ಇಂದಿರಾ ಗಾಂಧಿ To ನಿರ್ಭಯಾ: ಹ್ಯಾಂಗ್ಮ್ಯಾನ್ ಜೀವನದ ಅಚ್ಚರಿಯ ಸುದ್ದಿ
ನವ ದೆಹಲಿ, ಮಾರ್ಚ್ 21: ''ಇದು ನಮ್ಮ ಕುಟುಂಬದ ಪಾರಂಪರಿಕ ವೃತ್ತಿ. ಇದನ್ನು ನಾನು ಹಾಗೆಯೇ ಮುಂದುವರೆಸಿಕೊಂಡು ಹೋಗುತ್ತೇನೆ.'' ಹೀಗೆಂದು ಹೇಳುತ್ತಾರೆ ಹ್ಯಾಂಗ್ಮ್ಯಾನ್ ಪವನ್ ಜಲ್ಲದ್.
ನಿರ್ಭಯಾ ಪ್ರಕರಣದ ಹಂತಕರನ್ನು ನಿನ್ನೆ (ಮಾರ್ಚ್ 20) ಗಲ್ಲಿಗೆ ಏರಿಸಲಾಗಿದೆ. ಆ ಕೀಚಕರ ಕುತ್ತಿಗೆಗೆ ಹಗ್ಗ ಹಾಕಿದ್ದು, ಹ್ಯಾಂಗ್ಮ್ಯಾನ್ ಪವನ್ ಜಲ್ಲದ್. ನಿರ್ಭಯಾ ಕೇಸ್ ಇಡೀ ಭಾರತದಾದ್ಯಂತ ದೊಡ್ಡ ಮಟ್ಟದ ಸುದ್ದಿ ಮಾಡಿದ್ದ ಪ್ರಕರಣ. ಪ್ರಕರಣದ ಅಪರಾಧಿಗಳನ್ನ ಗಲ್ಲಿಗೆ ಏರಿಸಿದ ಹ್ಯಾಂಗ್ ಮ್ಯಾನ್ ಪವನ್ ಭಾರತದ ಜನರ ಮೆಚ್ಚುಗೆ ಪಡೆದಿದ್ದಾರೆ.
ಹ್ಯಾಂಗ್ಮ್ಯಾನ್ ಕೆಲಸ ಸಾಮಾನ್ಯವಾದ ವೃತ್ತಿಯಲ್ಲ. ಹೀಗಾಗಿ, ಪವನ್ ಜಲ್ಲದ್ ಜೀವನ ತುಂಬ ಕುತೂಹಲಕಾರಿಯಾಗಿದೆ. ಅವರ ಇಡೀ ಕುಟುಂಬ ಇದೇ ವೃತ್ತಿಯನ್ನು ನಂಬಿಕೊಂಡು, ಜೀವನ ಸಾಗಿಸುತ್ತ ಬಂದಿದೆ. ತಾತನಿಂದ ಶುರುವಾದ ವೃತ್ತಿಯನ್ನು, ಈಗ ಮೊಮ್ಮಗ ಪವನ್ ಜಲ್ಲದ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮುಂದೆ ತನ್ನ ಮಗ ಕೂಡ ಇದೇ ಕೆಲಸ ಮಾಡಬೇಕು ಎನ್ನುವುದು ಪವನ್ ಅವರ ಆಸೆಯಾಗಿದೆ.

ತಾತ, ಅಪ್ಪ ಈಗ ಮಗ
ಹ್ಯಾಂಗ್ಮ್ಯಾನ್ ಕೆಲಸದಲ್ಲಿ ಪವನ್ ಜಲ್ಲದ್ ಕುಟುಂಬ ದೊಡ್ಡ ಇತಿಹಾಸ ಹೊಂದಿದೆ. 1951 ರಿಂದ ಅವರ ಕುಟುಂಬ ಈ ಕೆಲಸ ಮಾಡಿಕೊಂಡು ಬಂದಿದೆ. ಪವನ್ ಜಲ್ಲದ್ ತಾತ ಹ್ಯಾಂಗ್ ಮ್ಯಾನ್ ಕೆಲಸವನ್ನು ಶುರು ಮಾಡಿದರು. ನಂತರ ಅವರ ಮಗ ಕೂಡ ಅದೇ ಕೆಲಸದಲ್ಲಿ ಮುಂದುವರೆದರು. ಈಗ ಪವನ್ ಕೂಡ ತಮ್ಮ ಅಜ್ಜ ಹಾಗೂ ಅಪ್ಪನ ಹಾದಿಯಲ್ಲಿಯೇ ಹ್ಯಾಂಗ್ ಮ್ಯಾನ್ ಆಗಿದ್ದಾರೆ.

ಇಂದಿರಾ ಗಾಂಧಿ ಟು ನಿರ್ಭಯಾ ಕೇಸ್
1987ರಲ್ಲಿ ಇಂದಿರಾ ಗಾಂಧಿ ಹಂತಕರನ್ನು ಪವನ್ ಜಲ್ಲದ್ ತಾತ ಗಲ್ಲಿಗೆ ಏರಿಸಿದ್ದರು. ಆಗ ಪವನ್ 22 ವರ್ಷದ ಹುಡುಗನಾಗಿದ್ದರು. ತಾತ ಹಾಗೂ ತಂದೆಯ ಕೆಲಸ ನೋಡಿಕೊಂಡು ಬೆಳೆದ ಪವನ್ ಅದೇ ಕೆಲಸ ಮಾಡುವ ಆಸೆಯನ್ನು ಬಾಲ್ಯದಿಂದ ಹೊಂದಿದ್ದರು. ಅವರೇ ಹೇಳುವಂತೆ ತಾತನೇ ಅವರಿಗೆ ಸ್ಫೂರ್ತಿಯಂತೆ. ಅಂದು ತಾತ ಇಂದಿರಾ ಗಾಂಧಿ ಹಂತಕನನ್ನು ನೇಣಿಗೆ ಹಾಕಿದರೆ, ಇಂದು ನಿರ್ಭಯಾ ಹಂತಕರನ್ನು ಪವನ್ ಗಲ್ಲಿಗೆ ಏರಿಸಿದ್ದಾರೆ.

