Get Updates
Get notified of breaking news, exclusive insights, and must-see stories!

ಗದ್ದಲದ ನಡುವೆ ಸಂಸತ್ತಿನಲ್ಲಿ ನಡೆಯದ ಚರ್ಚೆ: ಅಸಮಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ

ನವದೆಹಲಿ, ಆ. 15: ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಇಂದು ಸಂಸತ್ತಿನ ಕಾರ್ಯನಿರ್ವಹಣೆಯನ್ನು ಪ್ರಬಲವಾಗಿ ಟೀಕಿಸಿದರು. 'ಅಡೆತಡೆಗಳ ಮೇಲೆ ಕೇಂದ್ರೀಕರಿಸದೆ ಕಾನೂನಿನ ಮೇಲೆ ಚರ್ಚೆಗೆ ಬಂದಾಗ ಮೂಲೆಗಳನ್ನು ತೊರೆಯುತ್ತಾರೆ ಎಂದರು.

ಸಂಸತ್ತಿನ ಉಭಯ ಸದನಗಳು "ವಕೀಲರಿಂದ ತುಂಬಿರುವ" ಹಿಂದಿನ ಸಮಯಗಳಿಗೆ ಹೋಲಿಸಿದರೆ, ಸಾರ್ವಜನಿಕ ಸೇವೆಗೆ ತಮ್ಮ ಸಮಯವನ್ನು ಸಹ ನೀಡುವಂತೆ ವಕೀಲ ಸಂಸದರಲ್ಲಿ ಮನವಿ ಮಾಡಿದರು. ಪ್ರಸ್ತುತ ಪರಿಸ್ಥಿತಿಯನ್ನು "ವಿಷಾದದ ಸ್ಥಿತಿ" ಎಂದು ಕರೆದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ಸದನದ ಮೇಲ್ಮನೆ-ಕೆಳ ಮನೆಯಲ್ಲಿ "ಸರಿಯಾದ ಚರ್ಚೆ ನಡೆದಿಲ್ಲ" ಎಂದು ಹೇಳಿದರು.

"ಕಾನೂನಿನ ಸ್ಪಷ್ಟತೆ ಇಲ್ಲ. ಕಾನೂನಿನ ಉದ್ದೇಶವೇನೆಂದು ನಮಗೆ ತಿಳಿದಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಬಹಳ ನಷ್ಟವಾಗಿದೆ. ವಕೀಲರು ಮತ್ತು ಬುದ್ಧಿಜೀವಿಗಳು ಸದನಗಳಲ್ಲಿ ಇಲ್ಲದಿದ್ದಾಗ ಸಾರ್ವಜನಿಕರಿಗೆ ಬಹಳ ನಷ್ಟ," ಎಂದು ಅಭಿಪ್ರಾಯಿಸಿದರು. "ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೋಡಿದರೆ, ಅವರಲ್ಲಿ ಹಲವರು ಕಾನೂನು ಬದ್ಧತೆಯಲ್ಲಿದ್ದರು. ಲೋಕಸಭೆ ಮತ್ತು ರಾಜ್ಯಸಭೆಯ ಮೊದಲ ಸದಸ್ಯರು ವಕೀಲರ ಸಮುದಾಯದಿಂದ ತುಂಬಿದ್ದರು," ಎಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.

