ಪುಲ್ವಾಮಾ ದಾಳಿ ಪಿತೂರಿ ನಡೆದಿದ್ದು ಮಾರ್ಚ್ ನಲ್ಲಿ! RDX ಸಾಗಿಸಿದ್ದು ಸಿಲಿಂಡರ್ ನಲ್ಲಿ!
Recommended Video

ನವದೆಹಲಿ, ಫೆಬ್ರವರಿ 20: 40 ಕ್ಕೂ ಹೆಚ್ಚು ಯೋಧರ ಬಲಿದಾನಕ್ಕೆ ಕಾರಣವಾದ ಪುಲ್ವಾಮಾ ಭಯೋತ್ಪಾದಕ ದಾಳಿಯ ಪಿತೂರಿ 2018 ರ ಮಾರ್ಚ್ ನಲ್ಲೇ ಆರಂಭವಾಗಿತ್ತು ಎಂದು ಮೂಲಗಳು ತಿಳಿಸಿವೆ.
ದಾಳಿಯಲ್ಲಿ ಸುಮಾರು 80 ಕೆಜಿಗೂ ಅಧಿಕ ಆರ್ ಡಿಎಕ್ಸ್ ಅನ್ನು ಬಳಸಲಾಗಿದ್ದು, ಇದರಲ್ಲಿ ಅಮೋನಿಯಂ ನೈಟ್ರೇಟ್ ಮತ್ತು ಇನ್ನಿತರ ರಾಸಾಯನಿಕಗಳಿದ್ದವು. ಕಳೆದ ಮಾರ್ಚ್ ನಲ್ಲಿ ಸುಮಾರು 13 ಉಗ್ರರು ಭಾರತದ ಗಡಿಯೊಳಗೆ ನುಸುಳಿದ್ದರು. ಅವರು ಪೂಂಚ್, ಶೋಪಿಯಾನ್ ಮೂಲಕ ಆರ್ ಡಿಎಕ್ಸ್ ಗಳನ್ನು ಸಾಗಿಸಿದ್ದರು. ನಂತರ ಮಿಡೋರಾ ಟ್ರಾಲ್ ಪ್ರದೇಶದಿಂದ ಪುಲ್ವಾಮಾಕ್ಕೆ ಆರ್ ಡಿಎಕ್ಸ್ ಗಳನ್ನು ಸಿಲಿಂಡರ್ ಮತ್ತು ಕಲ್ಲಿದ್ದಲು ಚೀಲಗಳ ಮೂಲಕ ಸಾಗಿಸಲಾಗಿತ್ತು.

13 ಉಗ್ರರಲ್ಲಿ ಮೊನ್ನೆ ಭಾರತೀಯ ಸೇನೆಯು ಬಲಿಹಾಕಿದ ಕಮ್ರಾನ್ ಮತ್ತು ರಶೀದ್ ಘಾಜಿ ಸಹ ಇದ್ದರು. ಇವರೇ ಇಡೀ ಘಟನೆಯ ಸಂಚುಕೋರರು ಎನ್ನಲಾಗಿತ್ತು.
ಸಿಆರ್ ಪಿಎಫ್ ಶಿಬಿರಗಳ ಮೇಲೆ ದಾಳಿ ಮಾಡುವುದರಿಂದ ಹೆಚ್ಚಿನ ಹಾನಿಯಾಗುವುದಿಲ್ಲ ಎಂದು ನಿರೀಕ್ಷಿಸಿದ್ದ ಈ ಉಗ್ರರು ಸಿಆರ್ ಪಿಎಫ್ ವಾಹನಗಳ ಮೇಲೆ ದಾಳಿ ಮಾಡಲು ನಿರ್ಧರಿಸಿದ್ದರು.
ಹಿಮಮಳೆಯ ಕಾರಣ ಜಮ್ಮು-ಶ್ರೀನಗರ ಹೆದ್ದಾರಿಯನ್ನು ಕೆಲ ದಿನ ಮುಚ್ಚಲಾಗಿತ್ತು. ಪೆಬ್ರವರಿ 14 ರಂದು ಮತ್ತೆ ಹೆದ್ದಾರಿ ತೆರೆದ ನಂತರ ಸಿಆರ್ ಪಿಎಫ್ ಯೋಧರ ವಾಹನಗಳು ಈ ಮಾರ್ಗವಾಗಿ ಸಾಗಲಿವೆ ಎಂಬುದು ಉಗ್ರರಿಗೆ ತಿಳಿದಿತ್ತು. ಆದ್ದರಿಂದ ಆ ದಿನವನ್ನೇ ಆಯ್ದುಕೊಂಡಿದ್ದರು.
ಆರ್ ಡಿಎಕ್ಸ್ ತುಂಬಿದ್ದ ಕಾರನ್ನು ಸಿಆರ್ ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆಸುವ ಯೋಜನೆ ಸಫಲವಾಗಿತ್ತು. 44 ಯೋಧರು ಹುತಾತ್ಮರಾದರು. ಅದಾಗಿ ನೂರು ಗಂಟೆಗೂ ಮೊದಲೇ ಭಾರತೀಯ ಸೇನೆ ಸಂಚುಕೋರರನ್ನು ಹೊಡೆದುರುಳಿಸಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications