ಮಕ್ಕಳ ಪಾಸ್ ಪೋರ್ಟಿಗೆ ತಾಯಿ ಹೆಸರಿದ್ದರೆ ಸಾಕು!
ನವದೆಹಲಿ, ಮೇ 21 : ತಂದೆಯ ಹೆಸರು ಉಲ್ಲೇಖಿಸದೆ ಕೇವಲ ತಾಯಿಯ ಹೆಸರು ಇರುವ ಪಾಸ್ ಪೋರ್ಟ್ ಗೂ ಮಾನ್ಯತೆ ಇದೆ ಎಂದು ದೆಹಲಿ ಹೈಕೋರ್ಟ್ ಆದೇಶಿಸಿದೆ.ಮಗುವಿನ ಹೆಸರಿನಲ್ಲಿ ಪಾಸ್ ಪೋರ್ಟ್ ಪಡೆಯುವಾಗ ಕೂಡಾ ತಂದೆಯ ಹೆಸರು ಬೇಕು ಎಂದು ಅಧಿಕಾರಿಗಳು ಒತ್ತಡ ಹೇರುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ.
ತಂದೆಯ ಹೆಸರು ಉಲ್ಲೇಖಿಸದೆ ಕೇವಲ ತಾಯಿಯ ಹೆಸರು ತಿಳಿಸಲಾಗಿರುವ ಮಗುವೊಂದರ ಪಾಸ್ಪೋರ್ಟ್ ಅರ್ಜಿಯನ್ನು ಸ್ವೀಕರಿಸಬಹುದು ಎಂದು ಹೈಕೋರ್ಟ್ ಜಸ್ಟೀಸ್ ಮನ್ ಮೋಹನ್ ಅವರು ಪ್ರಾದೇಶಿಕ ಪಾಸ್ ಪೋರ್ಟ್ಕಚೇರಿಗೆ ನಿರ್ದೇಶನ ನೀಡಿದ್ದಾರೆ.[ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?]

'ಕಾನೂನಿನ ಪ್ರಕಾರ ತಂದೆಯ ಹೆಸರು ಉಲ್ಲೇಖಿಸಲೇ ಬೇಕಾದ ಸಂದರ್ಭಗಳನ್ನು ಹೊರತು ಪಡಿಸಿ ಇತರೆ ಪ್ರಕರಣಗಳಲ್ಲಿ ಅದನ್ನು ಕಡ್ಡಾಯಗೊಳಿಸುವಂತಿಲ್ಲ.ತಂದೆ ಇಲ್ಲದ ಸಂದರ್ಭಗಳಲ್ಲಿ ತಾಯಿಯೇ ಮಗುವಿನ ಸಹಜ ಪೋಷಕಿಯಾಗಿರುವುದರಿಂದ ಅರ್ಜಿಯಲ್ಲಿ ಆಕೆಯ ಹೆಸರಿದ್ದರಷ್ಟೇ ಸಾಕು ಎಂದು ಕೋರ್ಟ್ ತಿಳಿಸಿದೆ.[ಆನ್ ಲೈನ್ ನಲ್ಲೇ ಪಾಸ್ ಪೋರ್ಟ್ ವೇರಿಫಿಕೇಷನ್!]
ಈಗಿನ ದಿನಗಳಲ್ಲಿ ಒಂಟಿ ತಾಯಂದಿರ ಸಂಖ್ಯೆ ಅನೇಕ ಕಾರಣಗಳಿಂದ ಹೆಚ್ಚುತ್ತಿದೆ-ಅವಿವಾಹಿತ ತಾಯಂದಿರು, ಲೈಂಗಿಕ ಕಾರ್ಯಕರ್ತರು, ಬಾಡಿಗೆ ತಾಯಂದಿರು, ರೇಪ್ ಸಂತ್ರಸ್ತರು, ತಂದೆಯಿಂದ ತ್ಯಜಿಸಲ್ಪಟ್ಟ ಮಕ್ಕಳ ಕಾರಣಗಳಿಂದ ಒಂಟಿ ತಾಯಂದಿರ ಸಂಖ್ಯೆ ಹೆಚ್ಚುತ್ತಿದೆ ಎಂಬ ಅಂಶವನ್ನು ಕೋರ್ಟ್ ಪರಿಗಣಿಸಿದೆ.[ಪೊಲೀಸರ ಲಂಚಾವತಾರ ಬಿಚ್ಚಿಟ್ಟ ಎನ್ ಜಿಒ]
ವಿವಾಹ ವಿಚ್ಛೇದನ ಪಡೆದುಕೊಂಡಿದ್ದ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿ, ತಾನು ಹೆತ್ತ ಮಗುವಿಗೆ ತಂದೆ ಹೆಸರಿಲ್ಲದೆ ಪಾಸ್ ಪೋರ್ಟ್ ನೀಡುವಂತೆ ಅರ್ಜಿ ಹಾಕಿದ್ದರು. ಈ ಪ್ರಕರಣದಲ್ಲಿ ಮಗುವಿಗೆ 2005 ಹಾಗೂ 2011ರಲ್ಲಿ ತಂದೆಯ ಹೆಸರಿಲ್ಲದ ಅರ್ಜಿಯ ಮುಖಾಂತರವೇ ಪಾಸ್ಪೋರ್ಟ್ ನೀಡಲಾಗಿದ್ದರಿಂದ ತಂದೆಯ ಹೆಸರು ಕಾನೂನಾತ್ಮಕವಾಗಿ ಅಗತ್ಯವಿಲ್ಲ ಬದಲಾಗಿ ಪ್ರಕ್ರಿಯೆ ಪೂರೈಸುವ ಭಾಗವಷ್ಟೇ ಆಗಿದೆ ಹೀಗಾಗಿ ತಿರಸ್ಕರಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.(ಪಿಟಿಐ)
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications