ಉದ್ಯೋಗ ಭದ್ರತೆಗಾಗಿ ಹೋರಾಟಕ್ಕೆ ಒಗ್ಗೂಡಿದ ಟೆಕ್ಕಿಗಳು
ನವದೆಹಲಿ, ಫೆ. 2: ಇದುವರೆಗೆ ದಿನಗೂಲಿ ಕೆಲಸಗಾರರು ಹಾಗೂ ತಾತ್ಕಾಲಿಕ ಕೆಲಸಗಾರರು ಸಾಮೂಹಿಕ ವಜಾ ವಿರುದ್ಧ ಪ್ರತಿಭಟನೆ ಮಾಡಿದ್ದನ್ನು ನೋಡಿದ್ದೇವೆ. ಈ ಸಾಲಿಗೆ ಈಗ ದೇಶದ ಅತ್ಯಂತ ಪ್ರತಿಷ್ಠಿತ ಉದ್ಯೋಗಿಗಳು ಎನ್ನಿಸಿಕೊಂಡಿದ್ದ ಟೆಕ್ಕಿಗಳೂ ಸೇರಿಕೊಂಡಿದ್ದಾರೆ.
ಟಿಸಿಎಸ್ ನಂತರ ಐಬಿಎಂ ಕಂಪನಿ ತನ್ನ ನೌಕರರ ಸಾಮೂಹಿಕ ವಜಾಕ್ಕೆ ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಹಲವು ಕಂಪನಿಗಳ ಉದ್ಯೋಗಿಗಳು ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಸೇರಿ ಸಭೆ ನಡೆಸಿದ್ದಾರೆ. ಅಲ್ಲದೆ, ಜಂತರ್ ಮಂತರ್ನಲ್ಲಿ ಒಗ್ಗೂಡಿ "ಐಟಿ ಉದ್ಯಮದಲ್ಲಿ ಉದ್ಯೋಗ ಭದ್ರತೆ ಕೊಡಿ" ಎಂದು ಘೋಷಣೆಯನ್ನೂ ಕೂಗಿದ್ದಾರೆ. [ಐಬಿಎಂ ಉದ್ಯೋಗಿಗಳಿಗೆ ಕಹಿ ಸುದ್ದಿ]
ಟಿಸಿಎಸ್, ವಿಪ್ರೊ, ಐಬಿಎಂ, ಎಚ್ಸಿಎಲ್, ಟೆಕ್ ಮಹೀಂದ್ರಾ, ಟೆಲಾಯಿಟ್, ಸ್ಯಾಮ್ಸಂಗ್, ಅಕ್ಸೆಂಚರ್ ಸೇರಿದಂತೆ ಇತರ ಕಂಪನಿಗಳ ಉದ್ಯೋಗಿಗಳು ಚೆನ್ನೈ, ಹೈದರಾಬಾದ್, ಪುಣೆ, ಮುಂಬಯಿ, ಬೆಂಗಳೂರು ಇತರ ಸ್ಥಳಗಳಿಂದ ನವದೆಹಲಿ ಬಂದು ಐಟಿ ಪ್ರೊಫೆಶನಲ್ ವೆಲ್ಫೇರ್ ಅಸೋಸಿಯೇಶನ್ (ಐಟಿಪಿಡಬ್ಲ್ಯೂಎ) ಭೇಟಿ ಮಾಡಿ ಚರ್ಚಿಸಿದ್ದಾರೆ. [ಸಾಮೂಹಿಕ ವಜಾ : ಕಂಪನಿ ನೌಕರರು ಅರಿಯಬೇಕಾದ್ದು]

ಟೆಕ್ಕಿಗಳ ಉದ್ಯೋಗ ರಕ್ಷಣೆಗೆ ಲಭ್ಯವಿರುವ ಕಾನೂನು ಭದ್ರತೆಗಳ ಕುರಿತು ಭಾರತದ ಮಾಜಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ವಿವರಣೆ ನೀಡಿದ್ದಾರೆ. ಏಕೆಂದರೆ ಸಾಫ್ಟ್ವೇರ್ ಕಂಪನಿಗಳು ಉದ್ಯೋಗಿಗಳ ವಜಾಕ್ಕೆ ನೀಡುತ್ತಿರುವ ಕಾರಣ "ಉದ್ಯೋಗಿಗಳ ಪುನರ್ ನಿರ್ಮಾಣ" ಎಂಬುದು. [ಉದ್ಯೋಗಿ ವಜಾಕ್ಕೆ ಕೋರ್ಟ್ ತಡೆ]
ಆಂದ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಐಟಿ ಉದ್ಯಮಗಳಿಗೆ ಅಂಗಡಿ, ಮಹಿಳೆ ಕಾಯ್ದೆ ಅನ್ವಯಿಸುತ್ತದೆ. ಆದರೆ, ಕರ್ನಾಟಕದಲ್ಲಿ ಉದ್ಯಮ ಕಾಯ್ದೆಯಡಿ ಬರುತ್ತದೆ. ಸಾಫ್ಟ್ವೇರ್ ಉದ್ಯೋಗಿಗಳಿಗೆ ಕೂಡ "ನೌಕರ" ಕಾಯ್ದೆ ಅನ್ವಯಿಸುತ್ತದೆ. [ಟಿಸಿಎಸ್ ವಿರುದ್ಧ ಉದ್ಯೋಗಿಗಳ ದಂಗೆ]
ವಜಾಗೊಳಿಸುವ ಉದ್ಯೋಗಿಗೆ ಪೂರ್ವದಲ್ಲಿಯೇ ನೋಟಿಸ್ ನೀಡಬೇಕು. ಇಲ್ಲಿಯವರೆಗೆ ಸಲ್ಲಿಸಿದ ಸೇವೆಗೆ ವರ್ಷಕ್ಕೆ 15 ದಿನಗಳಂತೆ ಪರಿಹಾರ ಧನ ನೀಡಬೇಕಾಗುತ್ತದೆ. ಆದರೆ, ಈ ಯಾವ ನಿಯಮವನ್ನೂ ಐಟಿ ಕಂಪನಿಗಳು ಪಾಲಿಸುತ್ತಿಲ್ಲ ಎನ್ನಲಾಗಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications