Get Updates
Get notified of breaking news, exclusive insights, and must-see stories!

ಕೊರೊನಾ ವೈರಸ್ ಕೊಲ್ಲುವಂತಾ ಬಿಸಿಲು ಬರುತ್ತೆ ಎಚ್ಚರ ಎಚ್ಚರ!

ನವದೆಹಲಿ, ಮೇ.25: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ನಡುವೆ ಭಾರತೀಯರಿಗೆ ಹೊಸ ಸವಾಲು ಎದುರಾಗಿದೆ. ಸೂರ್ಯನ ಬಿರು ಬಿಸಿಲಿನ ಹೊಡೆತಕ್ಕೆ ದೇಶದ ಹಲವು ರಾಜ್ಯಗಳು ತತ್ತರಿಸಿ ಹೋಗಲಿವೆ.

Recommended Video

      ಕುರಿ ಕಳೆದುಕೊಂಡ ಕುಟುಂಬಕ್ಕೆ 50 ಸಾವಿರ ಕೊಟ್ಟ ಕಾಂಗ್ರೆಸ್ ನಾಯಕ | Chitradurga | Oneindia Kannada

      ದೇಶದ ಹಲವೆಡೆ ಈ ವಾರದಲ್ಲಿ ಬಿಸಿಲಿನ ತಾಪಮಾನ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಂಗಳವಾರದಿಂದ ಉತ್ತರ ಭಾರತದ ರಾಜ್ಯಗಳಲ್ಲಿ ದಿನದ ಬಿಸಿಲಿನ ತಾಪಮಾನವು ಶೇ.46 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

      ನವದೆಹಲಿ, ಪಂಜಾಬ್, ಛತ್ತೀಸ್ ಗಢ್, ಹರಿಯಾಣ, ರಾಜಸ್ಥಾನ ರಾಜ್ಯಗಳನ್ನು ಕೆಂಪು ವಲಯ ಎಂದು ಘೋಷಿಸಲಾಗಿದೆ. ಇನ್ನೊಂದೆಡೆ ಉತ್ತರ ಪ್ರದೇಶವನ್ನು ಕಿತ್ತಳೆ ವಲಯ ಎಂದು ಹವಾಮಾನ ಇಲಾಖೆ ಹೇಳಿದೆ.

      ಶಾಖದ ಅಲೆಗಳನ್ನು ಎದುರಿಸುವುದು ಹೇಗೆ?

      ಶಾಖದ ಅಲೆಗಳನ್ನು ಎದುರಿಸುವುದು ಹೇಗೆ?

      - ನೀರಿನ ಬಳಕೆಯನ್ನು ಹೆಚ್ಚಿಸಿ, ದಿನಕ್ಕೆ ಎಂಟು ಗ್ಲಾಸ್ ನೀರನ್ನು ಸೇವಿಸಿ.

      - ಸೇವಿಸುವ ಆಹಾರದಲ್ಲಿ ಹಣ್ಣು ಮತ್ತು ತರಕಾರಿ ಅಂಶಗಳು ಇರಬೇಕು

      - ಕಡಿಮೆ ತೂಕ, ತಿಳಿ-ಬಣ್ಣದ, ಸಡಿಲವಾದ ಮತ್ತು ಸರಂಧ್ರ ಹತ್ತಿ ಬಟ್ಟೆಗಳನ್ನು ಧರಿಸಿ. ಬಿಸಿಲಿನಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, / ತ್ರಿ / ಟೋಪಿ, ಬೂಟುಗಳು ಅಥವಾ ಚಪ್ಪಲ್‌ಗಳನ್ನು ಬಳಸಬೇಕು.

      - ಸಂಚಾರದ ಸಂದರ್ಭದಲ್ಲಿ ನೀರನ್ನು ತೆಗೆದುಕೊಂಡು ಹೋಗಬೇಕು

      - ನಿಮ್ಮ ಮನೆಯನ್ನು ತಂಪಾಗಿರಿಸಿ, ಪರದೆಗಳು, ಕವಾಟುಗಳು ಅಥವಾ ಸೂರ್ಯನ ಶಾಖ ಬಳಸಿ ಮತ್ತು ರಾತ್ರಿಯಲ್ಲಿ ಕಿಟಕಿಗಳನ್ನು ತೆರೆಯಿರಿ.

      - ಗರ್ಭಿಣಿ ಕಾರ್ಮಿಕರು ಮತ್ತು ವೈದ್ಯಕೀಯ ಕಾರ್ಮಿಕರ ಸ್ಥಿತಿಯ ಬಗ್ಗೆ ಹೆಚ್ಚಿನ ಗಮನ ನೀಡಬೇಕು.

      - ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ನೀರು ನೀಡಿ.

      - ಸ್ಥಳೀಯ ಹವಾಮಾನದ ಬಗ್ಗೆ ಟಿವಿ, ರೇಡಿಯೋ ಮತ್ತು ಪತ್ರಿಕೆಗಳ ಮೂಲಕ ತಿಳಿದುಕೊಳ್ಳಿರಿ

      ಬೇಸಿಗೆಯಲ್ಲಿ ಈ ಕ್ರಮಗಳನ್ನು ಎಚ್ಚರಿಕೆ ವಹಿಸಿ

      ಬೇಸಿಗೆಯಲ್ಲಿ ಈ ಕ್ರಮಗಳನ್ನು ಎಚ್ಚರಿಕೆ ವಹಿಸಿ

      - ಬಿಸಿಲಿನ ಸಮಯದಲ್ಲಿ ಹೊರಗೆ ಹೋಗುವುದನ್ನು ಕಡಿಮೆ ಮಾಡಿ. ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆವರೆಗೂ ಆದಷ್ಟು ಮನೆಗಳಲ್ಲೇ ಇರಿ.

      - ಬಿಸಿಲಿನ ಸಂದರ್ಭದಲ್ಲಿ ಭಾರವಾದ ವಸ್ತುಗಳನ್ನು ಎತ್ತುವ ತಾಲೀಮು ಮಾಡುವುದು ಬೇಡ.

      - ಟೀ, ಕಾಫಿ, ಮದ್ಯಪಾನ ಹಾಗೂ ದೇಹವನ್ನು ನಿರ್ಜಲೀಕರಣಗೊಳಿಸುವ ಪಾನೀಯಗಳಿಂದ ದೂರವಿರಿ.

      - ವಾಹನಗಳನ್ನು ನಿಲ್ಲಿಸುವ ಪ್ರದೇಶದಲ್ಲಿ ಮಕ್ಕಳು ಮತ್ತು ಸಾಕುಪ್ರಾಣಿಗಳನ್ನು ಬಿಡಬಾರದು.

      - ಬಿಸಿಲಿನ ಹೊಡೆತದ ಬಗ್ಗೆ ತಿಳಿದುಕೊಳ್ಳುವುದಕ್ಕೆ ಏನು ಮಾಡಬೇಕು.

      ಬಿಸಿಲಿನಲ್ಲಿ ತಗ್ಲಾಗೊಂಡರೆ ಅನಾರೋಗ್ಯಕ್ಕೆ ತುತ್ತಾಗುವ ಭೀತಿ

      ಬಿಸಿಲಿನಲ್ಲಿ ತಗ್ಲಾಗೊಂಡರೆ ಅನಾರೋಗ್ಯಕ್ಕೆ ತುತ್ತಾಗುವ ಭೀತಿ

      - ಬಿಸಿಲಿನ ಹೊರತಕ್ಕೆ ಪಾರ್ಶ್ವವಾಯು ಹೊಡೆಯುವ ಭೀತಿ. ಜೊತೆಗೆ ಮೆದುಳಿಗೆ ಹಾನಿ ಉಂಟಾಗಲಿದ್ದು, ಆಂತರಿಕ ಅಂಗಾಂಗಗಳಿಗೆ ನೋವು ಕಾಣಿಸಿಕೊಳ್ಳುವ ಆತಂಕವಿದೆ.

      - ಬಿಸಿಲಿನ ನಡುವೆಯ ಪಾರ್ಶ್ವವಾಯು ಹೊಡೆತದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ

      - ಬಿಸಿಲನ ಪಾರ್ಶ್ವವಾಯುವಿನ ಮೊದಲ ಲಕ್ಷಣವೆಂದರೆ 104ಕ್ಕಿಂತ ಹೆಚ್ಚು ತಾಪಮಾನವನ್ನು ಹೊಂದಿರುತ್ತದೆ.

      - ತೀವ್ರ ತಲೆನೋವಿಗೆ ತುತ್ತಾಗುವ ಭೀತಿ

      - ಬಿಸಿಲು, ಒಳಗಿನ ಚರ್ಮ,

      - ಶಾಖದ ಹೊರತಾಗಿ ಬೆವರುವಿಕೆ ಕೊರತೆ

      - ಸ್ನಾಯು ಸೆಳೆತ ಹಾಗೂ ಸ್ನಾಯು ದೌರ್ಬಲ್ಯ

      - ವಾಕರಿಕೆ ಮತ್ತು ವಾಂತಿ

      - ತ್ವರಿತ ಮತ್ತು ಉಸಿರಾಟ ಸಮಸ್ಯೆ

      ತುರ್ತು ವೇಳೆಯಲ್ಲಿ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು

      ತುರ್ತು ವೇಳೆಯಲ್ಲಿ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು

      - ತುರ್ತು ವೈದ್ಯಕೀಯ ಸೇವೆಗಾಗಿ ಆಂಬ್ಯುಲೆನ್ಸ್ ‌ಗೆ ಕರೆ ಮಾಡಿ, ಸಂತ್ರಸ್ತರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಿರಿ ಇಲ್ಲವಾದಲ್ಲಿ ವಿಳಂಬವಾದಷ್ಟು ಅಪಾಯವಾಗಲಿದೆ.

      - ಅನಾರೋಗ್ಯ ಪೀಡಿತರಿಗೆ ದ್ರವವನ್ನು ನೀಡಬೇಡಿ.

      - ಅನಾರೋಗ್ಯ ಪೀಡಿತರನ್ನು ತಂಪಾದ ವಾತಾವರಣದಲ್ಲಿ ಇರಿಸಿ.

      - ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸ್ನಾನ ಅಥವಾ ಸ್ಪಂಜಿಂಗ್ ಮಾಡಿಸಬೇಕು.

      - ಫ್ಯಾನ್ ಮತ್ತು ಹವಾನಿಯಂತ್ರಿತ ವ್ಯವಸ್ಥೆಯನ್ನು ಬಳಸುವುದು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+