 ಸದನದಲ್ಲಿ ನೀವು ಈಗ ನೋಡುವುದೆಲ್ಲ ದುರದೃಷ್ಟ

ಸದನದಲ್ಲಿ ನೀವು ಈಗ ನೋಡುವುದೆಲ್ಲ ದುರದೃಷ್ಟ

"ನೀವು ಈಗ ಸದನಗಳಲ್ಲಿ ನೋಡುತ್ತಿರುವುದು ದುರದೃಷ್ಟಕರವಾಗಿದೆ. ಈ ಹಿಂದೆ ಸದನದಲ್ಲಿ ಚರ್ಚೆಗಳು ಬಹಳ ರಚನಾತ್ಮಕವಾಗಿದ್ದವು. ಹಣಕಾಸಿನ ಮಸೂದೆಗಳ ಮೇಲಿನ ಚರ್ಚೆಗಳನ್ನು ನಾನು ನೋಡಿದೆ ಮತ್ತು ಬಹಳ ರಚನಾತ್ಮಕ ಅಂಶಗಳನ್ನು ಮಾಡಲಾಯಿತು. ಕಾನೂನುಗಳನ್ನು ಚರ್ಚಿಸಲಾಯಿತು ಮತ್ತು ವಿವರಿಸಲಾಯಿತು. ಒಬ್ಬರು ಕಾನೂನಿನ ಶಾಸಕಾಂಗ ಭಾಗದ ಸ್ಪಷ್ಟ ಚಿತ್ರಣವನ್ನು ಹೊಂದಿದ್ದರು," ಎಂದು ಎನ್‌ ವಿ ರಮಣ ವಿವರಿಸಿದ್ದಾರೆ.

 ಪೆಗಾಸಸ್‌ ವಿಚಾರದಲ್ಲಿ ಸದನದಲ್ಲಿ ಗದ್ದಲ

ಪೆಗಾಸಸ್‌ ವಿಚಾರದಲ್ಲಿ ಸದನದಲ್ಲಿ ಗದ್ದಲ

ಸಂಸತ್ತಿನ ಮುಂಗಾರು ಅಧಿವೇಶನವು ಪೆಗಾಸಸ್ ಬೇಹುಗಾರಿಕೆ ಹಗರಣದ ಬಗ್ಗೆ ಕೋಲಾಹಲದ ನಡುವೆ ಆರಂಭವಾಗಿದೆ. ವಿರೋಧ ಪಕ್ಷಗಳು ಪೆಗಾಸಸ್‌ ಬಗ್ಗೆ ಚರ್ಚೆ ನಡೆಯಬೇಕು ಎಂದು ಸದನದಲ್ಲಿ ಒತ್ತಾಯ ಮಾಡಿದರು. ಆದರೆ ಇವೆಲ್ಲ ಅಡ್ಡಿಗಳ ನಡುವೆಯೂ ಹಲವಾರು ಮಸೂದೆಗಳನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ರಾಜಕಾರಣಿಗಳು, ಪತ್ರಕರ್ತರು ಮತ್ತು ಇತರರ ಮೇಲೆ ಪೆಗಾಸಸ್‌ ಎಂಬ ತಂತ್ರಗಾರಿಕೆ ಬಳಸಿ ಬೇಹುಗಾರಿಕೆ ನಡೆಸಲಾಗಿದೆ ಎಂಬ ಆರೋಪಗಳ ಕುರಿತು ಚರ್ಚೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷಗಳು, ಯಾವುದೇ ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಆರೋಪ ಮಾಡಿದ್ದವು.

 8 ದಿನಗಳಲ್ಲಿ 22 ಬಿಲ್‌ಗಳ ಅಂಗೀಕಾರ!

8 ದಿನಗಳಲ್ಲಿ 22 ಬಿಲ್‌ಗಳ ಅಂಗೀಕಾರ!

ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಡೆರೆಕ್ ಒಬಾರಿಯನ್‌ ಸದನದಲ್ಲಿ ಮಸೂದೆಗಳ ಬಗ್ಗೆ ಚರ್ಚೆಗೆ ಸಮಯ ಇಲ್ಲದ್ದನ್ನು "ಪ್ಯಾಪ್ರಿ ಚಾಟ್ ಮಾಡುವುದು" ಅಂದರೆ ಪಾನಿಪುರಿಯಂತಹ ಕುರುಕಲು ತಿಂಡಿ ಮಾಡುವುದಕ್ಕೆ ಹೋಲಿಸಿದ್ದರು. ''ಸರ್ಕಾರವು ಒಂದು ಮಸೂದೆಗೆ ಸರಾಸರಿ ಏಳು ನಿಮಿಷಗಳನ್ನು ಮಾತ್ರ ನೀಡುತ್ತಿದೆ'' ಎಂದು ಆರೋಪ ಮಾಡಿದ್ದರು. ಈ ಹೇಳಿಕೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಇನ್ನೊಂದು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು.

