ಮೋದಿ ಇಸ್ರೇಲ್ ಪ್ರವಾಸ ಭಾರತಕ್ಕೆ ಅತೀ ಮಹತ್ವದ ಸಂಗತಿ
ನವದೆಹಲಿ, ಜುಲೈ 4: ಭಾರತ ಮತ್ತು ಇಸ್ರೇಲ್ ಎರಡೋ ರಾಷ್ಟ್ರಗಳೂ ಸಮಾನ ರಕ್ಷಣಾ ಸಮಸ್ಯೆಯನ್ನು ಹೊಂದಿರುವ ಕಾರಣದಿಂದಾಗಿ ಉಭಯ ದೇಶಗಳ ನಾಯಕರ ಭೇಟಿಯೂ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಭಾರತೀಯ ರಕ್ಷಣಾ ಇಲಾಖೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಎರಡೂ ರಾಷ್ಟ್ರಗಳೂ ಗಡಿ ಸಮಸ್ಯೆ ಮತ್ತು ಭಯೋತ್ಪಾದಕರ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಉಭಯ ರಾಷ್ಟ್ರಗಳೂ ಈ ಸಮಸ್ಯೆಗಳನ್ನು ಹತ್ತಿಕ್ಕುವ ಬಗ್ಗೆ ಚರ್ಚೆ ನಡೆಸುವುದು ಮಹತ್ವದ್ದಾಗಿದೆ.

ಅಷ್ಟೇ ಅಲ್ಲ, ಭದ್ರತೆ, ತಂತ್ರಜ್ಞಾನ, ಶಿಕ್ಷಣ, ಕೃಷಿ ಮುಂತಾದ ಕ್ಷೇತ್ರಗಳ ಬಗ್ಗೆಯೂ ನಾಯಕರು ಚರ್ಚಿಸಲಿರುವುದು ಎರಡೂ ದೇಶಗಳ ಭವಿಷ್ಯದ ದೃಶಶ್ಟಿಯಿಂದಲೂ ಅನುಕೂಲಕರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications