ನೆಹರೂ-ಗಾಂಧಿ ಸಲಿಂಗ ಕಾಮ ಬಗ್ಗೆ ಪ್ರೊ. ಮಧುಕೀಶ್ವರ್ ಟ್ವೀಟ್ಸ್
ನವದೆಹಲಿ, ಜೂನ್ 03: ಮೋದಿ ಬೆಂಬಲಿಸುವ, ಬಲಪಂಥೀಯ ಚಿಂತನೆಯ ಪ್ರತಿಪಾದಕಿ, ಪ್ರೊ ಮಧುಪೂರ್ಣಿಮಾ ಕೀಶ್ವರ್ ಅವರ ಇತ್ತೀಚಿನ ಟ್ವೀಟ್ ವಿವಾದಕ್ಕೆ ನಾಂದಿ ಹಾಡುವಂತಿದೆ. ನೆಹರೂ-ಗಾಂಧಿ ಸಲಿಂಗ ಕಾಮ ಬಗ್ಗೆ ಪ್ರೊ. ಮಧುಕೀಶ್ವರ್ ಟ್ವೀಟ್ ಮಾಡಿದ್ದಾರೆ.
'ರಾಷ್ಟ್ರಪಿತ' ಮಹಾತ್ಮ ಗಾಂಧಿ ಹಾಗು ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಸಲಿಂಗಕಾಮಿಗಳಾಗಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
"ಅವರಿಬ್ಬರೊಳಗೆ ಸಲಿಂಗ ಸಂಬಂಧ ಇದ್ದಿದ್ದರಿಂದ ಗಾಂಧಿ ಮೇಲೆ ನೆಹರೂಗೆ ಅಷ್ಟೊಂದು ಅಸಾಮಾನ್ಯ ಹಿಡಿತ ಇದ್ದಿದ್ದು ಕಾರಣ ಎಂದು ವಿವರಿಸಬಹುದು. ನೆಹರೂ ಮತ್ತು ಗಾಂಧಿ ಒಮ್ಮೆ ತಮ್ಮ ಕುಟುಂಬದ ಮನೆಯೊಂದರಲ್ಲಿ ಒಂದೇ ಮಂಚದಲ್ಲಿ ಮಲಗಿದ್ದರು ಎಂದು ನನ್ನ ದಕ್ಷಿಣ ಭಾರತೀಯ ಮಿತ್ರರೊಬ್ಬರು ಹೇಳಿದ್ದರು.
ಸಲಿಂಗಕಾಮಿಗಳಾಗಿರುವುದು ತಪ್ಪಲ್ಲ. ಆದರೆ (ಸರ್ದಾರ್ ವಲ್ಲಭಭಾಯ್ ) ಪಟೇಲ್ ಬದಲಿಗೆ (ಪ್ರಧಾನಿಯಾಗಲು) ನೆಹರೂಗೆ ಮಣೆ ಹಾಕಿದ್ದು ಮಾತ್ರ ಒಪ್ಪುವಂತಹದ್ದಲ್ಲ." ಎಂದು ರೂಪಾ ಸುಬ್ರಮಣ್ಯ ಅವರ ಟ್ವೀಟ್ ಗೆ ಪ್ರೊ. ಮಧು ಅವರು ಪ್ರತಿಕ್ರಿಯಿಸಿದ್ದಾರೆ.
|
ಪ್ರೊ. ಮಧುಕೀಶ್ವರ್ ವಿವಾದಿತ ಟ್ವೀಟ್ಸ್
ನೆಹರೂ-ಗಾಂಧಿ ಸಲಿಂಗ ಕಾಮ ಬಗ್ಗೆ ಪ್ರೊ. ಮಧುಕೀಶ್ವರ್ ಟ್ವೀಟ್ ನಲ್ಲಿ ಏನಿದೆ? ಗಾಂಧಿ ಮೇಲೆ ನೆಹರೂಗೆ ಅಷ್ಟೊಂದು ಅಸಾಮಾನ್ಯ ಹಿಡಿತ ಹೊಂದಿರಲು ಸಲಿಂಗಕಾಮವೆ ಕಾರಣ. ನೆಹರೂ ಮತ್ತು ಗಾಂಧಿ ಒಮ್ಮೆ ತಮ್ಮ ಕುಟುಂಬದ ಮನೆಯೊಂದರಲ್ಲಿ ಒಂದೇ ಮಂಚದಲ್ಲಿ ಮಲಗಿದ್ದರು ಎಂದು ನನ್ನ ದಕ್ಷಿಣ ಭಾರತೀಯ ಮಿತ್ರರೊಬ್ಬರು ಹೇಳಿದ್ದರು. ಸಲಿಂಗಕಾಮಿಗಳಾಗಿರುವುದು ತಪ್ಪಲ್ಲ ಎಂದು ಟ್ವೀಟ್ ಮಾಡಿದ್ದಾರೆ.