"ಮುಂಗಾರು ಅಧಿವೇಶನದ ಮೊದಲ ವಾರದಲ್ಲಿ ಯಾವುದೇ ಮಸೂದೆಗಳು ಅಂಗೀಕಾರ ಮಾಡಲಾಗಿಲ್ಲ. ನಂತರ ಮೋದಿ-ಶಾ 22 ಬಿಲ್‌ಗಳನ್ನು 8 ದಿನಗಳಲ್ಲಿ ಅಂಗೀಕಾರ ಮಾಡಿದ್ದಾರೆ. 22 ಬಿಲ್‌ಗಳ ಸರಾಸರಿ ಸಮಯದಲ್ಲಿ ಪ್ರತಿ ಬಿಲ್‌ಗೆ 10 ನಿಮಿಷಗಳ ಕೆಳಗೆ ನೀಡಲಾಗಿದೆ. ನಾನು ಮೋದಿಜಿ, ಈ ಹೊಸ ಸಂಖ್ಯೆಗಳನ್ನು ಸವಾಲು ಮಾಡಿ ನಾನು ಪ್ಯಾಪ್ರಿ ಚಾಟ್‌ನ ಇನ್ನೊಂದು ಪ್ಲೇಟ್ ಅನ್ನು ಆನಂದಿಸುತ್ತೇನೆ," ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಡೆರೆಕ್ ಒಬಾರಿಯನ್‌ ವ್ಯಂಗ್ಯವಾಡಿದ್ದರು.

 ವಿಪಕ್ಷಗಳು ಸಂಸತ್ತಿನ ಘನತೆಯನ್ನು ಹಾಳುಮಾಡುತ್ತಿದೆ

ವಿಪಕ್ಷಗಳು ಸಂಸತ್ತಿನ ಘನತೆಯನ್ನು ಹಾಳುಮಾಡುತ್ತಿದೆ

ವಿರೋಧ ಪಕ್ಷಗಳು "ಸಂಸತ್ತಿನ ಘನತೆಯನ್ನು ಹಾಳುಮಾಡುತ್ತಿದೆ" ಮತ್ತು ಅದರ ಕಾರ್ಯವನ್ನು ನಿಲ್ಲಿಸಲು ಪಿತೂರಿ ನಡೆಸುತ್ತಿದೆ ಎಂದು ಸರ್ಕಾರ ಆರೋಪಿಸಿದೆ. ಆದರೆ ಸಂಸತ್ತಿನಲ್ಲಿ ಸರ್ಕಾರವು ತಮ್ಮ ಧ್ವನಿಯನ್ನು ಹತ್ತಿಕ್ಕಿದೆ, ಪ್ರಜಾಪ್ರಭುತ್ವವನ್ನು "ಕೊಲೆ ಮಾಡಿದೆ" ಮತ್ತು "ಹೊರಗಿನವರನ್ನು" ಮಾರ್ಷಲ್‌ಗಳಂತೆ ಸಂಸದರ ಮೇಲೆ ಹಲ್ಲೆ ನಡೆಸಲು ತರಿಸಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. "ಸರ್ಕಾರ ಸಂಸತ್ತಿನ ಘನತೆಯನ್ನು ಹಾಳುಮಾಡುತ್ತಿದೆ" ಎಂದು ವಿಪಕ್ಷ ದೂರಿದೆ. ನಿನ್ನೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್ತಿನಲ್ಲಿನ ಪರಿಸ್ಥಿತಿಯನ್ನು ಪ್ರಸ್ತಾಪಿಸಿದರು, "ನಮ್ಮ ಸಂಸತ್ತು ನಮ್ಮ ಪ್ರಜಾಪ್ರಭುತ್ವದ ದೇವಾಲಯವಾಗಿದ್ದು, ಇದು ನಮ್ಮ ಜನರ ಯೋಗಕ್ಷೇಮಕ್ಕಾಗಿ ನಾವು ಚರ್ಚಿಸುವ ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ನಿರ್ಧರಿಸುವ ಅತ್ಯುನ್ನತ ವೇದಿಕೆಯನ್ನು ಒದಗಿಸುತ್ತದೆ," ಎಂದು ಹೇಳಿದ್ದಾರೆ. ಇನ್ನು ಲೋಕಸಭೆ ಮತ್ತು ರಾಜ್ಯಸಭೆಯ ಮುಂಗಾರು ಅಧಿವೇಶನ ಹಠಾತ್ತಾಗಿ ಅಂತ್ಯಗೊಂಡಿದ್ದನ್ನು ಮತ್ತು ಮೇಲ್ಮನೆಯಲ್ಲಿ ಮಹಿಳಾ ಸಂಸದರ ಮೇಲೆ ನಿನ್ನೆ ನಡೆದ ಹಲ್ಲೆ ಆರೋಪವನ್ನು ವಿರೋಧಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರು ಇಂದು ಬೆಳಿಗ್ಗೆ ಸಂಸತ್ ಭವನದ ಹೊರಗೆ ಮೆರವಣಿಗೆ ನಡೆಸಿದ್ದರು.

 ಇದು ನೀತಿಗಳು ಮತ್ತು ಸಾಧನೆಗಳನ್ನು

ಇದು ನೀತಿಗಳು ಮತ್ತು ಸಾಧನೆಗಳನ್ನು "ಪರಿಶೀಲಿಸುವ" ಸಮಯ

ದೇಶವು ತನ್ನ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದಂತೆ, ಮುಖ್ಯ ನ್ಯಾಯಮೂರ್ತಿ ರಮಣ ನೀತಿಗಳು ಮತ್ತು ಸಾಧನೆಗಳನ್ನು "ಪರಿಶೀಲಿಸುವ" ಸಮಯ ಎಂದು ಹೇಳಿದರು. "ದೇಶದ ಇತಿಹಾಸದಲ್ಲಿ 75 ವರ್ಷಗಳು ಒಂದು ಸಣ್ಣ ಅವಧಿಯಲ್ಲ. ನಾವು ಶಾಲೆಗೆ ಹೋಗುವಾಗ ನಮಗೆ ಬೆಲ್ಲದ ತುಂಡು ಮತ್ತು ಸಣ್ಣ ಧ್ವಜವನ್ನು ನೀಡುತ್ತಿದ್ದರು. ಇಂದು ನಮಗೆ ತುಂಬಾ ಲಭಿಸಿದರೂ ನಾವು ಸಂತೋಷವಿರುವುದಿಲ್ಲ. ನಮ್ಮ ಶುದ್ಧತ್ವ ಮಟ್ಟ ಕೆಳಭಾಗ ತಲುಪಿದೆ," ಎಂದರ "ನಿಮ್ಮನ್ನು ಕಾನೂನು ಸೇವೆಗೆ ಸೀಮಿತಗೊಳಿಸಬೇಡಿ. ಸಾರ್ವಜನಿಕ ಸೇವೆಯನ್ನು ಸಹ ಮಾಡಿ. ನಿಮ್ಮ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಈ ದೇಶಕ್ಕೂ ಕೊಡುಗೆ ನೀಡಿ ಎಂದು ನಾನು ವಕೀಲರಿಗೆ ಹೇಳಲು ಬಯಸುತ್ತೇನೆ," ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.

(ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+