ಓಲಾ, ಉಬರ್ ಆಯ್ತು! ಈಗ 'ಐನ್ ಸ್ಟೈನ್' ನ 'ಗ್ರಾವಿಟಿ'ಯಂತೆ! ಏನಾಗಿದೆ ಸಚಿವರಿಗೆ?
ನವದೆಹಲಿ, ಸೆಪ್ಟೆಂಬರ್ 12: "ಐನ್ ಸ್ಟೈನ್ ನ ಗುರುತ್ವಾಕರ್ಷಣ ಸಿದ್ಧಾಂತ ಆವಿಷ್ಕಾರಕ್ಕೆ ಗಣಿತ ನೆರವಾಗಲಿಲ್ಲ" ಎನ್ನುವ ಮೂಲಕ ಅಸಂಬದ್ಧ ಹೇಳಿಕೆ ನೀಡುತ್ತಿರುವ ಕೇಂದ್ರ ಸಚಿವರ ಪಟ್ಟಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ!
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 'ಉಬರ್, ಓಲಾ' ಹೇಳಿಕೆಯೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಹೈಕ್ಳಿಗೆ ಮೃಷ್ಟಾನ್ನ ಬಡಿಸುತ್ತರುವಾಗ, ಇದೇ ಟ್ರೋಲ್ ಹೈಕ್ಳ ಎದುರು ಪಿಯೂಶ್ ಗೋಯೆಲ್ ಸಹ ಎಡವಿ ಬಿದ್ದಿದ್ದಾರೆ.
ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಪಿಯೂಶ್ ಗೋಯೆಲ್ ಜಿಡಿಪಿ ಬಗೆಗಿನ ತಜ್ಞರ ಲೆಕ್ಕಾಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, "ಟಿವಿಯಲ್ಲಿ ಬರುವ ಅಂಕಿ ಸಂಖ್ಯೆಗಳನ್ನು ನೋಡಿ ನಿರ್ಧಾರಕ್ಕೆ ಬರಬೇಡಿ. ಆ ಗಣಿತದಿಂದ ಏನೂ ಉಪಯೋಗವಿಲ್ಲ. ಗ್ರಾವಿಟಿ(ಗುರುತ್ವಾಕರ್ಷಣ) ಸಿದ್ಧಾಂತದ ಆವಿಷ್ಕಾರಕ್ಕೆ 'ಐನ್ ಸ್ಟೈನ್' ಗೆ ಗಣಿತ ಎಂದಿಗೂ ನೆರವಾಗಲಿಲ್ಲ" ಎಂದರು!
ಆದರೆ ಐನ್ ಸ್ಟೈನ್ ಆವಿಷ್ಕರಿಸಿದ್ದು ಸಾಪೇಕ್ಷ(Theory of Relativity) ಸಿದ್ಧಾಂತವನ್ನ. ಗುರುತ್ವಾಕರ್ಷಣ ಸಿದ್ಧಾಂತ(Theory of Gravity) ಯನ್ನು ಆವಿಷ್ಕರಿಸಿದ್ದು ಐಸಾಕ್ ನ್ಯೂಟನ್! ನ್ಯೂಟನ್ನನ ಹೆಸರನ್ನು ಹೇಳುವ ಬದಲು ಐನ್ ಸ್ಟೈನ್ ಎನ್ನುವ ಮೂಲಕ ಗೋಯೆಲ್ ಪೇಚಿಗೆ ಸಿಲುಕಿದರು. ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಮಾಡಿದೆ.

ನಿಮ್ಮ ಮಾತು ಸತ್ಯ!
ಹೌದು, ನಿಮ್ಮ ಮಾತು ಸತ್ಯ. ಐನ್ಸ್ಟೈನ್ ಗೆ ಗುರುತ್ವಾಕರ್ಷಣ ಸಿದ್ಧಾಂತ ಆವಿಷ್ಕರಿಸಲು ಗಣಿತ ನೆರವಾಗಲಿಲ್ಲ. ಯಾಕಂದ್ರೆ ಅದನ್ನು ಆವಿಷ್ಕರಿಸಿದ್ದು ನ್ಯೂಟನ್" ಎಂದು ಶಿವನ್ ಜಾ ಕಿಚಾಯಿಸಿದ್ದಾರೆ!

ಗೋಯಲ್ ಪ್ರಕಾರ...
"ಪಿಯೂಶ್ ಗೋಯೆಲ್ ಪ್ರಕಾರ ಐನ್ ಸ್ಟೈನ್ = ನ್ಯೂಟನ್" ಎಂದು ಆಚಿ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.

ಎಲ್ಲ ಬುದ್ಧಿವಂತರೂ ರಾಜಕೀಯದಲ್ಲಿದ್ದಾರೆ!
ಇದು ಗಣಿತ ಮತ್ತು ಭೌತ ಶಾಸ್ತ್ರ ಎರಡಕ್ಕೂ ಅತ್ಯಂತ ದುಃಖದ ದಿನ. ಗ್ರಾವಿಟಿಯ ಬಗ್ಗೆ ನಮ್ಮ ವಿಚಾರವನ್ನೇ ಬದಲಿಸುವಂಥ ಹೇಳಕೆಯನ್ನು ಮಂತ್ರಿಗಳು ನೀದಿದ್ದಾರೆ. ಈ ರಾಜಕಾರಣಿಗಳ ಎದುರು ಐನ್ ಸ್ಟೈನ್ ಮತ್ತು ನ್ಯೂಟನ್ನನ ಎಲ್ಲಾ ಸಾಧನೆಗಳೂ ಅರ್ಥ ಕಳೆದುಕೊಳ್ಳುವಂಥಾಗುತ್ತದೆ. ಬುದ್ಧಿವಂತರೆಲ್ಲರೂ ರಾಜಕೀಯದಲ್ಲೇ ಇದ್ದಾರೆ ಎಂದು ಕ್ರೇಜಿ ಮ್ಯೂಸಿಶಿಯನ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ನ್ಯೂಟನ್ನ ಆವಿಷ್ಕರಿಸಿದ್ದು ಏನನ್ನ?
"ಐನ್ ಸ್ಟೈನ್ ಗುರುತ್ವಾಕರ್ಷಣ ಸಿದ್ಧಾಂತವನ್ನು ಆವಿಷ್ಕರಿಸಿದ್ದು ಸತ್ಯವಾದರೆ ನ್ಯೂಟನ್ ಆವಿಷ್ಕರಿಸಿದ್ದು ಏನನ್ನ? ಇಡೀ ದೇಶವೂ ಅದೇ ಪ್ರಶ್ನೆ ಕೇಳುತ್ತಿದೆ. ಆದರೆ ನನ್ನ ಬಳಿ ಉತ್ತರವಿದೆ. ನ್ಯೂಟನ್ನ ಕಂಡುಹಿಡಿದಿದ್ದು ಆಪಲ್ ಅನ್ನು!" ಎಂದಿದ್ದಾರೆ ನಿಖಿಲ್ ಎಸ್. ಬಿ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್












Click it and Unblock the Notifications