ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಣಾಳಿಕೆಯಲ್ಲಿ ಭಾರತ ನಕ್ಷೆಯಲ್ಲಿ ಪ್ರಮಾದ; ಬೇಷರತ್ ಕ್ಷಮೆಯಾಚಿಸಿದ ಶಶಿ ತರೂರ್

|
Google Oneindia Kannada News

ನವದೆಹಲಿ, ಸೆ.30: ಕಾಂಗ್ರೆಸ್ ಮುಖ್ಯಸ್ಥರ ಚುನಾವಣೆಗಾಗಿ ಹೊರಡಿಸಿದ್ದ ಪ್ರಣಾಳಿಕೆಯಲ್ಲಿ ಭಾರತ ನಕ್ಷೆಯ ಪ್ರಮಾದಕ್ಕಾಗಿ ಶಶಿ ತರೂರ್ ಅವರು "ಬೇಷರತ್" ಕ್ಷಮೆಯಾಚಿಸಿದ್ದಾರೆ.

ಪ್ರಣಾಳಿಕೆಯಲ್ಲಿ ಭಾರತದ ನಕ್ಷೆಯು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಭಾಗಗಳನ್ನು ಹೊಂದಿರಲಿಲ್ಲ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಷಯದ ಮೇಲೆ ಶಶಿ ತರೂರ್ ಇವರುದ್ಧ ಭಾರಿ ಆಕ್ರೋಶ ಹೊರಹಾಕಿದ್ದರು. ವಿಶೇಷವಾಗಿ ಟ್ವಿಟರ್‌ನಲ್ಲಿ ಬಿಜೆಪಿ ಬೆಂಬಲಿಗರು ಕಾಂಗ್ರೆಸ್ ನಾಯಕನ ವಿರುದ್ಧ ಕಿಡಿ ಕಾರಿದ್ದರು.

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ಗೆ ತ್ರಿಪಾಠಿ ಸೇರ್ಪಡೆ; ಕೊನೆಗೆ ಉಳಿಯೋದು ಯಾರು ಕಣದಲ್ಲಿ?ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ಗೆ ತ್ರಿಪಾಠಿ ಸೇರ್ಪಡೆ; ಕೊನೆಗೆ ಉಳಿಯೋದು ಯಾರು ಕಣದಲ್ಲಿ?

ಇದರ ಬೆನ್ನಲ್ಲೇ, ಟ್ವಿಟರ್‌ನಲ್ಲಿ 8 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಶಶಿ ತರೂರ್ , ನಕ್ಷೆಯನ್ನು ಸರಿಪಡಿಸಿದ ಆವೃತ್ತಿಗಳನ್ನು ಹಂಚಿಕೊಂಡಿದ್ದಾರೆ. ಯಾರೂ ಉದ್ದೇಶಪೂರ್ವಕವಾಗಿ ಇಂತಹ ಕೆಲಸಗಳನ್ನು ಮಾಡುವುದಿಲ್ಲ ಎಂದಿದ್ದಾರೆ.

"ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ"; ಶಶಿ ತರೂರ್

"ಯಾರೂ ಉದ್ದೇಶಪೂರ್ವಕವಾಗಿ ಇಂತಹ ಕೆಲಸಗಳನ್ನು ಮಾಡುವುದಿಲ್ಲ" ಎಂದಿರುವ ತರೂರ್ ಅವರು ಪರಿಷ್ಕೃತ ಪ್ರಣಾಳಿಕೆಯ ಲಿಂಕ್‌ಗಳೊಂದಿಗೆ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಅವರ ತಂಡವು "ತಪ್ಪು ಮಾಡಿದೆ" ಎಂದು ಹೇಳಿದ್ದಾರೆ.

"ನಾವು ಅದನ್ನು ತಕ್ಷಣವೇ ಅದನ್ನು ಸರಿಪಡಿಸಿದ್ದೇವೆ ಮತ್ತು ಇದಕ್ಕಾಗಿ ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ" ಎಂದು ಕ್ಷಮೆಯಾಚಿಸಿದ್ದಾರೆ.

ಪ್ರಣಾಳಿಕೆಯನ್ನು ಪರಿಶೀಲಿಸುವುದಿಲ್ಲ ಎಂದು ನೆಟ್ಟಿಗರ ತರಾಟೆ

ಪ್ರಣಾಳಿಕೆಯನ್ನು ಪರಿಶೀಲಿಸುವುದಿಲ್ಲ ಎಂದು ನೆಟ್ಟಿಗರ ತರಾಟೆ

ಸಾಮಾಜಿಕ ಮಾಧ್ಯಮ ಬಳಕೆದಾರರು ತಪ್ಪಾದ ನಕ್ಷೆಯನ್ನು "ದೊಡ್ಡ ಅವಿವೇಕದ ಕೆಲಸ" ಮತ್ತು "ನಾಚಿಕೆಗೇಡಿನ ಕೃತ್ಯ" ಎಂದು ಕರೆದಿದ್ದಾರೆ. ಮತ್ತೆ ಕೆಲವರು "ವಿಭಜಕ ಕಾರ್ಯಸೂಚಿ" ಇದು ಎಂದು ಆರೋಪಿಸಿದ್ದಾರೆ.

ತರೂರ್ ಅವರ ಕ್ಷಮೆಯಾಚನೆಯ ನಂತರವೂ ಟ್ವಿಟರ್ ಬಳಕೆದಾರರು, "ಪ್ರಣಾಳಿಕೆಯಂತಹ ಪ್ರಮುಖ ದಾಖಲೆಯನ್ನು ಬಿಡುಗಡೆ ಮಾಡುವ ಮೊದಲು ನೀವು ಪರಿಶೀಲಿಸಬಾರದೇ? ಎಂದಿದ್ದಾರೆ. ಜೊತೆಗೆ ಅದು ದೊಡ್ಡ ದಾಖಲೆಯೂ ಅಲ್ಲ. ಕೇವಲ 13 ಪುಟಗಳ ದಾಖಲೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಶಶಿ ತರೂರ್ ಅವರ ಮೂಲ ಪ್ರಣಾಳಿಕೆಯಲ್ಲಿ ಭಾರತದ ನಕ್ಷೆಯನ್ನು ಈಗ ಸರಿಪಡಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲೂ ವಿವಾದ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲೂ ವಿವಾದ

ಮೂರು ವರ್ಷಗಳಲ್ಲಿ ಇದು ಎರಡನೇ ಬಾರಿಗೆ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು ಇಂತಹ ನಕ್ಷೆ ಪ್ರಮಾದ ವಿವಾದಕ್ಕೆ ಸಿಲುಕಿದ್ದಾರೆ. ಡಿಸೆಂಬರ್ 2019 ರಲ್ಲಿ, ಅವರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಕೇರಳ ಕಾಂಗ್ರೆಸ್ ಪ್ರತಿಭಟನೆಯ ಬಗ್ಗೆ ಪ್ರಚಾರ ಸಾಮಗ್ರಿಗಳನ್ನು ಹಂಚಿಕೊಂಡಿದ್ದರು. ಈ ವೇಳೆಯು ಇದೇ ರೀತಿಯ ಸಮಸ್ಯೆಯಿತ್ತು. ಬಿಜೆಪಿಯ ಐಟಿ ಸೆಲ್ ಮತ್ತು ಸಂಬಿತ್ ಪಾತ್ರ ಅವರಂತಹ ನಾಯಕರು ಅವರನ್ನು ಟೀಕಿಸಿದ ನಂತರ ಅವರು ಆ ಟ್ವೀಟ್ ಅನ್ನು ಅಳಿಸಿದ್ದರು.

'ಥಿಂಕ್ ಟುಮಾರೊ, ಥಿಂಕ್ ತರೂರ್' ಎಂಬ ಅಡಿಬರಹದೊಂದಿಗೆ ತಮ್ಮ ಪ್ರಣಾಳಿಕೆಯ ಕಿರುಪುಸ್ತಕದಲ್ಲಿ, ಅವರು ಭಾರತದ ವಿಸ್ತಾರದಲ್ಲಿರುವ ಕಾಂಗ್ರೆಸ್ ಘಟಕಗಳನ್ನು ಪ್ರತಿನಿಧಿಸುವ ಚುಕ್ಕೆಗಳ ಜಾಲವನ್ನು ಹೊಂದಿರುವ ನಕ್ಷೆಯನ್ನು ಬಳಸಿದ್ದಾರೆ. ಇದು ಪಾಕಿಸ್ತಾನ ಮತ್ತು ಚೀನಾ ಆಕ್ರಮಿಸಿಕೊಂಡಿರುವ ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ಭಾಗಗಳನ್ನು ಒಳಗೊಂಡಿರುವ ಭಾರತದ ಅಧಿಕೃತ ನಕ್ಷೆಗಿಂತ ಭಿನ್ನವಾಗಿತ್ತು.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ, ಶಶಿ ತರೂರ್ ಅವರು ಪಕ್ಷದ ರಾಜ್ಯಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಮುಖ ಎದುರಾಳಿಯಾಗಿದ್ದಾರೆ. ಖರ್ಗೆ ಗಾಂಧಿಯವರ ಬೆಂಬಲದಿಂದ ಮುಂಚೂಣಿಯಲ್ಲಿದ್ದಾರೆ. ಜಾರ್ಖಂಡ್ ಮಾಜಿ ಸಚಿವ ಕೆಎನ್ ತ್ರಿಪಾಠಿ ಅವರು ಅಕ್ಟೋಬರ್ 17 ರ ಚುನಾವಣೆಗೆ ಮೂರನೇ ಅಭ್ಯರ್ಥಿಯಾಗಿದ್ದಾರೆ.

20 ವರ್ಷಗಳಲ್ಲಿ ಇದು ಮೊದಲ ಕಾಂಗ್ರೆಸ್ ಮುಖ್ಯ ಚುನಾವಣೆಯಾಗಿದ್ದು, ಇದರಲ್ಲಿ ಪ್ರಸ್ತುತ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ, ಸಂಸದ ರಾಹುಲ್ ಗಾಂಧಿ ಸ್ಪರ್ಧಿಸುತ್ತಿಲ್ಲ. ವಾಸ್ತವವಾಗಿ, ಸ್ವಜನಪಕ್ಷಪಾತದ ಆರೋಪಗಳಿಗೆ ಸ್ಪಷ್ಟವಾದ ಪ್ರತಿಯಾಗಿ ಕುಟುಂಬವು ಗಾಂಧಿಯೇತರರು ಈ ಕ್ರಮ ತೆಗೆದುಕೊಂಡಿದ್ದಾರೆ.

English summary
Congress leader Shashi Tharoor apologised unconditionally for a blunder in his manifesto for Congress president election, BJP supporters attacked him over it. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X