ಸೈಕಲ್, ಕುದುರೆ ಏರಿ ಬಂದ ಬಿಜೆಪಿ ಸಂಸದರು!

ನವದೆಹಲಿ, ಏಪ್ರಿಲ್, 27: ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ ಜಾರಿಗೆ ತಂದಿರುವ ಸಮ-ಬೆಸ ವಾಹನ ಸಂಚಾರ ಯೋಜನೆಗೆ ವಿರೋಧ ವ್ಯಕ್ತಿಪಡಿಸಿದ ಬಿಜೆಪಿ ಸಂಸದರು ಸೈಕಲ್ ಮತ್ತು ಕುದುರೆ ಸವಾರಿ ಮಾಡಿ ಸಂಸತ್ ಭವನಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಸಂಸದ ರಾಮ್ ಪ್ರಸಾದ್ ಶರ್ಮಾ ಬುಧವಾರ ಕುದುರೆಯೇರಿ ಸಂಸತ್ತಿಗೆ ಆಗಮಿಸಿದರೆ, ಮನೋಜ್ ತಿವಾರಿ ಸೈಕಲ್​ನಲ್ಲಿ ಆಗಮಿಸಿ ತಮ್ಮ ಆಕ್ರೋಶ ಹೊರಹಾಕಿದರು.

bjp

ನನ್ನ ಕಾರನ್ನು ಇಂದು ಹೊರತೆಗೆಯುವಂತಿಲ್ಲ. ಸರ್ಕಾರ ಮಾಡಿರುವ ಬಸ್ ವ್ಯವಸ್ಥೆ ನಮ್ಮ ಮನಸ್ಸಿಗೆ ಬಂದಿಲ್ಲ. ಯಾರಿಗೆ ಸಮ-ಬೆಸದ ಮೇಲೆ ಅಸಮಾಧಾನವಿದೆಯೋ ಅವರು ಈ ಬಗೆಯಲ್ಲಿ ಪ್ರತಿಭಟನೆ ಮಾಡಿ ನಮ್ಮ ಜತೆ ಕೈ ಜೋಡಿಸಬೇಕು ಎಂದು ರಾಮ್ ಪ್ರಸಾದ್ ಶರ್ಮಾ ಹೇಳಿದರು.

ಮಾಲಿನ್ಯ ನಿಯಂತ್ರಣ ಉದ್ದೇಶದಿಂದ ಕೇಜ್ರಿವಾಲ್ ಸರ್ಕಾರ ಜನವರಿ ತಿಂಗಳಲ್ಲಿ 15 ದಿನ ಕಾಲ ಸಮ-ಬೆಸ ಪದ್ಧತಿಯನ್ನು ಜಾರಿ ಮಾಡಿತ್ತು. ಅದಾದ ಮೇಲೆ ಇದೀಗ ಎರಡನೇ ಹಂತದಲ್ಲಿ ಯೋಜನೆಯನ್ನು ಜಾರಿ ಮಾಡಿದ್ದು ಪಾಲಿಸದವರಿಗೆ ದಂಡ ಹಾಕಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+