Get Updates
Get notified of breaking news, exclusive insights, and must-see stories!

ಮುಂಗಾರು ಅಧಿವೇಶನ LIVE: ನೂತನ ಸ್ಪೀಕರ್ ನಮ್ಮ ಹೆಮ್ಮೆ ಎಂದ ಮೋದಿ

ನವದೆಹಲಿ, ಜೂನ್ 19: ಮುಂಗಾರು ಅಧಿವೇಶನದ ಮೂರನೇ ದಿನವಾದ ಬುಧವಾರ, ಹದಿನೇಳನೇ ಲೋಕಸಭೆಯ ಸ್ಪೀಕರ್ ಆಗಿ ಬಿಜೆಪಿ ಓಂ ಬಿರ್ಲಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

2019 ರ ಲೋಕಸಭೆ ಚುನಾವಣೆಯ ನಂತರ ಭರ್ಜರಿ ಜನಾದೇಶದೊಂದಿಗೆ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಮುಂಗಾರು ಅಧಿವೇಶನ ಇದಾಗಿರುವುದರಿಂದ ಸಾಕಷ್ಟು ಮಹತ್ವ ಪಡೆದಿದೆ.

ಮೂರನೇ ದಿನವಾದ ಇಂದು ಸ್ಪೀಕರ್ ಆಯ್ಕೆಯ ಜೊತೆಗೆ ಇನ್ನಿತರ ಹಲವು ವಿಷಯಗಳು ಚರ್ಚೆಯಾಗುವ ಸಾಧ್ಯತೆ ಇದೆ.

Monsoon Session: 17th Lok Sabha Session Live updates on June 19

ಈ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಬಜೆಟ್, ತ್ರಿವಳಿ ತಲಾಕ್ ಸೇರಿದಂತೆ ಅನೇಕ ವಿಧೇಯಕಗಳ ಕುರಿತು ಚರ್ಚೆಯಾಗಲಿದೆ. ಸಂಸತ್ ಕಲಾಪದ ಮೊದಲೆರಡು ದಿನಗಳಲ್ಲಿ 542 ನೂತನ ಸದಸ್ಯರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಅವರಲ್ಲಿ ಹಲವರು ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿದ್ದು, ಗೈರಾದ ಕೆಲವರ ಪ್ರಮಾಣ ವಚನ ಬಾಕಿ ಇದೆ.

Jun 19, 2019, 12:41 pm IST

"ಸ್ಪೀಕರ್ ಎಂದರೆ ನೀರಿನಲ್ಲಿರುವ ತಾವರೆಯ ಹಾಗೆ. ನೀವು ಬಿಜೆಪಿಯವರಿರವಬಹುದು. ಆದರೆ ನೀರಿಗೆ ಅಂತಿಕೊಳ್ಳದ ತಾವರೆಯ ಹಾಗಿರಬೇಕು" - ಟಿ.ಆರ್. ಬಾಲು, ಡಿಎಂಕೆ ಮುಖಂಡ
Jun 19, 2019, 12:30 pm IST

"ಕೆಳಮನೆಯ ಉಸ್ತುವಾರಿ ಹೊತ್ತಿರುವ ನೀವು ಅದರ ಘನತೆಯನ್ನು ಎತ್ತಿಹಿಡಿಯುವ ಜವಾಬ್ದಾರಿ ಹೊಂದಿದ್ದೀರಿ. ಕಾಂಗ್ರೆಸ್ ಎಂದಿಗೂ ಇದರಲ್ಲಿ ಋಣಾತ್ಮಕ ಪಾತ್ರ ವಹಿಸುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ"- ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್ ಪಕ್ಷದ ಲೋಕಸಭೆ ನಾಯಕ
Jun 19, 2019, 12:27 pm IST

"ಲೋಕಸಭೆಯಲ್ಲಿ ಎಂಥ ಸನ್ನಿವೇಶ ಎದುರಾದರೂ ಹೇಗೆ ನಗುನಗುತ್ತ ಅದನ್ನು ಸ್ವೀಕರಿಸಬೇಕು ಮತ್ತು ಹೇಗೆ ತಾಳ್ಮೆ ಕಳೆದುಕೊಳ್ಳದೆ ಇರಬೇಕು ಎಂಬುದನ್ನು ಈ ಹಿಂದಿನ ಸ್ಪೀಕರ್(ಸುಮಿತ್ರಾ ಮಹಾಜನ್) ತೋರಿಸಿಕೊಟ್ತಿದ್ದಾರೆ"- ನರೇಂದ್ರ ಮೋದಿ, ಪ್ರಧಾನಿ
Jun 19, 2019, 11:52 am IST

"ಓಂ ಬಿರ್ಲಾ (ಸ್ಪೀಕರ್)ಅವರೊಂದಿಗೆ ನಾನು ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದು ನನಗೆ ವೈಯಕ್ತಿಕವಾಗಿ ನೆನಪಿದೆ. ಅವರು ಸಾರ್ವಜನಿಕ ಬದುಕಿನಲ್ಲಿ ಹಲವು ವರ್ಷಗಳಿಂದ ಇದ್ದವರು. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಅವರು ನಾಯಕರಾಗಿ ಬೆಳೆದು, ಸಮಾಜ ಸೇವೆಯಲ್ಲಿ ತೊಡಗಿದರು. ಇಂದಿಗೂ ಅವರು ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ"- ನರೇಂದ್ರ ಮೋದಿ, ಪ್ರಧಾನಿ
Jun 19, 2019, 11:48 am IST

ಲೋಕಸಭೆಯ ಹದಿನೇಳನೇ ಸ್ಪೀಕರ್ ಆಗಿ ರಾಜಸ್ಥಾನದ ಕೋಟಾ ಬಂಡಿ ಲೋಕಸಭಾ ಕ್ಷೇತ್ರದ ಸಂಸದ ಓಂ ಬಿರ್ಲಾ ಅವರು ಆಯ್ಕೆಯಾಗಿದ್ದಾರೆ .
Jun 19, 2019, 11:48 am IST

ನೂತನ್ ಸ್ಪೀಕರ್ ಅನ್ನು ಆಯ್ಕೆಯ ನಂತರ ಪ್ರಧಾನಿ ನರೇಂದ್ರ ಮೊದಿ ಅವರು ಬಿರ್ಲಾ ಅವರನ್ನು ಅಭಿನಂದಿಸಿ, 'ಅವರು ನಮ್ಮ ಹೆಮ್ಮೆ' ಎಂದರು.
Jun 19, 2019, 11:47 am IST

ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಓಂ ಬಿರ್ಲಾ ಅವಿರೋಧವಾಗಿ ಆಯ್ಕೆಯಾದರು.
Jun 19, 2019, 11:47 am IST

ಓಂ ಬಿರ್ಲಾ ಅವರಿಗೆ ಕಾಂಗ್ರೆಸ್ ಸಹ ತನ್ನ ಬೆಂಬಲ ಸೂಚಿಸಿತ್ತು. ಅಕಸ್ಮಾತ್ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿದ್ದರೂ, ಸಂಸದರ ಕೊರತೆ ಇದ್ದಿದ್ದರಿಂದ ಸ್ಪೀಕರ್ ಆಯ್ಕೆ ಕಾಂಗ್ರೆಸ್ ಗೆ ಸಾಧ್ಯವಿರಲಿಲ್ಲ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+