ವೈದ್ಯ ಕೊರೊನಾ ಸೋಂಕಿಗೆ ಬಲಿ: ಆಸ್ಪತ್ರೆ ವೆಚ್ಚ ಭರಿಸಿದ ಸಹೋದ್ಯೋಗಿಗಳು
ನವದೆಹಲಿ, ಜುಲೈ 27: ಕೊರೊನಾ ಸೋಂಕಿನಿಂದ ವೈದ್ಯರೊಬ್ಬರು ಮೃತಪಟ್ಟಿದ್ದು, ಆಸ್ಪತ್ರೆ ವೆಚ್ಚವನ್ನು ಸಹೋದ್ಯೋಗಿಗಳು ಭರಿಸಿದ್ದಾರೆ.
Recommended Video
ಡಾ. ಜೋಗಿಂದರ್ ಚೌದರಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕೊವಿಡ್ 19 ರೋಗಿಗಳ ಚಿಕಿತ್ಸೆಗಾಗಿಯೇ ಮೀಸಲಿಟ್ಟಿದ್ದರು. ಕಳೆದ ಒಂದು ತಿಂಗಳಿನಿಂದ ಕೊವಿಡ್ 19 ಜೊತೆ ಸತತ ಹೋರಾಟ ನಡೆಸಿ ಇದೀಗ ಸಾವನ್ನಪ್ಪಿದ್ದಾರೆ.
99 ವೈದ್ಯರ ಸಾವು: ಕೊರೊನಾ ವಾರಿಯರ್ಸ್ಗೆ IMA ರೆಡ್ ಅಲರ್ಟ್!
ಅವರು ಮೊದಲು ಲೋಕ ನಾಯಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟ ಬಳಿಕ ಸರ್ ಗಂಗಾ ರಾಮ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಅಲ್ಲಿ ಆಸ್ಪತ್ರೆ ವೆಚ್ಚ 3.4 ಲಕ್ಷವಾಗಿತ್ತು.
ಬಾಬಾ ಸಾಹೇಬ್ ಅಂಬೇಡ್ಕರ್ ವೈದ್ಯರ ಸಂಘವು 2.8 ಲಕ್ಷದಷ್ಟು ಹಣವನ್ನು ನೀಡಿದ್ದರು. ಬಳಿಕ ವೈದ್ಯನ ತಂದೆ ಕೂಡ ಸಹಾಯ ಮಾಡುವಂತೆ ಆಸ್ಪತ್ರೆಗೆ ಮನವಿ ಮಾಡಿದ್ದರು. ಶ್ರೀ ಗಂಗಾರಾಮ್ ಆಸ್ಪತ್ರೆಯು ವೈದ್ಯನ ತಂದೆಯ ಮನವಿಗೆ ಸ್ಪಂದಿಸಿ ಎಲ್ಲಾ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿತ್ತು.
ಕಳೆದ ವಾರ 42 ವರ್ಷದ ವೈದ್ಯ ಡಾ. ಜಾವೇದ್ ಅಲಿ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದರು. ಅವರ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ನೀಡುವುದಾಗಿ ಸತ್ಯೇಂದರ್ ಜೈನ್ ತಿಳಿಸಿದ್ದಾರೆ.