ಇವಿಎಂ ಮೇಲೆ ಕಿಡಿಕಾರಿದ ಕೇಜ್ರಿಗೆ ದಕ್ಕದ ದ್ರಾಕ್ಷಿ ಹುಳಿ
ಇವಿಎಂ ವಿರುದ್ಧ ಕಿಡಿಕಾರುತ್ತಿದ್ದ ಕೇಜ್ರಿವಾಲ್, ಅನಿಷ್ಟಕ್ಕೆಲ್ಲ ಶನೈಶ್ಚರನೇ ಕಾರಣ ಎಂಬಂತೆ ಮತ್ತೊಮ್ಮೆ ವೋಟಿಂಗ್ ತಂತ್ರದ ಬಳಕೆ ತಪ್ಪು ಎಂದಿದ್ದಾರೆ. ಕೇಜ್ರಿ ಬಗ್ಗೆ ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ಹಾಸ್ಯದ ಟ್ವೀಟ್ಸ್ ಹರಿದಾಡಿದೆ.
ನವದೆಹಲಿ, ಏಪ್ರಿಲ್ 26: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಜಯಭೇರಿ ಬಾರಿಸಿದ್ದು ಸತತ ಮೂರನೇ ಬಾರಿಗೆ ಅಧಿಕಾರ ಸ್ಥಾಪಿಸಿದ್ದು ಆಮ್ ಆದ್ಮಿ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇವಿಎಂ ವಿರುದ್ಧ ಕಿಡಿಕಾರುತ್ತಿದ್ದ ಕೇಜ್ರಿವಾಲ್ ಈಗ ತಣ್ಣಗಾಗಿದ್ದರೂ ಅನಿಷ್ಟಕ್ಕೆಲ್ಲ ಶನೈಶ್ಚರನೇ ಕಾರಣ ಎಂಬಂತೆ ಮತ್ತೊಮ್ಮೆ ವೋಟಿಂಗ್ ತಂತ್ರದ ಬಳಕೆ ತಪ್ಪು ಎಂದಿದ್ದಾರೆ. ಕೇಜ್ರಿ ಬಗ್ಗೆ ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ಹಾಸ್ಯದ ಟ್ವೀಟ್ಸ್ ಹರಿದಾಡಿವೆ.[ದೆಹಲಿ ಫಲಿತಾಂಶ : ನಾಯಕರ ಸೋಲು ಗೆಲುವಿನ ವಿಶ್ಲೇಷಣೆ]
ದೆಹಲಿಯ ವಿಭಜಿತ ಕಾರ್ಪೊರೇಷನ್ ಮಾದರಿ. ಉತ್ತರ, ದಕ್ಷಿಣ ಹಾಗೂ ಪೂರ್ವ ವಲಯಗಳಲ್ಲಿ ಅದು ಪ್ರತ್ಯೇಕ ಕಾರ್ಪೋರೇಷನ್ ಮಂಡಲಗಳನ್ನು ಹೊಂದಿದೆ.
ಈ ಮೂರೂ ಮಹಾ ನಗರ ಪಾಲಿಕೆಗಳಿಗೆ ಏಪ್ರಿಲ್ 23ರಂದು ಶೇ 56ರಷ್ಟು ಮತದಾನವಾಗಿತ್ತು. ದಕ್ಷಿಣ ವಲಯದ ಪಾಲಿಕೆಯಲ್ಲಿ 104 ಸ್ಥಾನ, ಪೂರ್ವ ವಲಯದ ಪಾಲಿಕೆಯಲ್ಲಿ 64 ಸ್ಥಾನ ಹಾಗೂ ಉತ್ತರ ವಲಯದ ಪಾಲಿಕೆಯಲ್ಲಿ 104 ಸ್ಥಾನಗಳು ಸೇರಿ ಒಟ್ಟಾರೆ 182 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.
ಕೇಜ್ರಿವಾಲ್ ಗೆ ಹಿನ್ನಡೆ
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಇವಿಎಂ, ಎಕ್ಸಿಟ್ ಪೋಲ್ ಬಗ್ಗೆ ಅಪಸ್ವರ ಎತ್ತಿದ್ದರು. ಈಗ ಅರವಿಂದ್ ಹೇಳಿದ ಡೈಲಾಗ್ ಅವರಿಗೆ ತಿರುಗುಬಾಣವಾಗಿದೆ.
|
ಎಕ್ಸಿಟ್ ಪೋಲ್ ನಂಬದ ಕೇಜ್ರಿ
ಎಕ್ಸಿಟ್ ಪೋಲ್ ನಂಬದ ಅರವಿಂದ್ ಕೇಜ್ರಿವಾಲ್ ಅವರು ಈಗ ಏನು ಹೇಳುತ್ತಾರೆ. ಬರ್ನರ್ ಹಚ್ಚಿಕೊಳ್ಳಬೇಕಾದ ಸಂದರ್ಭವಿದು.
|
ಎಂಸಿಡಿ ಚುನಾವಣೆ ಸೋಲು
ಎಂಸಿಡಿ ಚುನಾವಣೆ ಸೋಲಿನ ಬಗ್ಗೆ ಹಾಸ್ಯದ ಟ್ವೀಟ್.
|
ಬಾಹುಬಲಿಗೂ ಹೋಲಿಕೆ
ಬಾಹುಬಲಿ ಚಿತ್ರದ ದೃಶ್ಯಕ್ಕೆ ಹೋಲಿಕೆ ಮಾಡಿ, ಟ್ವೀಟ್
|
ದಕ್ಕದ ದ್ರಾಕ್ಷಿ ಹುಳಿ
ದಕ್ಕದ ದ್ರಾಕ್ಷಿ ಎಂದಿಗೂ ಹುಳಿ ಎಂಬುದು ಅರವಿಂದ್ ಕೇಜ್ರಿವಾಲ್ ನೋಡಿ ಹೇಳಿರಬೇಕು