ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಿಬಿಐ ಮುಖ್ಯಸ್ಥರ ಮರು ನಿಯೋಜನೆ, ಪಿಎಂ ಬಚಾವಾಗಲು ಸಾಧ್ಯವೇ ಇಲ್ಲ'

|
Google Oneindia Kannada News

ನವದೆಹಲಿ, ಜನವರಿ 8: ರಫೇಲ್ ವ್ಯವಹಾರದ ತನಿಖೆ ಆರಂಭಿಸಬಹುದು ಎಂಬ ಕಾರಣಕ್ಕೆ ಸಿಬಿಐ ಮುಖ್ಯಸ್ಥರನ್ನು ಮಧ್ಯರಾತ್ರಿ ಒಂದು ಗಂಟೆಗೆ ತೆಗೆಯಲಾಯಿತು.. ಇದೀಗ ಅಲೋಕ್ ವರ್ಮಾರನ್ನು ಪುನರ್ ನಿಯೋಜನೆಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದರಿಂದ ನ್ಯಾಯ ದೊರೆಂತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.

ರಫೇಲ್ ವ್ಯವಹಾರದಿಂದ ಪ್ರಧಾನಿಗಳನ್ನು ರಕ್ಷಿಸಲು ಯಾವುದರಿಂದಲೂ ಸಾಧ್ಯವಿಲ್ಲ. ಸಾಕ್ಷ್ಯಗಳು ತೆರೆದುಕೊಂಡಿವೆ ಮತ್ತು ಸುಮ್ಮನಾಗಿಸಲಾಗುತ್ತಿದೆ ಎಂದಿರುವ ಅವರು, ಮಧ್ಯರಾತ್ರಿ ವೇಳೆ ಸಿಬಿಐ ಮುಖ್ಯಸ್ಥರನ್ನು ಬದಲಿಸಿದ್ದು ರಫೇಲ್ ಅವ್ಯವಹಾರ ಆರೋಪಕ್ಕೆ ತಳುಕು ಹಾಕಿಕೊಂಡಿದೆಯೇ ಎಂದು ಕೇಳಿದ್ದಾರೆ.

'ಸಿಬಿಐ ಕುರಿತು ಸುಪ್ರೀಂ ತೀರ್ಪು: ಮೋದಿ ಸರ್ಕಾರಕ್ಕೆ ಕಪಾಳಮೋಕ್ಷ!''ಸಿಬಿಐ ಕುರಿತು ಸುಪ್ರೀಂ ತೀರ್ಪು: ಮೋದಿ ಸರ್ಕಾರಕ್ಕೆ ಕಪಾಳಮೋಕ್ಷ!'

ಅನಿಲ್ ಅಂಬಾನಿಗೆ ಮೂವತ್ತು ಸಾವಿರ ಕೋಟಿ ರುಪಾಯಿ ದೊರಕಿಸಿಕೊಡಲು ಪ್ರಧಾನಮಂತ್ರಿ ಸಹಾಯ ಮಾಡಿದ್ದಾರೆ ಎಂಬುದು ಸ್ಪಷ್ಟ. ಯಾವುದೇ ಅನುಮಾನದ ನೆರಳಿಲ್ಲದೆ, ಶೇಕಡಾ ನೂರರಷ್ಟು ಖಾತ್ರಿಯಾಗಿ ದೇಶದ ಜನರಿಗೆ ಈ ವಿಚಾರ ಗೊತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Nothing will save PM from Rafale, said Rahul

ಸಿಬಿಐ ವಿವಾದದಲ್ಲಿ ಸರ್ಕಾರಕ್ಕೆ ತೀವ್ರ ಹಿನ್ನಡೆ: ಸುಪ್ರೀಂಕೋರ್ಟ್ ಹೇಳಿದ್ದೇನು?ಸಿಬಿಐ ವಿವಾದದಲ್ಲಿ ಸರ್ಕಾರಕ್ಕೆ ತೀವ್ರ ಹಿನ್ನಡೆ: ಸುಪ್ರೀಂಕೋರ್ಟ್ ಹೇಳಿದ್ದೇನು?

ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿ, ಸರಕಾರವು ಯಾರ ವಿರುದ್ಧವೂ ಅಲ್ಲ ಮತ್ತು ಸಂಸ್ಥೆಯ ಮೊದಲ ಎರಡು ಉನ್ನತ ಸ್ಥಾನಗಳಲ್ಲಿ ಇದ್ದವರು ಜಗಳ ಆಡುವಾಗ ಸಿಬಿಐನ ಸಮಗ್ರತೆ ಹಾಗೂ ವಿಶ್ವಾಸಾರ್ಹತೆ ರಕ್ಷಿಸುವ ಉದ್ದೇಶದಿಂದ ನಿರ್ಧಾರ ಕೈಗೊಳ್ಳಲಾಯಿತು ಎಂದಿದ್ದಾರೆ.

English summary
Rahul Gandhi today seized on the Supreme Court order reinstating exiled CBI chief Alok Verma to reinforce his allegations against Prime Minister Narendra Modi and the government on the Rafale jet deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X