|
ಗಾಂಧಿ ಸಲಿಂಗ ಕಾಮಿ ಎಂದ ಪುಸ್ತಕ ಬ್ಯಾನ್ ಆಗಿತ್ತು
ಗಾಂಧಿ ಸಲಿಂಗ ಕಾಮಿ ಎಂದ ಪುಸ್ತಕವನ್ನು 2011ರಲ್ಲಿ ಗುಜರಾತ್ ಸರ್ಕಾರವು ನಿಷೇಧಿಸಿತ್ತು. ಭಾರತದ ಸಮಾಜದಲ್ಲಿ, ಸಂಪ್ರದಾಯಸ್ಥರಲ್ಲಿ ಈ ಬಗ್ಗೆ ಚರ್ಚೆ ಕೂಡಾ ನಿಷಿದ್ಧ, ಆದರೆ, ಈಗ ಪರಿಸ್ಥಿತಿ ಬದಲಾಗಿದೆ.
|
ನಿಷೇಧದ ಕುರಿತು ಪ್ರೊ ಮಧು ಉತ್ತರ
ಇತಿಹಾಸದ ಪುಟಗಳಲ್ಲಿ ಹೀರೋಗಳೆನಿಸಿದವರ ಬಗ್ಗೆ ಓದುವುದನ್ನು ನಿಷೇಧಿಸಬೇಕು ಎನ್ನುವಂತಿದೆ ನಿಮ್ಮ ಲಾಜಿಕ್, ಸಾರ್ವಕರ್ ಬಗ್ಗೆ ಚರಿತ್ರೆ ಏನು ಹೇಳುತ್ತದೆ, ಸಮಾಜ ಹೇಗೆ ನಡೆಸಿಕೊಂಡಿದೆ ಎಂಬುದು ಜ್ವಲಂತ ಉದಾಹರಣೆ ಎಂದಿದ್ದಾರೆ.
|
ಮನುಸ್ಕೃತಿ ಬಗ್ಗೆ ಪ್ರೊ ಮಧು ಟ್ವೀಟ್
ಮನುಸ್ಕೃತಿ ಬಗ್ಗೆ ಪ್ರೊ ಮಧು ಟ್ವೀಟ್ ಮಾಡಿ, ಮನುಸ್ಮೃತಿಯಲ್ಲಿ ಪ್ರಸ್ತುತ ಜೀವನಕ್ಕೆ ಅಗತ್ಯವಾದ ಎಷ್ಟೋ ವಿಷಯಗಳಿವೆ ಆದರೆ, ಕೆಲವರಿಗೆ ಪೂರ್ವಗ್ರಹವಿರುವುದರಿಂದ ಬರೀ ಹುಳುಕುಗಳು ಮಾತ್ರ ಕಾಣಿಸುತ್ತದೆ

ಚುನಾವಣೆ ಸಂದರ್ಭದಲ್ಲಿ ಸಕ್ರಿಯರಾಗಿರುವ ಮಧು
2014ರ ಚುನಾವಣೆ ಸಂದರ್ಭದಲ್ಲಿ ಮೋದಿ, ಬಿಜೆಪಿ ಪರವಾಗಿ ಟ್ವೀಟ್ ಮಾಡುವ ಮೂಲಕ ಸಾಮಾಜಿಕ ಜಾಲ ತಾಣಗಳಲ್ಲಿ ಗುರುತಿಸಿಕೊಂಡ ಮಧು ಅವರು ಇತ್ತೀಚೆಗೆ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದರು, ಫ್ರೀ ಸೆಕ್ಸ್ ಬಗ್ಗೆ ರಾಹುಲ್ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದರು.
ಮಧು ಅವರು ಟ್ವೀಟ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ಸಮರ್ಥಿಸಿಕೊಂಡು ಪ್ರೊ. ಮಧು ಮತ್ತೆ ಟ್ವೀಟ್ ಮಾಡಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications