Get Updates
Get notified of breaking news, exclusive insights, and must-see stories!

ಅಲೋಪತಿ ವಿಚಾರದಲ್ಲಿ ಸಾರ್ವಜನಿಕರನ್ನು ದಾರಿ ತಪ್ಪಿಸಬೇಡಿ: ರಾಮ್‌ದೇವ್‌ಗೆ ದೆಹಲಿ ಹೈಕೋರ್ಟ್ ತರಾಟೆ

ನವದೆಹಲಿ, ಆಗಸ್ಟ್‌ 18: ಕೋವಿಡ್-19 ಲಸಿಕೆ ಮತ್ತು ಅಲೋಪಥಿಕ್ ಔಷಧಿಗಳ ಬಗ್ಗೆ ಸಾರ್ವಜನಿಕರನ್ನು ದಾರಿತಪ್ಪಿಸುತ್ತಿರುವ ಯೋಗ ಗುರು ರಾಮ್‌ದೇವ್ ಅವರನ್ನು ದೆಹಲಿ ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದ್ದು, ಪತಂಜಲಿ ಉತ್ಪನ್ನ ಕರೋನಿಲ್ ಪರವಾಗಿ ಮಾತನಾಡುವಾಗ ಆಧಾರರಹಿತ ವಾಗ್ದಾನಗಳನ್ನು ನೀಡದಂತೆ ಸೂಚನೆ ನೀಡಿದೆ.

''ನಿಮ್ಮ ಅನುಯಾಯಿಗಳು ಮತ್ತು ಶಿಷ್ಯರು ಮತ್ತು ನಿಮ್ಮನ್ನು ನಂಬುವ ಜನರಿಗೆ ಸಲಹೆ ನೀಡಲು ನಿಮಗೆ ಅವಕಾಶವಿದೆ. ಆದರೆ ಅಧಿಕೃತವಾದದ್ದಕ್ಕಿಂತ ಹೆಚ್ಚಿನದನ್ನು ಹೇಳುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸಬೇಡಿ. ಆಯುರ್ವೇದದ ಉತ್ತಮ ಹೆಸರು ಮತ್ತು ಖ್ಯಾತಿಯನ್ನು ಉಳಿಸುವುದು ನನ್ನ ಕಾಳಜಿ. ಅಲೋಪತಿ ವಿರುದ್ಧ ಯಾರೂ ದಾರಿತಪ್ಪಿಸಬಾರದು ಎಂಬುದು ನನ್ನ ಗುರಿ'' ಎಂದು ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರು ರಾಮ್‌ದೇವ್‌ಗೆ ಹೇಳಿದ್ದಾರೆ.

ಕೋವಿಡ್ ವ್ಯಾಕ್ಸಿನೇಷನ್‌ಗಳಂತಹ ಮಧ್ಯಸ್ಥಿಕೆಗಳ ಪರಿಣಾಮಕಾರಿತ್ವವನ್ನು ಪ್ರಶ್ನಿಸುವ ಮೂಲಕ ರಾಮ್‌ದೇವ್ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ವೈದ್ಯರ ಸಂಘಗಳು ಸಲ್ಲಿಸಿದ ದಾವೆಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಅಭಿಪ್ರಾಯವನ್ನು ನೀಡಿದೆ. ಫಿರ್ಯಾದಿದಾರರ ಪರ ಹಾಜರಾದ ಹಿರಿಯ ವಕೀಲ ಅಖಿಲ್ ಸಿಬಲ್, ರಾಮ್‌ದೇವ್ ಅವರು ಕೋವಿಡ್ -19 ಗೆ ಕರೋನಿಲ್ ಚಿಕಿತ್ಸೆ ಎಂದು ಹೇಳಿರುವ ವಿವಿಧ ಹೇಳಿಕೆಗಳನ್ನು ಮತ್ತು ಅವರು ಲಸಿಕೆಗಳನ್ನು ಕಂಡುಹಿಡಿದಿದ್ದಾರೆ ಎಂದು ಹೇಳಲಾದ ವಿಡಿಯೊವನ್ನು ಉಲ್ಲೇಖಿಸಿದರು.

ಹೇಳಿಕೆ ನೀಡುವುದನ್ನು ನಿಲ್ಲಿಸುವಂತೆ ಸೂಚನೆ

ಹೇಳಿಕೆ ನೀಡುವುದನ್ನು ನಿಲ್ಲಿಸುವಂತೆ ಸೂಚನೆ

ಕೊರೊನಿಲ್‌ಗೆ ನೀಡಲಾದ ಪರವಾನಗಿಯು ಕೋವಿಡ್ -19 ಅನ್ನು ಉಲ್ಲೇಖಿಸುವುದಿಲ್ಲ ಮತ್ತು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ ಮಾತ್ರ ಹೇಳುತ್ತದೆ ಎಂದು ಸಿಬಲ್ ಪ್ರತಿಪಾದಿಸಿದರು. ಆಗ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಕರೋನಿಲ್ ಕುರಿತು ಯಾವುದೇ ಹೇಳಿಕೆ ನೀಡುವುದನ್ನು ನಿಲ್ಲಿಸುವಂತೆ ನ್ಯಾಯಾಲಯ ರಾಮ್‌ದೇವ್‌ಗೆ ಸೂಚಿಸಿತು. ಆದರೆ ಅದಕ್ಕೆ ರಾಮ್‌ದೇವ್ ಅವರ ವಕೀಲರು ಯಾವುದೇ ಸಮ್ಮತಿಯನ್ನು ನೀಡಲು ನಿರಾಕರಿಸಿದರು.

ವೈದ್ಯಕೀಯ ವಿಜ್ಞಾನದ ವೈಫಲ್ಯ ಎಂದ ರಾಮ್‌ದೇವ್‌

ವೈದ್ಯಕೀಯ ವಿಜ್ಞಾನದ ವೈಫಲ್ಯ ಎಂದ ರಾಮ್‌ದೇವ್‌

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಲಸಿಕೆ ಹಾಕಿಸಿಕೊಂಡಿದ್ದರೂ ಪಾಸಿಟಿವ್‌ ಆಗಿದ್ದಾರೆ. ಇದನ್ನು ವೈದ್ಯಕೀಯ ವಿಜ್ಞಾನದ ವೈಫಲ್ಯ ಎಂದು ಕರೆದಿರುವ ರಾಮ್‌ದೇವ್ ಅವರ ಇತ್ತೀಚಿನ ಹೇಳಿಕೆಯನ್ನು ಕೋರ್ಟ್‌ ಪ್ರಶ್ನಿಸಿದೆ. ಆಯುರ್ವೇದದ ಒಳ್ಳೆಯ ಹೆಸರು ನಾಶವಾಗುತ್ತಿರುವ ಬಗ್ಗೆ ನನಗೆ ಕಾಳಜಿ ಇದೆ. ನನಗೆ ಅದರ ಬಗ್ಗೆ ಕಾಳಜಿ ಇದೆ. ಇಲ್ಲಿ ಜನರನ್ನು ಹೆಸರಿಸಲಾಗುತ್ತಿದೆ. ಇದು ನಮ್ಮ ವಿದೇಶಗಳೊಂದಿಗಿನ ದೇಶದ ಸಂಬಂಧಗಳಿಗೆ ಅಂತಾರಾಷ್ಟ್ರೀಯ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ನ್ಯಾಯಮೂರ್ತಿ ಭಂಭಾನಿ ಹೇಳಿದರು.

ರಾಮ್‌ದೇವ್‌ ವಿರುದ್ಧ ಪ್ರಕರಣವನ್ನು ದಾಖಲು

ರಾಮ್‌ದೇವ್‌ ವಿರುದ್ಧ ಪ್ರಕರಣವನ್ನು ದಾಖಲು

ನಾನು ಲಸಿಕೆ ತೆಗೆದುಕೊಳ್ಳದಿರಲು ನಿರ್ಧರಿಸಿದೆ ಎಂದು ಹೇಳುವುದು ಒಂದು ವಿಷಯ. ಆದರೆ ಲಸಿಕೆಯನ್ನು ಮರೆತುಬಿಡಿ, ಇದು ನಿಷ್ಪ್ರಯೋಜಕವಾಗಿದೆ. ಆದರೆ ಇದನ್ನು ತೆಗೆದುಕೊಳ್ಳಿ ಎಂದು ಹೇಳುವುದು ಮತ್ತೊಂದು ವಿಷಯವಾಗಿದೆ ಎಂದು ನ್ಯಾಯಾಧೀಶರು ಟೀಕಿಸಿದರು. ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷದ ವಿರುದ್ಧ ಪ್ರಕರಣವನ್ನು ದಾಖಲಿಸಲಾಗುತ್ತಿದೆ ಎಂದು ರಾಮ್‌ದೇವ್ ವಕೀಲರು ಹೇಳೀದ ನಂತರ ನ್ಯಾಯಾಲಯವು ನ್ಯಾಯಾಲಯದಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.

ಬಾಬಾ ರಾಮ್‌ ದೇವ್‌ಗೆ ಯಾವುದೇ ಪದವಿ ಇಲ್ಲ

ಬಾಬಾ ರಾಮ್‌ ದೇವ್‌ಗೆ ಯಾವುದೇ ಪದವಿ ಇಲ್ಲ

ಕಳೆದ ವರ್ಷ ಜೂನ್‌ನಲ್ಲಿ ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಅಲೋಪಥಿಕ್ ಔಷಧಿಗಳ ಬಳಕೆಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದ ತನ್ನ ವಿರುದ್ದವಾಗಿ ದಾಖಲಾಗಿರುವ ಎಫ್‌ಐಆರ್‌ ಕೈಬಿಡುವಂತೆ ಸುಪ್ರೀಂ ಕೋರ್ಟ್‌ಗೆ ಯೋಗ ಗುರು ಬಾಬಾ ರಾಮ್‌ ದೇವ್‌ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿ ದೆಹಲಿ ಮೆಡಿಕಲ್ ಅಸೋಸಿಯೇಷನ್ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ರಾಮದೇವ್‌ ಯೋಗ ಗುರು ವೇಷ ಧರಿಸಿದ ಉದ್ಯಮಿ ಎಂದು ವಾಗ್ದಾಳಿ ನಡೆಸಿರುವ ದೆಹಲಿ ಮೆಡಿಕಲ್ ಅಸೋಸಿಯೇಷನ್, ಬಾಬಾ ರಾಮ್‌ ದೇವ್‌ಗೆ ಆಯುರ್ವೇದವನ್ನು ಅಭ್ಯಾಸ ಮಾಡಲು ಮತ್ತು ಔಷಧಿಗಳನ್ನು ಸೂಚಿಸಲು ಯಾವುದೇ ಪದವಿ ಅಥವಾ ಪರವಾನಗಿ ಇಲ್ಲ ಎಂದು ಹೇಳಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+