ಹಿಂದೂಗಳಿಗಿಂತ ಮೊದಲು ಭಾರತದಲ್ಲಿದ್ದವರು ಬೌದ್ಧರು; ಅಠಾವಳೆ
ನವದೆಹಲಿ, ಡಿಸೆಂಬರ್ 26; 'ಭಾರತಕ್ಕೆ ಹಿಂದೂಗಳು ಬರುವ ಮುನ್ನ ಭಾರತದಲ್ಲಿ ಇದ್ದವರು ಬೌದ್ಧರು' ಎಂದು ಕೇಂದ್ರ ಸಚಿವ ಹಾಗೂ ಆರ್ಪಿಐ ಪಕ್ಷದ ಅಧ್ಯಕ್ಷ ರಾಮದಾಸ್ ಅಠಾವಳೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ಆರ್ ಎಸ್ ಎಸ್ ಮುಖಂಡ ಮೋಹನ ಭಾಗವತ್ ಅವರು ಭಾರತದಲ್ಲಿ ಇರುವ 130 ಕೋಟಿ ಜನ ಹಿಂದೂಗಳೇ ಎಂದು ಹೇಳಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಅದು ಅವರ ಅಭಿಪ್ರಾಯ ಇರಬಹುದು. ಆದರೆ, ಒಂದು ಕಾಲಘಟ್ಟದಲ್ಲಿ ಬೌದ್ಧರು ಭಾರದಲ್ಲಿದ್ದವರು. ಹಿಂದೂಗಳು ಬಂದ ನಂತರ ಈ ದೇಶ ಹಿಂದೂತ್ವಕ್ಕೆ ಬದಲಾಯಿತು. ಎಲ್ಲರೂ ನಮ್ಮವರೇ ಎನ್ನುವ ಭಾವನೆ ಭಾಗವತ್ ಅವರದ್ದಾಗಿದ್ದರೆ ಸರಿ' ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಆರ್ ಎಸ್ ಎಸ್ ಮುಖಂಡ ಮೋಹನ ಭಾಗವತ್, 'ರಾಷ್ಟ್ರೀಯತೆ ನಿಲುವು ಹೊಂದಿರುವವ ಈ ದೇಶದ 130 ಕೋಟಿ ಜನ ಹಿಂದೂಗಳೇ' ಎಂದು ಹೇಳಿದ್ದರು.












Click it and Unblock the Notifications