ಒಬ್ಬರನ್ನು ಗಲ್ಲಿಗೆ ಹಾಕಿದರೆ 20 ಸಾವಿರ
ಮೂರು ವರ್ಷಗಳ ಹಿಂದೆ ತಮಗೆ ತಿಂಗಳಿಗೆ 5 ಸಾವಿರ ಸಂಬಳ ಸಿಗುತ್ತಿತ್ತು ಎಂದು ಪವನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಿರ್ಭಯಾ ಕೇಸ್ನ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವುದರಿಂದ ಒಬ್ಬರಿಗೆ ತಲಾ 25 ಸಾವಿರ ರು ನಂತೆ ಒಟ್ಟಾರೆ 1 ಲಕ್ಷ ರು ಸಿಗಲಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಈ ಮುಂಚೆ ತಿಳಿಸಿದ್ದರು. ಆದರೆ, ಬಳಿಕ ತಲಾ 20 ಸಾವಿರ ರು ನಂತೆ 80 ಸಾವಿರ ರು ಮಾತ್ರ ಸಿಗಲಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದರು.

ದಾಖಲೆ ಮಾಡಿದ ಪವನ್ ಜಲ್ಲದ್
ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೆ ಏರಿಸುವ ಮೂಲಕ ಪವನ್ ಜಲ್ಲದ್ ದಾಖಲೆ ಬರೆದಿದ್ದಾರೆ. ತಮ್ಮ ತಾತ ಒಂದೇ ವೇಳೆ ಇಬ್ಬರು ಅಪರಾಧಿಗಳನ್ನು ಗಲ್ಲಿಗೆ ಏರಿಸಿದ್ದರು. ಪವನ್ ಒಂದೇ ವೇಳೆ ನಾಲ್ಕು ಪಾಪಿಗಳನ್ನು ನೇಣಿಗೆ ಹಾಕಿದ್ದಾರೆ. ಅವರ ವೃತ್ತಿ ಬಗ್ಗೆ, ಎಷ್ಟೋ ಜನರು ನಿಮಗೆ ಕೆಲಸ ಮಾಡಲು ಭಯ ಆಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದರೆ, 'ಇಲ್ಲ' ಎಂದು ಪವನ್ ಹೇಳುತ್ತಾರಂತೆ.

ಮರಣದಂಡನೆಯ ದಿನ 4 ಗಂಟೆಗೆ ಏಳುತ್ತಾರೆ
ಮರಣದಂಡನೆ ನೀಡುವ ದಿನ ಹ್ಯಾಂಗ್ ಮ್ಯಾನ್ ಪವನ್ 4 ಗಂಟೆಗೆ ಏಳುತ್ತಾರೆ. ಮತ್ತೊಮ್ಮೆ ಹಗ್ಗ ಹಾಗೂ ಗಲ್ಲಿಗೆ ಏರಿಸಲು ಬೇಕಾಗುವ ವಸ್ತುಗಳ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಗಲ್ಲಿಗೆ ಏರಿಸಿದ 15 ನಿಮಿಷಗಳ ನಂತರ, ವೈದ್ಯರು ಸಾವನ್ನು ಖಚಿತಪಡಿಸುತ್ತಾರೆ. ಈ ಹಿಂದೆ 5 ಅಪರಾಧಿಗಳನ್ನು ನೇಣಿಗೆ ಹಾಕಿದ್ದ ಪವನ್, ನಿನ್ನೆ ನಾಲ್ಕು ಅಪರಾಧಿಗಳನ್ನು ಗಲ್ಲಿಗೆ ಏರಿಸಿದ್ದಾರೆ.

ಪವನ್ಗೆ ಕೊನೆ ಆಗುತ್ತದೆಯೇ ಪಾರಂಪರಿಕ ವೃತ್ತಿ?
ಹ್ಯಾಂಗ್ ಮ್ಯಾನ್ ಆಗಿ ಪವನ್ ಕುಟುಂಬ ಮೂರು ಜನರೇಷನ್ ಕೆಲಸ ಮಾಡಿದೆ. ಆದರೆ, ಪವನ್ ಪುತ್ರನಿಗೆ ಈ ಕೆಲಸ ಇಷ್ಟ ಇಲ್ಲವಂತೆ. ನಾನು ಓದಿ ಬೇರೊಂದು ಕೆಲಸ ಪಡೆಯುತ್ತೇನೆ ಎಂದು ಅವರ ಮಗ ಅಪ್ಪನಿಗೆ ತಿಳಿಸಿದ್ದಾರಂತೆ. ಹೀಗಾಗಿ ತಮ್ಮ ಕುಟುಂಬದ ಪಾರಂಪರಿಕ ವೃತ್ತಿ ತಮಗೆ ಮುಗಿದು ಹೋಗುತ್ತದೆಯೇ ಎನ್ನುವ ಆತಂಕವು ಪವನ್ ಇದೆಯಂತೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications