ರಾಮ್ ನಾಥ್ ಗಿಂತ ಮೀರಾ ಸಮರ್ಥರು: ರಾಮ್ ಗೋಪಾಲ್ ಯಾದವ್
ನವದೆಹಲಿ, ಜೂನ್ 23: ರಾಮ್ ನಾಥ್ ಕೋವಿಂದ್ ಗಿಂತ ಮೀರಾ ಕುಮಾರ್ ಸಮರ್ಥ ಅಭ್ಯರ್ಥಿ ಎಂದು ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಮುಖ್ಯಸ್ಥ ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ಮೀರಾ ಅವರದು ದಿಟ್ಟ ಹೆಜ್ಜೆ, ದಲಿತ ನಾಯಕರಾಗಿದ್ದ ಜಗಜೀವನ್ ರಾಮ್ ಅವರ ಮಗಳು ಎಂಬ ಹೆಗ್ಗಳಿಕೆಯೂ ಅವರ ಮೇಲಿದೆ. ಆದ್ದರಿಂದ ನಮ್ಮ ಬೆಂಬಲ ಮೀರಾ ಅವರಿಗೆ ಎಂದು ಅವರು ಹೇಳಿದ್ದಾರೆ.

ವಿಪಕ್ಷಗಳು ತಮ್ಮ ರಾಷ್ಟ್ರಪತಿ ಅಭ್ಯರ್ಥಿಯನ್ನು ಜೂನ್ 22 ರಂದು ಘೋಷಿಸುತ್ತಿದ್ದಂತೆಯೇ ಪರ- ವಿರೋಧದ ಲೆಕ್ಕಾಚಾರ ಶುರುವಾಗಿದೆ. ಇಬ್ಬರೂ ದಲಿತ ನಾಯಕರಾಗಿರುವುದರಿಂದ ಜುಲೈ 17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಕುತೂಹಲ ತಣಿಸಿಕೊಳ್ಳುವುದಕ್ಕೆ ಜು.20 ಫಲಿತಾಂಶದ ದಿನದವರೆಗೂ ಕಾಯಬೇಕು.












Click it and Unblock the Notifications