Live in ಪಾಪ್ವೂ ಅಲ್ಲ ಅಪರಾಧವೂ ಅಲ್ಲ: ಹಾಗಾಗಿ...

ಇತ್ತೀಚೆಗೆ ಲಿವಿಂಗ್ ಟುಗೆದರ್ (ಸಾಂಪ್ರದಾಯಿಕವಾಗಿ ವಿವಾಹವಾಗದೆ ಜೊತೆಯಲ್ಲಿ ಬದುಕುವುದು) ಸಂಬಂಧ ಹೆಚ್ಚಾಗುತ್ತಿದೆ. ಆದರೆ ಲಿವಿಂಗ್ ಟುಗೆದರ್ ಸಂಬಂಧವು ಪ್ರಸ್ತುತ ವಿವಾಹದ ರೂಪದಲ್ಲಿಲ್ಲ. ಜತೆಗೆ ಇದಕ್ಕೆ ಕಾನೂನಿನ ಮಾನ್ಯತೆಯೂ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದೆ. ಹಾಗಾಗಿ ಅದನ್ನು ಕಾನೂನುಬದ್ಧಗೊಳಿಸುವ ಶಾಸನ ರೂಪಿಸಿ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಯ ಹೇಳಿದೆ.
ಭಾರತದಲ್ಲಿನ್ನೂ ವರ್ಜ್ಯ: ಇಂತಹ ಸಂಬಂಧಗಳಿಗೆ ಭಾರತದ ಕಾನೂನು ವ್ಯವಸ್ಥೆಯಲ್ಲಿ ಮಾನ್ಯತೆ ಇಲ್ಲ. ಜತೆಗೆ ಸಾಮಾಜಿಕ ವ್ಯವಸ್ಥೆಯಲ್ಲೂ ಮಾನ್ಯತೆಯಿಲ್ಲ. ಈ ರೀತಿ ಸಂಬಂಧ ಹೊಂದಿರುವವರನ್ನು ಸಮಾಜ ಇನ್ನೂ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಿಲ್ಲ. ಆದರೆ ಭಾರತದ ನಗರ ಪ್ರದೇಶಗಳಲ್ಲಿ ನಿಧಾನಕ್ಕೆ ಈ ತರಹದ ಸಂಬಂಧಗಳು ಜನಪ್ರಿಯಗೊಳ್ಳುತ್ತಿವೆ.
ಮಹಿಳೆ-ಮಕ್ಕಳೇ ಸಂತ್ರಸ್ತರು: ಲಿವಿಂಗ್ ಟುಗೆದರ್ ಸಂಬಂಧಗಳು ಮುರಿದುಬಿದ್ದಾಗ ಮಹಿಳೆಗೇ ಅನ್ಯಾಯವಾಗುತ್ತದೆ. ಈ ಸಂಬಂಧದ ಮೂಲಕ ಹುಟ್ಟುವ ಮಕ್ಕಳು ಮತ್ತು ತಾಯಿಯನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಈ ಕಾನೂನು ಅನಿವಾರ್ಯವಾಗಿದೆ.ಲಿವಿಂಗ್ ಟುಗೆದರ್ ಸಂಬಂಧಕ್ಕೆ ಪೂರಕವಾಗಿ ವಿದೇಶಗಳಲ್ಲಿ ಕಾನೂನುಗಳನ್ನು ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಕಾನೂನನ್ನು ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ಆಶಿಸಿದೆ.
ಲಿವಿಂಗ್ ಟುಗೆದರ್ ಮದುವೆಗೆ ಸಮಾನ: ನ್ಯಾಯಮೂರ್ತಿ ಕೆಎಸ್ ರಾಧಾಕೃಷ್ಣನ್ ಮತ್ತು ನ್ಯಾ ಪಿಸಿ ಗೋಸೆ ಅವರ ಸುಪ್ರೀಂ ನ್ಯಾಯಪೀಠ, ಇದಕ್ಕೆ ಸಂಬಂಧಪಟ್ಟ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದೆ. ಲಿವಿಂಗ್ ಟುಗೆದರ್ ಅನ್ನು 'ಮದುವೆಗೆ ಸಮಾನ' ಎಂದು ಪರಿಗಣಿಸಬೇಕು, ಈ ಮೂಲಕ ಈ ಸಂಬಂಧವನ್ನು ಕೌಂಟುಂಬಿಕ ಹಿಂಸೆ ಕಾಯ್ದೆಯಡಿ ತರಬೇಕು ಎಂದಿದೆ. ಇಂತಹ ಸಂಬಂಧಗಳು ಮದುವೆಗೆ ಸಮಾನವಾದ ಸ್ಥಾನ ಪಡೆದುಕೊಂಡಿಲ್ಲದ ಕಾರಣ, ಕೇಂದ್ರ ಸರಕಾರವು ಮುತುವರ್ಜಿವಹಿಸಿ ಕಾನೂನು ರಚಿಸಬೇಕು ಎಂದಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications