ಪಾಕ್ ದೋಣಿ ಸ್ಫೋಟಿಸಿದ್ದು ಭಾರತವಲ್ಲ : ಡಿಐಜಿ ಸ್ಪಷ್ಟನೆ
ನವದೆಹಲಿ, ಫೆ. 18: ಗುಜರಾತ್ ಹಾಗೂ ಪಾಕಿಸ್ತಾನ ಮಧ್ಯೆ ಇರುವ ಜಲ ಗಡಿಯಲ್ಲಿ ಈಚೆಗೆ ಸ್ಫೋಟಗೊಂಡ ಪಾಕಿಸ್ತಾನದ ಬೋಟ್ ಹಲವು ಅನುಮಾನಗಳನ್ನು ಹುಟ್ಟುಹಾಕಿವೆ. ಇದರಲ್ಲಿದ್ದದ್ದು ಉಗ್ರರು ಎಂದು ಭಾರತ ಹೇಳಿದ್ದರೂ ಪಾಕಿಸ್ತಾನ ಒಪ್ಪಿಕೊಂಡಿಲ್ಲ. ಆದರೆ, ಭಾರತದಲ್ಲಿಯೇ ವಿವಾದ ಸೃಷ್ಟಿಯಾಗಿದೆ.
ಈ ಬೋಟ್ ಸ್ಫೋಟಿಸಿದ್ದು ಸ್ವತಃ ಕೋಸ್ಟ್ ಗಾರ್ಡ್ ಸೈನಿಕರು ಎಂದು ಡಿಐಜಿ ಹೇಳಿಕೆ ನೀಡಿದ್ದಾರೆ ಎಂಬುದಾಗಿ ಪತ್ರಿಕೆಯೊಂದು ಮಾಡಿದ್ದ ವರದಿ ವಿವಾದ ಸೃಷ್ಟಿಸಿದೆ. ಆದರೆ, ಈ ವರದಿ ಸುಳ್ಳು ಎಂದು ಸ್ವತಃ ಡಿಐಜಿ ಸ್ಪಷ್ಟೀಕರಣ ನೀಡಿದ್ದಾರೆ. [ಉಗ್ರರಿಗೆ ಪಾಕ್ ಸುರಕ್ಷಿತ ಸ್ವರ್ಗ]
ವಿವಾದವೇನು? : ವಿವಾದದ ಕೇಂದ್ರಬಿಂದು ಕೋಸ್ಟ್ ಗಾರ್ಡ್ನ ಮುಖ್ಯಸ್ಥರಾಗಿರುವ ಡಿಐಜಿ ಬಿ.ಕೆ. ಲೋಶಾಲಿ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು "ಬೋಟನ್ನು ಸ್ಫೋಟಿಸಿಬಿಡಿ. ಅವರಿಗೆ ನಾವು ಬಿರಿಯಾನಿ ಸೇವೆ ನೀಡಬೇಕಾಗಿಲ್ಲ ಎಂದು ಸೈನಿಕರಿಗೆ ಆದೇಶ ಹೊರಡಿಸಲಾಗಿತ್ತು. ಈ ಪ್ರಕಾರ ಕೋಸ್ಟ್ ಗಾರ್ಡ್ ಸೈನಿಕರು ಬೋಟನ್ನು ಸ್ಫೋಟಿಸಿದ್ದಾರೆ" ಎಂದು ಹೇಳಿದ್ದರು ಎಂಬುದಾಗಿ ಪತ್ರಿಕೆಯೊಂದು ವರದಿ ಮಾಡಿತ್ತು.

ಈ ವರದಿ ವಿವಾದಕ್ಕೆ ಕಾರಣವಾಗಿತ್ತು. ಆದರೆ, ತಾವು ಹೀಗೆ ಹೇಳಿಕೆ ನೀಡಿಲ್ಲ. ಈ ವರದಿ ತಪ್ಪಾಗಿದೆ. ತಾವು ಹೇಳಿದ್ದನ್ನು ತಿರುಚಿ ಬರೆಯಲಾಗಿದೆ ಎಂದು ಡಿಐಜಿ ಸ್ಪಷ್ಟೀಕರಣ ನೀಡಿದ್ದಾರೆ. [ಸುರಕ್ಷಿತ ಸ್ಥಳಕ್ಕಾಗಿ ಹುಡುಕಾಟ]
ಈ ಕಾರ್ಯಾಚರಣೆಯ ನೇತೃತ್ವವನ್ನು ತಾವು ವಹಿಸಿರಲಿಲ್ಲ. ಕೋಸ್ಟ್ ಗಾರ್ಡ್ ರೀಜನ್ (ವಾಯವ್ಯ) ವಹಿಸಿತ್ತು. ಬೋಟ್ ತನ್ನಿಂದ ತಾನೆಯೇ ಸ್ಫೋಟಗೊಂಡಿದೆಯೇ ಹೊರತು ಕೋಸ್ಟ್ ಗಾರ್ಡ್ನಿಂದಲ್ಲ ಎಂದು ಬಿ.ಕೆ. ಲೋಶಾಲಿ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.
ಕೋಸ್ಟ್ ಗಾರ್ಡ್ ಉಪ ಮಹಾ ನಿರ್ದೇಶಕ ಕೆ.ಆರ್. ನೌಟಿಯಾಳ್ ಕೂಡ "ಕಾರ್ಯಾಚರಣೆಯಲ್ಲಿ ಬಿ.ಕೆ. ಲೋಶಾಲಿ ಭಾಗವಹಿಸಿರಲಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. [ಪಾಕ್ ದೋಣಿ ಕಂಡಿದ್ದು ಹೇಗೆ?]
ಗೊಂದಲವೇನು? : 2014ರ ಡಿಸೆಂಬರ್ 31ರಂದು ಗುಜರಾತ್ ಜಲಗಡಿಯಲ್ಲಿ ಪಾಕಿಸ್ತಾನದ ಬೋಟ್ ಒಂದು ಕಾಣಿಸಿಕೊಂಡಿತ್ತು. ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ ಕಣ್ಣಿಗೆ ಈ ಬೋಟ್ ಬಿದ್ದಾಗ ಬಂಧಿಸಲು ಯತ್ನಿಸಲಾಯಿತು. ಆದರೆ, ಈ ಬೋಟ್ ಪರಾರಿಯಾಗಲು ಯತ್ನಿಸಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತು.
ಈ ದೋಣಿ ಪಾಕಿಸ್ತಾನದ್ದು ಎಂದು ಭಾರತ ಆರೋಪಿಸಿತ್ತು. ಆದರೆ, ಪಾಕಿಸ್ತಾನ ಸರ್ಕಾರ ಇದನ್ನು ನಿರಾಕರಿಸಿತ್ತು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications