರಾರಂಭವಾಗಿ ಇಷ್ಟು ವರ್ಷವಾದ ಮೇಲೆ ಈಗಲೂ ಕಪ್ಪುಹಣವನ್ನು ಅಲ್ಲೇ ಇಟ್ಟಿರುತ್ತಾರೆಯೇ? ಎಂಬುದು ಪ್ರಶ್ನೆ. ಆದರೆ ಹಣ ಇಲ್ಲದಿದ್ದರೇನಂತೆ ಮಾಹಿತಿ ದೊರೆತರೂ ಸಾಕು ಅದು ಸರ್ಕಾರದ ಪಾಲಿಗೆ ಅಮೂಲ್ಯವೇ ಆಗಿರುತ್ತದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications