Get Updates
Get notified of breaking news, exclusive insights, and must-see stories!

ತರಾರ್ ಜೊತೆ ದುಬೈನಲ್ಲಿ 3 ರಾತ್ರಿ ಕಳೆದರೇ ತರೂರ್?

ನವದೆಹಲಿ, ಜ. 12: ಸುನಂದಾ ಪುಷ್ಕರ್ ಕೊಲೆ ಪ್ರಕರಣದ ತನಿಖೆಯಲ್ಲಿ ಪ್ರತಿದಿನ ಹೊಸ ಹೊಸ ವಿಷಯಗಳು ಹೊರಬರುತ್ತಿವೆ. ಈಗ ಬಂದಿರುವ ಆರೋಪ ಏನೆಂದರೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರಾರ್ ಜೊತೆ ದುಬೈನಲ್ಲಿ ತಂಗಿದ್ದರು ಎಂಬುದು.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ, "ಶಶಿ ತರೂರ್ ಅವರು ಶಂಕಿತ ಐಎಸ್ಐ ಪರ ಪತ್ರಕರ್ತೆ ತರಾರ್ ಜೊತೆ ದುಬೈನಲ್ಲಿ ಮೂರು ರಾತ್ರಿಗಳನ್ನು ಕಳೆದಿದ್ದಾರೆ. ಆದರೆ, ಆ ಸಮಯದಲ್ಲಿ ತರೂರ್ ಅವರು ಓರ್ವ ಕೇಂದ್ರ ಸಚಿವರಾಗಿದ್ದರು" ಎಂದು ಹೇಳಿದ್ದಾರೆ. [ಸುನಂದಾ ದಾಂಪತ್ಯದಲ್ಲಿ ಕಲಹ ತಂದ ಕೇಟಿ]

ಕೆಲವು ಸುದ್ದಿ ಚಾನಲ್‌ಗಳಲ್ಲಿ ಶಶಿ ತರೂರ್ ಹಾಗೂ ಮೆಹರ್ ತರಾರ್ ಇಬ್ಬರೂ ದುಬೈನಲ್ಲಿ ಮೂರು ದಿನ ಕಳೆದಿದ್ದರು ಎಂಬುದಾಗಿ ಓರ್ವ ಸಾಕ್ಷಿ ಹೇಳಿದ್ದಾರೆ ಎಂದು ವರದಿಯಾದ ನಂತರ ಸುಬ್ರಮಣಿಯನ್ ಸ್ವಾಮಿ ಈ ಪ್ರತಿಕ್ರಿಯೆ ನೀಡಿರುವುದು ಮಹತ್ವ ಪಡೆದಿದೆ. [ಸುನಂದಾ ಹತ್ಯೆ, ಇನ್ನಷ್ಟು ನಿಗೂಢ ಹೆಸರು ಬಯಲು]

tarar

ನವದೆಹಲಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಪ್ರತಿಕ್ರಿಯಿಸಿ, "ತರೂರ್ ಅವರು ನವದೆಹಲಿಯಲ್ಲಿರುವುದು ನಮಗೆ ತಿಳಿಸಿದೆ. ನಮ್ಮ ವಿಶೇಷ ತನಿಖಾ ದಳವು ಅಗತ್ಯಬಿದ್ದರೆ ಅವರನ್ನು ವಿಚಾರಣೆಗೆ ಕರೆಯಲಿದೆ" ಎಂದು ತಿಳಿಸಿದ್ದಾರೆ. [ಸುನಂದಾ ಸಾಯುವ ಮೊದಲು ಭೇಟಿಯಾಗಿದ್ದ ಸುನಿಲ್ ಯಾರು]

"ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರಾರ್ ಅವರು ತರೂರ್ ಜೊತೆ ಸ್ನೇಹ ಸಂಬಂಧ ಹೊಂದಿದ್ದರು. ಇದೇ ಸುನಂದಾ ಪುಷ್ಕರ್ ಅಸಮಾಧಾನಕ್ಕೆ ಕಾರಣವಾಗಿತ್ತು ಎಂಬ ಅನುಮಾನವಿದೆ. ಆದ್ದರಿಂದ ಮೆಹರ್ ತರಾರ್ ಅವರನ್ನೂ ಪ್ರಶ್ನಿಸುವ ಯೋಚನೆಯಿದೆ" ಎಂದು ತಿಳಿಸಿದ್ದಾರೆ. [ಶಶಿ ಸುನಂದಾ ಮೆಹರ್ ಪ್ರೇಮ ಪ್ರಸಂಗ]

ಇಷ್ಟು ದಿನ ಕೇರಳದಲ್ಲಿ ಆಯುರ್ವೇದಿಕ್ ಚಿಕಿತ್ಸೆ ಪಡೆಯುತ್ತಿದ್ದ ತರೂರ್ ಅವರು ನವದೆಹಲಿಗೆ ಭಾನುವಾರವಷ್ಟೇ ಆಗಮಿಸಿದ್ದಾರೆ. ಆದರೆ, ಪತ್ರಕರ್ತರ ಯಾವುದೇ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+