ಜನರು ಮದುವೆಯಾಗ್ತಿದ್ದಾರೆ.. ಆರ್ಥಿಕತೆ ಸುಧಾರಿಸಿದೆ: ಬಾನಗಡಿ ಮಾಡಿದ ಅಂಗಡಿ ಹೇಳಿಕೆ!
ನವದೆಹಲಿ, ನವೆಂಬರ್ 16: ಭಾರತೀಯ ಆರ್ಥಿಕ ಕುಸಿತಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯ ವ್ಯಾಖ್ಯಾನ ನೀಡುತ್ತಿದ್ದಾರೆ. ಇವೆಲ್ಲದರೊಟ್ಟಿಗೆ ನಂದೂ ಒಂದಿರಲಿ ಎಂಬಂತೆ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ನೀಡಿದ ಹೇಳಿಕೆ ಕೇಂದ್ರ ಸರ್ಕಾರಕ್ಕೆ ಇರಿಸುಮುರಿಸುಂಟು ಮಾಡಿದೆ.
"ಭಾರತದ ಆರ್ಥಿಕತೆ ಕುಸಿತ ಕಾಣುತ್ತಿದೆ ಎಂದವರು ಯಾರು? ವಿಮಾನ ನಿಲ್ದಾಣಗಳು, ರೈಲುಗಳು ಭರ್ತಿಯಾಗುತ್ತಿವೆ. ಜನರುಮದುವೆಯಾಗ್ತಿದ್ದಾರೆ. ಅಂದರೆ ಆರ್ಥಿಕತೆ ಚೆನ್ನಾಗಿದೆ ಎಂದೇ ಅರ್ಥ. ಕೇಂದ್ರ ಸರ್ಕಾರದ ಪ್ರಗತಿ ನೋಡಲಾಗದವರು ಆರ್ಥಿಕ ಪ್ರಗತಿಯಾಗಿಲ್ಲ ಎಂಬ ಮಾತನ್ನಾಡುತ್ತಾರೆ" ಎಂದು ಸುರೇಶ್ ಅಂಗಡಿ ಹೇಳಿದ್ದರು.
ಸುರೇಶ್ ಅಂಗಡಿ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಿಜೆಪಿ ನಾಯಕರು ಆರ್ಥಿಕತೆಯನ್ನು ಅಳೆಯುವ ಮಾನದಂಡವನ್ನಾಗಿ ಏನೇನನ್ನಲ್ಲ ಬಳಸುತ್ತಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರೆ, ತಮ್ಮ ಸರ್ಕಾರದ ಸಮರ್ಥನೆಗೆ ಈ ರೀತಿ ಅಪ್ರಬುದ್ಧ ಹೇಳಿಕೆಗಳನ್ನು ನೀಡಬಾರದು ಎಂದು ಮತ್ತೆ ಕೆಲವರು ಹೇಳಿದ್ದಾರೆ.

ಯುಪಿಎಸ್ಸಿ ಪರೀಕ್ಷೆ ಅಧಿಕಾರಿಗಳಿಗೆ ಮಾತ್ರ ಏಕೆ?
ಇದೇ ಕಾರಣಕ್ಕೇ ಜನಪ್ರತಿನಿಧಿಗಳು ಕನಿಷ್ಠ ವಿದ್ಯೆಯನ್ನಾದರೂ ಪಡೆದಿರಬೇಕು ಎನ್ನುವುದು. ಯುಪಿಎಸ್ಸಿ ಪರೀಕ್ಷೆ ಕೇವಲ ಅಧಿಕಾರಿಗಳಿಗೆ ಮಾತ್ರವೇಕೆ ಎಂದು ಉಜ್ವಲ್ ಸಿನ್ಹಾ ಪ್ರಶ್ನಿಸಿದ್ದಾರೆ.

ಆಗ ಮೂವಿ, ಈಗ ಮದುವೆ!
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಬಾಲಿವುಡ್ ಮೂವಿಗಳು ನೂರು ಕೋಟಿ ದಾಟುತ್ತಿವೆ, ಆರ್ಥಿಕ ಕುಸಿತವಾಗಿಲ್ಲ ಎಂದಿದ್ದರು. ಇದೀಗ ಸುರೇಶ್ ಅಂಗಡಿ ಈ ರೀರಿ ಹೇಳಿಕೆ ನೀಡಿದ್ದಾರೆ. ಮೊದಲು ಮೂವಿ, ಮದುವೆ, ಭಾರತೀಯ ಆರ್ಥಿಕ ಸುಧಾರಣೆಯನ್ನು ಅಳೆಯುವ ಹೊಸ ಮಾನದಂಡಗಳನ್ನು ಬಿಜೆಪಿ ಸರ್ಕಾರ ಪರಿಚಯಿಸಿದೆ ಎಂದಿದ್ದಾರೆ ರಾಜೀವ್ ಪವಾರ್.

ರವಿಶಂಕರ್ ಪ್ರಸಾದ್ ಅವರಿಗೆ ಪ್ರತಿಸ್ಪರ್ಧಿ
ಸುರೇಶ್ ಅಂಗಡಿ ಹೇಳಿಕೆಯ ನಂತರ ಹೇಳಬಹುದಾದ ಒಂದೇ ಒಂದು ಮಾತೆಂದರೆ, ರವಿಶಂಕರ್ ಪ್ರಸಾದ್ ಅವರಿಗೆ ಒಬ್ಬ ಗಟ್ಟಿ ಪ್ರತಿಸ್ಪರ್ಧಿ ಸಿಕ್ಕಿದ್ದಾರೆ ಎಂದು ಕಾಲೆಳೆದಿದ್ದಾರೆ ಆಗಸ್ಟ್ ಲಿಯೋ.

ಎಂಥ ನುಡಿಮುತ್ತು!
ಬಿಜೆಪಿಯೋರು ಎಲ್ಲಿಂದ ಹೆಕ್ಕಿ ತರ್ತಾರಪ್ಪ ಇಂತಹ ಮುತ್ತುಗಳನ್ನ ಎಂದು ಪ್ರಶ್ನಿಸಿದ್ದಾರೆ ಕನ್ವರ್!
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications