ನಾನೊಬ್ಬ ಸೈನಿಕ, ನಿಮಗಾಗಿ ಏನು ಮಾಡಲೂ ಸಿದ್ಧ
ನವದೆಹಲಿ, ಜ.17 : ನವದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನದಲ್ಲಿ ಮಾತನಾಡಿದ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ 10 ವರ್ಷಗಳಲ್ಲಿ ಜನರ ಅಭಿವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದ್ದಾರೆ. ಪ್ರಧಾನಿಯನ್ನು ಸಂಸದರು ಆಯ್ಕೆ ಮಾಡುತ್ತಾರೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ
ಮಧ್ಯಾಹ್ನ
ತಲಕಟೋರ
ಮೈದಾನದಲ್ಲಿ
ನಡೆಯುತ್ತಿರುವ
ಕಾಂಗ್ರೆಸ್
ಮಹಾಧಿವೇಶನ
ಉದ್ದೇಶಿಸಿ
ಮಾತನಾಡಿದ
ರಾಹುಲ್
ಗಾಂಧಿ
ಕಾರ್ಯಕರ್ತರು
ಮತ್ತು
ನಾಯಕರಲ್ಲಿ
ಸ್ಫೂರ್ತಿ
ತುಂಬಿದರು.
ಪಕ್ಷದ
ಕಾರ್ಯರ್ತರು
ಸೈನಿಕರಿದ್ದಂತೆ
ಅವರ
ಜೊತೆ
ನಾವು
2014ರ
ಲೋಕಸಭೆ
ಚುಣಾವಣೆಯನ್ನು
ಎದುರಿಸುತ್ತೇವೆ
ಎಂದು
ಅವರು
ಘೋಷಿಸಿದರು.
"ಸೋನಿಯಾ ಗಾಂಧಿ ನಮ್ಮ ಶಕ್ತಿ" ಎಂದು ಹೇಳಿದ ರಾಹುಲ್ ಗಾಂಧಿ, ದೇಶದ ಪ್ರಧಾನಿ ಯಾರಗಬೇಕು? ಎಂಬುದನ್ನು ಸಂಸದರು ನಿರ್ಧರಿಸುತ್ತಾರೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ್ದೇವೆ ಎಂದು ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸಿ ಎಂದು ಕರೆ ನೀಡುವ ವಿಪಕ್ಷಗಳು ಮೊದಲು ದೇಶದ ಇತಿಹಾಸವನ್ನು ಓದಬೇಕು ಎಂದು ರಾಹುಲ್ ಚಾಟಿ ಬೀಸಿದರು. [ರಾಹುಲ್ ಗೆ ಪ್ರಚಾರ ಸಮಿತಿ ಹೊಣೆ]
ಪ್ರಧಾನಿ ಮನಹೋಹನ್ ಸಿಂಗ್ ಅತ್ಯುತ್ತಮ ಕೆಲಸ ಮಾಡಿದ್ದಾರೆ. 10 ವರ್ಷಗಳಲ್ಲಿ ದೇಶದ ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಅದಕ್ಕಾಗಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು. ಜನ ಸಾಮಾನ್ಯನಿಗೆ ಕಾಂಗ್ರೆಸ್ ಪಕ್ಷ ಶಕ್ತಿ ತುಂಬಿದೆ. ಜನಪರ ಯೋಜನೆಯನ್ನು ಜಾರಿಗಳಿಸಿದ್ದೇವೆ ಎಂದು ಅವರು ತಿಳಿಸಿದರು.
ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು
* ಪ್ರಧಾನಿ ಮನಮೋಹನ್ ಸಿಂಗ್ ಅವರು ಹತ್ತು ವರ್ಷ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ.
* ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ನಾವು ಶಕ್ತಿ ತುಂಬಿದ್ದೇವೆ.
* ಕಾಂಗ್ರೆಸ್ ನೇತೃತ್ವದ ಸರ್ಕಾರ ಮಹತ್ವದ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತರುವ ಮೂಲಕ ಜನರಿಗೆ ಅಧಿಕಾರ ನೀಡಿದೆ.
* 'ಆಧಾರ್' ಮೂಲಕ ಜನರಿಗೆ ನೇರವಾಗಿ ಸಹಾಯಧನ ನೀಡುವುದರೊಂದಿಗೆ ಜನರ ದುಡ್ಡನ್ನು ಜನರ ಖಾತೆಗಳಿಗೆ ಮರಳಿಸಿದ್ದೇವೆ.
* ಪಕ್ಷದ ಕಾರ್ಯಕರ್ತರು ಸೈನಿಕರಿದ್ದಂತೆ. ಅವರ ಜೊತೆ ಚುನಾವಣೆ ಎದುರಿಸಲು ನಾವು ಸಿದ್ಧವಾಗಿದ್ದೇವೆ.
* ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸೋಣ ಎನ್ನುವ ವಿಪಕ್ಷಗಳು ಇತಿಹಾಸದ ಪುಸ್ತವನ್ನೊಮ್ಮೆ ಓದಲಿ.